ಆ್ಯಪ್ನಗರ

ಶರಣರ ವಚನಗಳು ಸಾರ್ವಕಾಲಿಕ :ಸಿದ್ಧರಾಮ ಶ್ರೀ

ಗದಗ: ಶರಣರ ಅನುಭಾವದ ನುಡಿಗಳು ವಚನರೂಪದಲ್ಲಿವೆ. ಈ ವಚನಗಳ ಸಾರ ಅಥೈರ್‍ಸಿಕೊಂಡು ಆಚರಣೆಯಲ್ಲಿ ತೊಡಗಿದರೆ ಬದುಕು ಸುಂದರವಾಗುತ್ತದೆ.

Vijaya Karnataka 25 Jul 2019, 5:00 am
ಗದಗ: ಶರಣರ ಅನುಭಾವದ ನುಡಿಗಳು ವಚನರೂಪದಲ್ಲಿವೆ. ಈ ವಚನಗಳ ಸಾರ ಅಥೈರ್‍ಸಿಕೊಂಡು ಆಚರಣೆಯಲ್ಲಿ ತೊಡಗಿದರೆ ಬದುಕು ಸುಂದರವಾಗುತ್ತದೆ.
Vijaya Karnataka Web all rights reserved siddaramam sri
ಶರಣರ ವಚನಗಳು ಸಾರ್ವಕಾಲಿಕ :ಸಿದ್ಧರಾಮ ಶ್ರೀ


ಅಚಲವಾದ ನಂಬಿಕೆ, ನಿಷ್ಠೆಯಿಂದ ಮಾತ್ರ ಭಗವಂತನನ್ನು ಕಾಣಬಹುದು. ಸಮಾಜ ಇಂದಿನ ಎಲ್ಲ ಸಮಸ್ಯೆಗೆ ಶರಣರ ಕಾಯಕ, ದಾಸೋಹದ ಪ್ರಜ್ಞೆ ಉತ್ತರವಾಗಿದೆ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ಎಡೆಯೂರು ಜ. ತೋಂಟದಾರ್ಯ ಮಠದಲ್ಲಿ ನಡೆದ 2442 ನೇ ಶಿವಾನುಭವದಲ್ಲಿ ಮಾತನಾಡಿದರು.

ಮಹಾಶರಣ ಕುರುಬ ಗೊಲ್ಲಾಳೇಶ್ವರರು ತಮ್ಮ ಕುರಿ ಕಾಯುವ ಕಾಯಕದಲ್ಲಿಯೇ ಪರವಸ್ತು ಕಂಡವರು. ಆಧ್ಯಾತ್ಮಿಕ ಔನ್ನತ್ಯ ಕೇವಲ ಮೇಲ್ವರ್ಗದವರಿಗೆ ಅಲ್ಲ. ಅದನ್ನು ಎಲ್ಲರೂ ಸಾಧಿಸಬಹುದು ಎಂಬುದನ್ನು ಶರಣರು ಪ್ರತಿಪಾದಿಸಿ ತೋರಿಸಿದರು ಎಂದರು.

ಮಹಾಶರಣ ಕುರುಬ ಗೊಲ್ಲಾಳೇಶ್ವರ ವಚನಸಾರ ಎಂಬ ವಿಷಯವಾಗಿ ಬಸವತತ್ವ ಚಿಂತಕಿ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿ, ಕುರಿಯ ಹಿಕ್ಕೆಯನ್ನೇ ಲಿಂಗವನ್ನಾಗಿ ಪೂಜಿಸಿ, ಅನುಭಾವ ಹೊಂದಿ, ಭಕ್ತಿಯ ಪರಾಕಾಷ್ಠೆ ಮೆರೆದ ಗೊಲ್ಲಾಳೇಶ್ವರರು ತಮ್ಮ ವಚನಗಳ ಮೂಲಕ ಭಕ್ತಿ ಮಾರ್ಗ ತೋರಿದ್ದಾರೆ. ತನ್ನ ಕುರಿ ಕಾಯಕದಲ್ಲಿ ಬರುವ ವಸ್ತುಗಳನ್ನೇ ರೂಪಕಗಳನ್ನಾಗಿ ಬಳಸಿ ವಚನಗಳಲ್ಲಿ ವಿಚಾರಗಳನ್ನು ಹೇಳಿದ ಪರಿ ಬೆರಗುಗೊಳಿಸುವಂತಹುದ್ದು. ವರ್ಗ, ವರ್ಣ, ಜಾತಿ ಬೇಧವನ್ನು ಅಳಿಸಿ ಸರ್ವರೂ ಸಮಾನರು ಎಂದು ಸಾರಿ ಶರಣರು ಕಲ್ಯಾಣ ರಾಜ್ಯದ ಪರಿಕಲ್ಪನೆ ಹುಟ್ಟು ಹಾಕಿದ್ದಾರೆ ಎಂದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, ಮನುಷ್ಯರೆಲ್ಲ ಒಂದೇ ಎಂಬ ಭಾವವನ್ನು ಎಲ್ಲ ಶರಣರು, ದಾರ್ಶನಿಕರು, ದಾಸರು ಹೇಳಿದ್ದಾರೆ. ಆದರೆ ಇಂದು ರಾಜಕೀಯ ವ್ಯವಸ್ಥೆಯ ಪರಿಣಾಮವಾಗಿ ಜಾತಿಯ ಭಾವನೆಗಳು ಅಧಿಕವಾಗಿದೆ. ಇದನ್ನು ತೊಡೆದು ಹಾಕದಿದ್ದರೆ ಸಾಮಾಜಿಕ ಶಾಂತಿ ಸಾಧ್ಯವಾಗುವುದಿಲ್ಲ ಎಂದರು.

ಹುಲ್ಲೂರಿನ ಮುತ್ತಪ್ಪ ಮಡಿವಾಳರ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ಧರ್ಮಗ್ರಂಥ ಪಠಣ ಕಾಲೇಶ್ವರ ಅಶೋಕ ಹಾದಿ ಹಾಗೂ ವಚನ ಚಿಂತನ ಕಾರ್ತಿಕ ಹಗೆದಾಳ ನೆರವೇರಿಸಿದರು.

ಗಿರಿಜಕ್ಕ ಪಾಟೀಲ, ಮಹದೇವಪ್ಪ ಚನ್ನಬಸಪ್ಪ ಹುಲ್ಲತ್ತಿ, ಪರಶುರಾಮ ಚನ್ನಪ್ಪ ನಾಯ್ಕರ, ವಿವೇಕಾನಂದಗೌಡ ಪಾಟೀಲ, ಸಂಗಮೇಶ ದುಂದೂರ, ಶಶಿಧರ ಬೀರನೂರ, ಡಾ. ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಪ್ರಕಾಶ ಅಸುಂಡಿ, ವೀರಣ್ಣ ಗೊಡಚಿ ಇದ್ದರು.ಪ್ರೊ.ಬಾಹುಬಲಿ ಜೈನರ್‌ ನಿರೂಪಿಸಿದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ