ಆ್ಯಪ್ನಗರ

ನೀರು ಸರಬರಾಜು ಕಚೇರಿ ಜಪ್ತಿ

ಗದಗ : ಗುತ್ತಿಗೆದಾರನ ಬಾಕಿ ಬಿಲ್‌ ಪಾವತಿಸದ ಹಿನ್ನೆಲೆಯಲ್ಲಿ ಗದಗ ನಗರದಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಶನಿವಾರ ಜಪ್ತಿಯಾಗಿದೆ.

Vijaya Karnataka 4 Nov 2018, 5:00 am
ಗದಗ : ಗುತ್ತಿಗೆದಾರನ ಬಾಕಿ ಬಿಲ್‌ ಪಾವತಿಸದ ಹಿನ್ನೆಲೆಯಲ್ಲಿ ಗದಗ ನಗರದಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಶನಿವಾರ ಜಪ್ತಿಯಾಗಿದೆ.
Vijaya Karnataka Web news/gadaga
ನೀರು ಸರಬರಾಜು ಕಚೇರಿ ಜಪ್ತಿ


ಜಿಲ್ಲಾ ನ್ಯಾಯಾಲಯದ ಆದೇಶದಂತೆ ಮುಳಗುಂದ ರಸ್ತೆಯಲ್ಲಿರುವ ಕಚೇರಿಯಲ್ಲಿನ ಕಂಪ್ಯೂಟರ್‌, ಪ್ರಿಂಟರ್‌, ಟೇಬಲ್‌, ಝರಾಕ್ಸ್‌ ಯಂತ್ರ ಸಹಿತ ಅನೇಕ ವಸ್ತುಗಳನ್ನು ವಕೀಲರ ಸಮ್ಮುಖದಲ್ಲಿ ಗುತ್ತಿಗೆದಾರರು ಜಪ್ತಿ ಮಾಡಿಕೊಂಡರು.

1992ರಲ್ಲಿ ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆ ಸಂಬಂಧ ಮುಂಡರಗಿ ಮತ್ತು ಡಂಬಳದಲ್ಲಿ ಪಂಪಹೌಸ್‌ ಮತ್ತು ಸಂಪ್‌ ನಿರ್ಮಾಣ ಮಾಡಲಾಗಿತ್ತು. ಆ ಕಾಮಗಾರಿಯ 43 ಲಕ್ಷ ರೂ. ಪಾವತಿಸದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ವಿರುದ್ಧ ಪ್ರಥಮ ದರ್ಜೆ ಗುತ್ತಿಗೆದಾರರ ಎಸ್‌.ವಿ. ಪಟ್ಟಣಶೆಟ್ಟಿ ಅವರು 8 ವರ್ಷಗಳ ಹಿಂದೆ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಗುತ್ತಿಗೆದಾರರಿಗೆ ನೀಡಬೇಕಿದ್ದ ಹಣ ನೀಡುವಂತೆ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಗೆ ಆದೇಶಿತ್ತು. 48 ಲಕ್ಷ ರೂ. ಜತೆಗೆ 8 ವರ್ಷದ ಬಡ್ಡಿ ಸಹಿತ ಒಟ್ಟು 52 ಲಕ್ಷ ರೂ. ಪಾವತಿಸುವಂತೆ ಜಿಲ್ಲಾ ನ್ಯಾಯಾಲಯ ಸೂಚಿಸಿತ್ತು. ಆದರೆ ನಿಗದಿತ ಸಮಯದಲ್ಲಿ ಹಣ ನೀಡಲು ವಿಫಲವಾದ ಕಾರಣ, ನಗರ ನೀರು ಸರಬರಾಜು ಕಚೇರಿ ಜಪ್ತಿಗೆ ಆದೇಶಿಸಿತು.

ಗುತ್ತಿಗೆದಾರರ ಪರ ವಾದ ಮಂಡಿಸಿದ್ದ ವಕೀಲರಾದ ಆರ್‌.ಕೆ. ಶಾಂತಗೇರಿ, ಎಸ್‌. ಆರ್‌. ಶಾಂತಗೇರಿ ಅವರು ತಮ್ಮ ಕಕ್ಷಿದಾರ ಪಟ್ಟಣಶೆಟ್ಟಿ ಅವರೊಂದಿಗೆ ಶನಿವಾರ ಕಚೇರಿಗೆ ಆಗಮಿಸಿ, ಕೋರ್ಟ್‌ ಆದೇಶದಂತೆ ಕಂಪ್ಯೂಟರ್‌ ಸಹಿತ ಅನೇಕ ವಸ್ತುಗಳನ್ನು ವಶಪಡಿಸಿಕೊಂಡರು. ಈ ಸಂದರ್ಭದಲ್ಲಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ