ಆ್ಯಪ್ನಗರ

ಶಿಕ್ಷಣ ಇಲಾಖೆಯಲ್ಲಿಭ್ರಷ್ಟಾಚಾರ ಆರೋಪ

ರೋಣ : ವಿಶ್ವವನ್ನು ನಡುಗಿಸಿದ ಕೊರೊನಾ ನಿಯಂತ್ರಣಕ್ಕೆ ಸರಕಾರಿ ವೈದ್ಯರು ಹಾಗೂ ಸಿಬ್ಬಂದಿ ಒಳ್ಳೆಯ ಕಾರ್ಯ ಮಾಡಿದ್ದು. ತಾಪಂ ಸಾಮಾನ್ಯ ಸಭೆಯಲ್ಲಿಸರ್ವ ಸದಸ್ಯರು ಡಾ.ಬಿ.ಎಸ್‌.ಭಜಂತ್ರಿಯವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Vijaya Karnataka 19 Jun 2020, 5:00 am
ರೋಣ : ವಿಶ್ವವನ್ನು ನಡುಗಿಸಿದ ಕೊರೊನಾ ನಿಯಂತ್ರಣಕ್ಕೆ ಸರಕಾರಿ ವೈದ್ಯರು ಹಾಗೂ ಸಿಬ್ಬಂದಿ ಒಳ್ಳೆಯ ಕಾರ್ಯ ಮಾಡಿದ್ದು. ತಾಪಂ ಸಾಮಾನ್ಯ ಸಭೆಯಲ್ಲಿಸರ್ವ ಸದಸ್ಯರು ಡಾ.ಬಿ.ಎಸ್‌.ಭಜಂತ್ರಿಯವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Vijaya Karnataka Web allegations of corruption in education department
ಶಿಕ್ಷಣ ಇಲಾಖೆಯಲ್ಲಿಭ್ರಷ್ಟಾಚಾರ ಆರೋಪ


ಸಾಮಾನ್ಯ ಸಭೆಯಲ್ಲಿಸದಸ್ಯ ಪ್ರಭು ಮೇಟಿ ಕೊರೊನಾ ನಿಯಂತ್ರಣ ಕುರಿತು ಚರ್ಚಿಸುವ ಸಂದರ್ಭದಲ್ಲಿಎಲ್ಲಸದಸ್ಯರು ಆರೋಗ್ಯ ಇಲಾಖೆಯ ವೈದ್ಯರುಗಳಿಗೆ,ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮೆಚ್ಚುಗೆ ಸೂಚಿಸಿದರು.

ಡಾ. ಬಿ.ಎಸ್‌.ಭಜಂತ್ರಿ ಮಾತನಾಡಿ, ಸರಕಾರದ ಆದೇಶದ ಅನ್ವಯ ಕೊರೊನಾ ನಿಯಂತ್ರಣಕ್ಕೆ ಎಲ್ಲರೀತಿಯ ಅಗತ್ಯ ಕ್ರಮ ತೆಗೆದುಕೊಂಡಿದ್ದು. ಮುಂಜಾಗೃತ ಕ್ರಮವಾಗಿ ಶಹರ ಹಾಗೂ ಗ್ರಾಮೀಣ ಭಾಗಗಳಲ್ಲಿಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜನರಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ ಎಂದರು.

ಸದಸ್ಯ ಪ್ರಭು ಮೇಟಿ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿಭ್ರಷ್ಟಾಚಾರ ನಡೆದಿದ್ದು, 40ಲಕ್ಷ ರೂ. ವೆಚ್ಚದಲ್ಲಿಶಾಲೆಗಳಲ್ಲಿಸಾಮಾಗ್ರಿ ಖರೀದಿಸಲು ಸೂಚನೆ ನೀಡಲಾಗಿದ್ದು.ಇದರ ಅನ್ವಯ ಪ್ರತಿ ಶಾಲೆಗಳಿಗೆ 2 ಲಕ್ಷ ರೂ. ಮಂಜೂರಿ ಮಾಡಲಾಗಿದೆ. ಕೆಲ ಶಾಲೆಗಳಲ್ಲಿಸಾಮಾಗ್ರಿ ಖರೀದಿಸುವ ವಿಚಾರದಲ್ಲಿಭಾರಿ ಪ್ರಮಾಣದ ಗೋಲ್‌ ಮಾಲ್‌ ನಡೆದಿದೆ.ಇದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಪಂ ಇಒರವರಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದ್ದು, ಸದಸ್ಯರು ಗಮನಕ್ಕೆ ತಾರದೆ ಬಜೆಟ್‌ ಮಂಡಿಸಲಾಗಿದೆ.

ಎಂದು ಸದಸ್ಯ ಪ್ರಭು ಮೇಟಿ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರಾದ ಅಂದಾನೇಶ ದೊಡ್ಡಮೇಟಿ, ಶಿದ್ಲಿಂಗಪ್ಪ ಯಾಳಗಿ, ಮಹ್ಮದ ತರಪದಾರ ಧ್ವನಿಗೂಡಿಸುವ ಮೂಲಕ ಇಒ ಸಂತೋಷ ಪಾಟೀಲ ವಿರುದ್ದ ಹರಿಹಾಯುತ್ತಿದ್ದಂತೆ ಮಧ್ಯ ಪ್ರವೇಶಿಸಿದ ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯ್ಕ ಎಲ್ಲವೂ ಸರಿ ಮಾಡಿಸ್ತಿನಿ ಎಂದಿದ್ದು ಸಂಶಯಕ್ಕೆ ಕಾರಣವಾಯಿತಾದರೂ ಸಹ ಪಟ್ಟು ಬಿಡದ ಸದಸ್ಯರು ಸಭೆಯಿಂದ ನಿರ್ಗಮಿಸುವುದಾಗಿ ತಿಳಿಸಿದರು.ಆಗ ಇಒ ಸಂತೋಷ ಪಾಟೀಲ ತಪ್ಪಾಗಿದೆ ಮುಂದಿನ ದಿನಗಳಲ್ಲಿಸರಿಪಡಿಸಿಕೊಳ್ಳಲಾಗುವುದು ಎಂದರು.

ಅಧ್ಯಕ್ಷೆ ಪ್ರೇಮವ್ವ ನಾಯ್ಕ, ಇಒ ಸಂತೋಷ ಪಾಟೀಲ,ಯೋಜನಾಧಿಕಾರಿ ನಿಲಗುಂದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ