ಆ್ಯಪ್ನಗರ

ಕೃಷಿ ಭಾಗ್ಯ ಯೋಜನೆ ರೈತರಿಗೆ ವರದಾನ

ಮುಳಗುಂದ: ರಾಜ್ಯ ಸರಕಾರ ಜಾರಿಗೆ ಮಾಡಿದ ಕೃಷಿ ಭಾಗ್ಯ ಯೋಜನೆ ರೈತರಿಗೆ ವರದಾನವಾಗಿದ್ದು ಕೃಷಿ ಇಲಾಖೆ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದು ಎಲ್ಲ ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮುಳಗುಂದ ಸಹಾಯಕ ಕೃಷಿ ಅಧಿಕಾರಿ ಎಂ.ಬಿ.ಸುಂಕಾಪೂರ ಹೇಳಿದರು.

Vijaya Karnataka 26 Aug 2019, 5:00 am
ಮುಳಗುಂದ: ರಾಜ್ಯ ಸರಕಾರ ಜಾರಿಗೆ ಮಾಡಿದ ಕೃಷಿ ಭಾಗ್ಯ ಯೋಜನೆ ರೈತರಿಗೆ ವರದಾನವಾಗಿದ್ದು ಕೃಷಿ ಇಲಾಖೆ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದು ಎಲ್ಲ ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮುಳಗುಂದ ಸಹಾಯಕ ಕೃಷಿ ಅಧಿಕಾರಿ ಎಂ.ಬಿ.ಸುಂಕಾಪೂರ ಹೇಳಿದರು.
Vijaya Karnataka Web GDG-25MUL2


ಅವರು ಪಟ್ಟಣದಲ್ಲಿ ರೈತರ ಜಮಿನಿನಲ್ಲಿ ನಿರ್ಮಿಸಿದ ಸುಮಾರು 50ಕ್ಕೂ ಹೆಚ್ಚು ಕೃಷಿ ಹೊಂಡವು ಸತತ ಮಳೆಯಿಂದ ಭರ್ತಿಯಾಗಿದ್ದು ದೇವಪ್ಪ ಬಸಪ್ಪ ಸಿದ್ದನಗೌಡರ ಹೋಲದಲ್ಲಿ ಕೃಷಿಹೊಂಡಕ್ಕೆ ಬಾಗಿನ ಅರ್ಪಿಸಿ ಮಾತನಾಡಿದರು. ಹಿಂಗಾರು ಮಳೆ ಕೊರತೆಯಾದಾಗ ಈ ಕೃಷಿ ಹೊಂಡದಿಂದ ಸುಮಾರು ಎರಡು ಸಾರಿ ನೀರನ್ನು ಬೆಳೆಗಳಿಗೆ ಒದಗಿಸಬಹುದು ಇದರಿಂದ ತೇಂವಾಶ ಕೊರತೆ ನಿಗಿಸುತ್ತದೆ. ಆದ್ದರಿಂದ ಎಲ್ಲ ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳುವುದರಿಂದ ಜಮಿನಿನಲ್ಲಿ ತೇಂವಾಶ ಪ್ರಮಾಣವೂ ಹೆಚ್ಚಾಗುತ್ತದೆ ಎಂದರು.

ಐದು ಜನ ಮುತೈದಿಯರಿಂದ ಗಂಗಾ ಪೂಜೆ ನೆರೆವೇರಿದ ನಂತರ ಮುತೈದಿಯರಿಂದ ಬಾಗಿನ ಸಮರ್ಪಣೆ ಮಾಡಿದರು. ಪ್ರದೀಪ ದೊಡ್ಡವಾಡ.ಶೇಖಪ್ಪ ಸಿದ್ದನಗೌಡರ, ಈರಪ್ಪ ನಾಗಾವಿ, ವೀರಭದ್ರಪ್ಪ ಸೊರಟೂರ, ಪುಷ್ಪಾ ನಾಗಾವಿ, ಪಾರಮ್ಮಾ ಪಟ್ಟಣಶೇಟ್ಟಿ, ಸಾವಿತ್ರಿಮ್ಮ ಮುಸ್ಕಿನಭಾವಿ, ವಿಜಯಾ ಪಟ್ಟಣಶೇಟ್ಟಿ, ಲಕ್ಷ ್ಮವ್ವ ಸಿದ್ದನಗೌಡರ, ಮಹಾದೇವಿ ಸಿದ್ದನಗೌಡರ, ಕಂಠೇವ್ವ ಸಿದ್ದನಗೌಡರ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ