ಆ್ಯಪ್ನಗರ

ಪುರಾತನ ವೈದ್ಯಕೀಯ ಪದ್ಧತಿ ಶ್ರೇಷ್ಠ

ಗದಗ: ನಗರದ ಡಾ.ಪಂ.ಪುಟ್ಟರಾಜ ಬಡಾವಣೆಯಲ್ಲಿಶಿವ ಪಾರ್ವತಿ ಯೋಗಾ ಫೌಂಡೇಶನ್‌ನಿಂದ ಯೋಗ ಚಟುವಟಿಕೆ ಕಾರ್ಯಕ್ರಮದಲ್ಲಿಆಕ್ಯೂಪ್ರೇಶರ ಥೇರೆಪಿ ಕುರಿತು ಕಾರ್ಯಾಗಾರ ಜರುಗಿತು.

Vijaya Karnataka 24 Jan 2020, 7:07 pm
ಗದಗ: ನಗರದ ಡಾ.ಪಂ.ಪುಟ್ಟರಾಜ ಬಡಾವಣೆಯಲ್ಲಿಶಿವ ಪಾರ್ವತಿ ಯೋಗಾ ಫೌಂಡೇಶನ್‌ನಿಂದ ಯೋಗ ಚಟುವಟಿಕೆ ಕಾರ್ಯಕ್ರಮದಲ್ಲಿಆಕ್ಯೂಪ್ರೇಶರ ಥೇರೆಪಿ ಕುರಿತು ಕಾರ್ಯಾಗಾರ ಜರುಗಿತು.
Vijaya Karnataka Web ancient medical practices are classic
ಪುರಾತನ ವೈದ್ಯಕೀಯ ಪದ್ಧತಿ ಶ್ರೇಷ್ಠ


ಅನುಷಾ ಮುದಗಲ್ಲಮಾತನಾಡಿ, ಅಕ್ಯೂಪ್ರೇಶರ್‌ ಥೆರೆಪಿ ದಕ್ಷಿಣ ಕೋರಿಯಾದ ವಿಜ್ಞಾನಿ ಪ್ರೊ.ಪಾರ್ಕರ್ಜಿ ಅವರಿಂದ ಅಭಿವೃದ್ಧಿಪಡೆದ ಚಿಕಿತ್ಸೆ. ಇದು ಸ್ವಯಂ ಹಾಗೂ ಔಷಧ ರಹಿತ ಮತ್ತು ನೋವು ರಹಿತ ಚಿಕಿತ್ಸೆಯಾಗಿದೆ. ಇದು ಮೂಲ ಕೋರಿಯಾ ದೇಶದ ಚಿಕಿತ್ಸೆ. ಇದನ್ನು ಕೋರಿಯಾ, ಚೀನಾ, ಜಪಾನದಂತಹ ದೇಶಗಳಲ್ಲಿಪ್ರಖ್ಯಾತಿ ಪಡೆದುಕೊಂಡಿದೆ. ನಮ್ಮ ದೇಶದ ಋುಷಿಮುನಿಗಳು ಕೂಡಾ ಈ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. ಈ ಚಿಕಿತ್ಸೆಯಿಂದ ದೇಹದ ಎಲ್ಲಅಂಗಾಗುಗಳಿಗೆ ಚೈತನ್ಯ ನೀಡಿ ಆರೋಗ್ಯ ವೃದ್ಧಿಸುತ್ತದೆ ಎಂದರು.

ನಮ್ಮ ದೇಹದಲ್ಲಿಪ್ರಾಣಶಕ್ತಿ ಮತ್ತು ಜೈವಿಕ ವಿದ್ಯುತ್‌ ಶಕ್ತಿಗಳು ಪಂಚಮಹಾಭೂತಗಳಲ್ಲಿವ್ಯತ್ಯಾಸವಾದಾಗ ಅನಾರೋಗ್ಯ ಉಂಟಾಗುತ್ತದೆ. ಈ ಚಿಕಿತ್ಸಾ ಪದ್ಧತಿ ಸುಮಾರು 5000 ವರ್ಷಗಳ ಪುರಾತನ ಚಿಕಿತ್ಸೆಯಾಗಿದೆ. ದಕ್ಷಿಣ ಕೋರಿಯಾದವರು ಕಂಡು ಹಿಡಿದ ಈ ವಿದ್ಯೆ ಇಂದಿಗೂ ಕೂಡಾ ಜಗತ್ತಿನ ತುಂಬಾ ಪಸರಿಸಿಕೊಂಡಿದೆ. ಒಳ್ಳೆಯ ಆಹಾರ ಪದ್ಧತಿ, ದೈಹಿಕ ವ್ಯಾಯಾಮ ಧನಾತ್ಮಕ ಚಿಂತನೆ ಹಾಗೂ ನಂಬಿಕೆ, ವಿಶ್ವಾಸಗಳಿದ್ದರೆ ಮಾತ್ರ ಚಿಕಿತ್ಸೆ ಫಲಕಾರಿಯಾಗಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ ಅಧ್ಯಕ್ಷತೆ ವಹಿಸಿ, ಇಂತಹ ಚಿಕಿತ್ಸೆಗಳಿಂದ ದೇಹದ ಯಾವುದೇ ಭಾಗಗಳಿಗೆ ಅಡ್ಡ ಪರಿಣಾಮಕಾರಿ ಇಲ್ಲ. ಔಷಧ ರಹಿತ ಚಿಕಿತ್ಸೆ ಯೋಗ ಹೇಗೆ ಇದು ಕೂಡಾ ಔಷಧ ರಹಿತ ಚಿಕಿತ್ಸೆಯಾಗಿದೆ ಎಂದರು. ಶಿವಪಾರ್ವತಿ ಯೋಗ ಫೌಂಡೇಶನ್‌ ಕಾರ್ಯದರ್ಶಿ ಎಸ್‌.ಎಸ್‌. ಹಿರೇಮಠ, ಸುರೇಶ ಓಲಿ, ಉಮಾ ಮೇಟಿ, ಸುಧಾ ಪಾಟೀಲ, ಪ್ರಕಾಶ ಬಂಡಿ, ಡಾ.ಬಿ.ಬಿ. ಕನಜ, ಗಂಗಪ್ಪ ಗೊರವರ, ಸುಧಾ ಪಾಟೀಲ, ಗಿರಿಜಾ ಬಳ್ಳೊಳ್ಳಿ, ಸಿದ್ದಣ್ಣ ಜವಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ