ಆ್ಯಪ್ನಗರ

ಗೋಶಾಲೆ ಪ್ರಯೋಜನ ಪಡೆಯಲು ರೈತರಿಗೆ ಸಲಹೆ

ಗದಗ: ರಾಜ್ಯದಲ್ಲಿನ ಬರ ಪರಸ್ಥಿತಿ ಹಿನ್ನೆಲೆಯಲ್ಲಿ ಬರಪೀಡಿತವೆಂದು ಘೋಷಿಸಲಾಗಿರುವ ಜಿಲ್ಲೆಯ 5 ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ ಒಂದರಂತೆ ಗೋಶಾಲೆ ತೆರೆದು ಮುಂದಿನ ಆದೇಶದವರೆಗೆ ನಿರ್ವಹಿಸಲು ಉಚ್ಚ ನ್ಯಾಯಾಲಯದ ಆದೇಶದಂತೆ ಹಾಗೂ ಕಾರ್ಯದರ್ಶಿಗಳು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸೂಚಿಸಿದೆ.

Vijaya Karnataka 20 Aug 2019, 5:00 am
ಗದಗ: ರಾಜ್ಯದಲ್ಲಿನ ಬರ ಪರಸ್ಥಿತಿ ಹಿನ್ನೆಲೆಯಲ್ಲಿ ಬರಪೀಡಿತವೆಂದು ಘೋಷಿಸಲಾಗಿರುವ ಜಿಲ್ಲೆಯ 5 ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ ಒಂದರಂತೆ ಗೋಶಾಲೆ ತೆರೆದು ಮುಂದಿನ ಆದೇಶದವರೆಗೆ ನಿರ್ವಹಿಸಲು ಉಚ್ಚ ನ್ಯಾಯಾಲಯದ ಆದೇಶದಂತೆ ಹಾಗೂ ಕಾರ್ಯದರ್ಶಿಗಳು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸೂಚಿಸಿದೆ.
Vijaya Karnataka Web advice to farmers to take advantage of goshalaya
ಗೋಶಾಲೆ ಪ್ರಯೋಜನ ಪಡೆಯಲು ರೈತರಿಗೆ ಸಲಹೆ


ತಾಲೂಕಿನ ಕುರ್ತಕೋಟಿಯಲ್ಲಿ, ರೋಣದ ಹೊಳೆಆಲೂರಿನ ನವಗ್ರಾಮದಲ್ಲಿ, ಶಿರಹಟ್ಟಿ ತಾಲೂಕಿನ ಶೆಟ್ಟಿ ಕೆರೆಯ ಗ್ರಾಮದ ಕೆರೆಯ ಹತ್ತಿರ, ಮುಂಡರಗಿ ತಾಲೂಕಿನ ಡಂಬಳ ದುರ್ಗಮ್ಮನ ಗುಡಿಯ ಹತ್ತಿರ, ನರಗುಂದದ ಬೈರನಹಟ್ಟಿ ಗ್ರಾಮದಲ್ಲಿ ಗೋಶಾಲೆ ತೆರೆಯಲಾಗಿದೆ. ಗೋಶಾಲೆಯಲ್ಲಿನ ಪ್ರತಿ ರಾಸುವಿಗೆ ಉಚಿತವಾಗಿ ಪ್ರತಿ ನಿತ್ಯ 6 ಕೆಜಿ ಒಣ ಮೇವು ಅಥವಾ 18 ಕೆಜಿ ಹಸಿರು ಮೇವು ಹಾಗೂ 1 ಕೆಜಿ ಪಶು ಆಹಾರ , ಕುಡಿಯುವ ನೀರು ಮತ್ತು ಪಶುವೈದ್ಯಕೀಯ ಸೌಲಭ್ಯ ನೀಡಲಾಗುವುದು. ಮೇವು ಕೊರತೆ ಇರುವ ರೈತರು ಗೋಶಾಲೆಗಳ ಪ್ರಯೋಜನೆ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ