ಆ್ಯಪ್ನಗರ

ಎರಡು ದತ್ತು ಮಗು ಹಸ್ತಾಂತರ

ಗದಗ: ಬೆಟಗೇರಿಯ ಸೇವಾಭಾರತಿ ಟಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿಪೋಷಣೆಯಲ್ಲಿರುವ ಎರಡು ಗಂಡು ಮಗುವನ್ನು ಗುರುವಾರ ದತ್ತುಪೂರ್ವ ಪೋಷಕತ್ವಕ್ಕೆ ಮಕ್ಕಳಿಲ್ಲದ ದಂಪತಿಗಳಿಗೆ ಹಸ್ತಾಂತರಿಸಲಾಯಿತು.

Vijaya Karnataka 30 Aug 2019, 5:00 am
ಗದಗ: ಬೆಟಗೇರಿಯ ಸೇವಾಭಾರತಿ ಟಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿಪೋಷಣೆಯಲ್ಲಿರುವ ಎರಡು ಗಂಡು ಮಗುವನ್ನು ಗುರುವಾರ ದತ್ತುಪೂರ್ವ ಪೋಷಕತ್ವಕ್ಕೆ ಮಕ್ಕಳಿಲ್ಲದ ದಂಪತಿಗಳಿಗೆ ಹಸ್ತಾಂತರಿಸಲಾಯಿತು.
Vijaya Karnataka Web GDG-29RUDRAGOUD12


ರೋಟರಿ ಕ್ಲಬ್‌ನ ಅಧ್ಯಕ್ಷ ರಾಜು ಗುಡಿಮನಿ, ಸುಜಾತಾ ಗುಡಿಮನಿ ದಂಪತಿ ಶಿವಮೊಗ್ಗದ ಮಕ್ಕಳಿಲ್ಲದಂಪತಿಗಳ ಮಡಿಲಿಗೆ ಮಗುವನ್ನು ಹಸ್ತಾಂತರಿಸಿ ಮಗುವನ್ನು ಚೆನ್ನಾಗಿ ಪೋಷಣೆ ಮಾಡಿ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ಆದರ್ಶ ವ್ಯಕ್ತಿಯನ್ನಾಗಿಸಬೇಕೆಂದರು.

ವಿದ್ಯಾದಾನ ಶಿಕ್ಷಣ ಸಂಸ್ಥೆಯ ಚೇರಮನ್‌ ಧಿಹುಯಿಲಗೋಳ ಮಾತನಾಡಿ, ಸೇವಾಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿರುವದನ್ನು ಶ್ಲಾತ್ರಘಿಘಿಸಿ ತಾವೂ ಸಂಸ್ಥೆಯ ಸಹಾಯ ಮಾಡುವ ಭರವಸೆ ನೀಡಿ ಮಗುವಿಗೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷೆ ಮಲ್ಲಿಕಾರ್ಜುನ ಬೆಲ್ಲದ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿ ಸರ್ವರ ಸಹಕಾರ ಕೋರಿದರು. ಸುಭಾಸ ಬಬಲಾದಿ, ನಾಗವೇಣಿ ಕಟ್ಟಿಮನಿ, ಶ್ರೀಧರ ಉಡುಪಿ, ಪ್ರಲ್ಹಾದರಾಜ ಕಾರ್ಕಳ, ಬಸವರಾಜ ನಾಗಲಾಪೂರ, ಸುಧೀಂದ್ರ ಘೋರ್ಪಡೆ, ಚೇತನ ಮೇರವಾಡೆ, ಗುರುಸಿದ್ದಪ್ಪ ಕೊಣ್ಣೂರ, ಪ್ರಾ.ಮಾರುತಿ ಕಟ್ಟಿಮನಿ ಇದ್ದರು. ಉಮಾ ಚನ್ನಪ್ಪನವರ ಪ್ರಾರ್ಥಿಸಿದರು. ಮಂಜುನಾಥ ಚನ್ನಪ್ಪನವರ ಸ್ವಾಗತಿಸಿ, ಪರಿಚಯಿಸಿದರು. ಚನ್ನಯ್ಯ ಬೊಮ್ಮನಳ್ಳಿ ನಿರೂಪಿಸಿದರು. ರಾಜೇಶ ಖಟವಟೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ