ಆ್ಯಪ್ನಗರ

ಗ್ರಾಮೀಣ ಸಂಸ್ಕೃತಿ ಉಳಿಸಿ ಬೆಳೆಸಲು ಸಲಹೆ

ಡಂಬಳ : ಸಾಮಾಜಿಕ ಜಾಲತಾಣದಿಂದ ವೇಗವಾಗಿ ಬೆಳೆಯುತ್ತಿರುವ ನಗರೀಕರಣದಿಂದ ಗ್ರಾಮೀಣ ಸಂಸ್ಕೃತಿಯ ಬದುಕು ವಿನಾಶದ ಹಾದಿಯಲ್ಲಿದ್ದು ಬಯಲಾಟದಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಗ್ರಾಪಂ ಸದಸ್ಯ ಗೋಣಿಬಸಪ್ಪ ಕೊರ್ಲಹಳ್ಳಿ ಅಭಿಪ್ರಾಯಪಟ್ಟರು.

Vijaya Karnataka 18 Jun 2019, 5:00 am
ಡಂಬಳ : ಸಾಮಾಜಿಕ ಜಾಲತಾಣದಿಂದ ವೇಗವಾಗಿ ಬೆಳೆಯುತ್ತಿರುವ ನಗರೀಕರಣದಿಂದ ಗ್ರಾಮೀಣ ಸಂಸ್ಕೃತಿಯ ಬದುಕು ವಿನಾಶದ ಹಾದಿಯಲ್ಲಿದ್ದು ಬಯಲಾಟದಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಗ್ರಾಪಂ ಸದಸ್ಯ ಗೋಣಿಬಸಪ್ಪ ಕೊರ್ಲಹಳ್ಳಿ ಅಭಿಪ್ರಾಯಪಟ್ಟರು.
Vijaya Karnataka Web advice on saving rural culture
ಗ್ರಾಮೀಣ ಸಂಸ್ಕೃತಿ ಉಳಿಸಿ ಬೆಳೆಸಲು ಸಲಹೆ


ಡಂಬಳ ಗ್ರಾಮದಲ್ಲಿ ಡಾ.ಬಿ ಆರ್‌ ಅಂಬೇಡ್ಕರ ಜಯಂತಿ ಅಂಗವಾಗಿ ಶ್ರೀ ಕೆಂಚಮ್ಮ ದೇವಿ ಹಾಗೂ ಶ್ರೀ ಮೈಲಾರಲಿಂಗೇಶ್ವರ ನಾಟ್ಯ ಸಂಘ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಆಶ್ರಯದಲ್ಲಿ ನಡೆದ ಸಂಗಣ್ಣ ಬಾಳಣ್ಣ ಎಂಬ ಬಯಲಾಟ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳು ನಮ್ಮ ಕುಟುಂಬದ ಪ್ರತಿರೂಪವಾಗಿದ್ದು ಜನರಿಗೆ ನೇರವಾಗಿ ಮುಟ್ಟುವ ಮಾಧ್ಯಮವಾಗಿದೆ. ಮಾನಸಿಕ ನೆಮ್ಮದಿಗೂ ಸಹಕಾರಿಯಾಗಿದೆ. ನಾಟಕದಲ್ಲಿ ಬರುವ ವಿವಿಧ ಪಾತ್ರಗಳಲ್ಲಿನ ಸಂದೇಶದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳು ಸಂಪ್ರದಾಯ, ಕಲೆ, ನಾಟಕ, ದೊಡ್ಡಾಟಗಳ ತವರು ಮನೆಗಳಾಗಿದ್ದು ಸರ್ಕಾರ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕೆಂದರು.

ರಾಜ್ಯ ಮಾದಿಗ ಮಿಸಲಾತಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಮೋಹನ ಅಲಮೇಲಕರ, ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ ವ್ಹಿ ಹಿರೇಮಠ ಮಾತನಾಡಿ, ಒತ್ತಡದ ಬದುಕಿನಿಂದಾಗಿ ಸಂಬಂಧ, ಬಾಂಧವ್ಯಗಳು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಹಿರಿಯರನ್ನು ಗೌರವಿಸುವ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಜೀವಂತವಾಗಿವೆ. ಹೀಗಾಗಿ ನಾಟಕಗಳಿಂದ ಮನಸ್ಸು ಪರಿವರ್ತನೆಯಾಗಬೇಕು. ಬದುಕು ಸುಧಾರಣೆಯತ್ತ ಸಾಗಬೇಕು. ಅಂದಾಗ ಬಯಲಾಟ ನಾಟಕಗಳಿಗೆ ಮಹತ್ವ ಬರುತ್ತದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಬೀರಪ್ಪ ಎಸ್‌ ಬಂಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವ್ಹಿ ಎಸ್‌ ಯರಾಸಿ, ಗ್ರಾಪಂ ಅಧ್ಯಕ್ಷ ಬಸವರಾಜ ಎಂ ಗಂಗಾವತಿ, ಸೋಮಣ್ಣ ಗುಡ್ಡದ, ಮರಿಯಪ್ಪ ಸಿದ್ದಣ್ಣವರ, ದೇವಪ್ಪ ತಳಗೇರಿ, ಹನಮಪ್ಪ ಸೋಮನಕಟ್ಟಿ, ಜಂಧಿಸಾಬ್‌ ಸರ್ಕವಾಸ, ಮರಿತೆಮ್ಮಪ್ಪ ಆದಮ್ಮನವರ, ನೀಲಪ್ಪ ಗೌಡಣ್ಣವರ, ಗವಿಸಿದ್ದಪ್ಪ ಬಿಸನಳ್ಳಿ, ಅಶೋಕ ಹಡಪದ, ಎಂ ಎಂ ಬಂಡಿ ಗ್ರಾಮದ ಹಿರಿಯರು ಸಂಘದ ಯುವಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ