ಆ್ಯಪ್ನಗರ

ಜಾನಪದ ಕಲೆ ಉಳಿಸಿ ಬೆಳೆಸಲು ಸಲಹೆ

ಗದಗ: ಇಂದು ಬದಲಾಗುತ್ತಿರುವ ಜೀವನ ಶೈಲಿಯಲ್ಲಿನಾವು ಪೂರ್ವಜರು ಬಿಟ್ಟು ಹೋಗಿರುವ ಇತಿಹಾಸದ ಜತೆಗೆ ನಮ್ಮ ಬದುಕಿಗೆ ಹತ್ತಿರವಿರುವ ಜಾನಪದ ಕಲೆಗಳಾದ ಸೋಬಾನ ಪದ, ಹಂತಿಪದ, ಲಾವಣಿ ಪದ, ರಿವಾತಿ ಪದ, ಬೀಸುವ ಕಲ್ಲಿನ ಪದ, ಕುಟ್ಟುವ ಪದ, ಜೋಗುಳ ಪದ ಮತ್ತು ತ್ರಿಪದಿಯಲ್ಲಿಬರುವ ಜಾನಪದ ಹಾಡುಗಳನ್ನು ನಾವು ಇಂದು ಮರಿಯುತ್ತಿದ್ದೇವೆ ಎಂದು ಗೌಡಪ್ಪ ಬೋಮ್ಮಪ್ಪನವರ ಹೇಳಿದರು.

Vijaya Karnataka 10 Dec 2019, 5:00 am
ಗದಗ: ಇಂದು ಬದಲಾಗುತ್ತಿರುವ ಜೀವನ ಶೈಲಿಯಲ್ಲಿನಾವು ಪೂರ್ವಜರು ಬಿಟ್ಟು ಹೋಗಿರುವ ಇತಿಹಾಸದ ಜತೆಗೆ ನಮ್ಮ ಬದುಕಿಗೆ ಹತ್ತಿರವಿರುವ ಜಾನಪದ ಕಲೆಗಳಾದ ಸೋಬಾನ ಪದ, ಹಂತಿಪದ, ಲಾವಣಿ ಪದ, ರಿವಾತಿ ಪದ, ಬೀಸುವ ಕಲ್ಲಿನ ಪದ, ಕುಟ್ಟುವ ಪದ, ಜೋಗುಳ ಪದ ಮತ್ತು ತ್ರಿಪದಿಯಲ್ಲಿಬರುವ ಜಾನಪದ ಹಾಡುಗಳನ್ನು ನಾವು ಇಂದು ಮರಿಯುತ್ತಿದ್ದೇವೆ ಎಂದು ಗೌಡಪ್ಪ ಬೋಮ್ಮಪ್ಪನವರ ಹೇಳಿದರು.
Vijaya Karnataka Web advice on saving and cultivating folk art
ಜಾನಪದ ಕಲೆ ಉಳಿಸಿ ಬೆಳೆಸಲು ಸಲಹೆ


ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿಜೇನುಗೂಡು ಜಾನಪದ ತಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿನಡೆದ ಪ್ರಾಯೋಜಿತ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಸುಗ್ಗಿ ಸಂದರ್ಭದಲ್ಲಿರಾಶಿ ಮಾಡುತ್ತಾ ಲಾವಣಿ ಹಾಡು ಹಾಡುವುದೆಂದರೆ ರೈತನಿಗೆ ಎಲ್ಲಿಲ್ಲದ ಸಂತೋಷ. ಆದರಿಂದ್ದ ಇಂತಹ ಶ್ರೇಷ್ಠ ಸಾಹಿತ್ಯವಾದ ಜಾನಪದ ಕಲೆಯನ್ನು ಉಳಿಸಿ ಬೆಳಸಬೇಕೆಂದು ಸಲಹೆ ನೀಡಿದರು.

ಮೈಲಾರಪ್ಪ ಜಕ್ಕಮ್ಮನವರ ಮಾತನಾಡಿ, ಇಂದು ಯುವ ಜನಾಂಗವು ಆಧುನಿಕ ಭರಾಟೆಯಲ್ಲಿಮುಳುಗಿ ಹೋಗಿ ಜನಪದ ಕಲೆ ಮರೆಯುತ್ತಿರುವುದು ತುಂಬಾ ಬೇಸರ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೇನುಗೂಡು ಜಾನಪದ ಕಲಾ ತಂಡದ ಅಧ್ಯಕ್ಷ ಬಸವರಾಜ ಈರಣ್ಣವರ ಮಾತನಾಡಿ, ಕಲೆ, ಸಂಗೀತ, ಸಾಹಿತ್ಯ, ಲಲಿತ ಕಲೆ, ಶಿಲ್ಪ ಕಲೆ ವಾಸ್ತುಶಿಲ್ಪ ಈ ಎಲ್ಲಾಕಲಾ ಪ್ರಕಾರಗಳಿಗೆ ಸರಕಾರ ಹೆಚ್ಚು ಒತ್ತು ಕೊಟ್ಟು ಕಲೆಯ ಮತ್ತು ಕಲಾವಿದರ ಉಳಿವಿಗಾಗಿ ಹಲವಾರು ಯೋಜನೆ ರೂಪಿಸಿದೆ. ಇದರ ಸದುಪಯೋಗವನ್ನು ಕಲಾವಿದರು ಪಡೆದುಕೊಳ್ಳಬೇಕೆಂದು ಹೇಳಿದರು.

ನಂತರ ನಡೆದ ಸಾಂಸ್ಕೃತಿ ಸಂಜೆ ಕಾರ್ಯಕ್ರಮದಲ್ಲಿಬಿ.ಎಫ್‌.ಈರಣ್ಣವರ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಗೌಡಪ್ಪ ಬೋಮ್ಮಪ್ಪನವರ ಮತ್ತು ಸಂಗಡಿಗರು ಜನಪದ ಹಾಡು ಮತ್ತು ತತ್ವಪದ ಹಾಡಿದರು.

ಜಾನಪದ ಕಲಾವಿದ ಮನೋಹರ ಜಕ್ಕಮ್ಮನವರ, ಜಯಂತ ಸವಡಿ, ಅಶೋಕ ವಾಲ್ಮೀಕಿ, ಚಂದ್ರು ಜಕ್ಕಮ್ಮನವರ, ರಾಘವೇಂದ್ರ ಮಿಶಣ್ಣವರ ಇದ್ದರು.

ಬಾಬು ಚಲವಾದಿ ಪ್ರಾರ್ಥಿಸಿದರು. ಪರಶುರಾಮ ಹುರಕನವರ ಸ್ವಾಗತಿ, ನಿರೂಪಿಸಿದರು. ವಿಜಯ ಗಡಿಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ