ಆ್ಯಪ್ನಗರ

ಅನ್ನದಾನ ಶ್ರೀಗಳು ನಾಡಿನ ಶ್ರೇಷ್ಠ ದಾರ್ಶನಿಕರು

ರೋಣ: ಮನುಷ್ಯನ ಬದುಕಿಗೆ ಬೇಕಾಗುವ, ಆತನ ಜೀವನಕ್ಕೆ ಅನುಕೂಲಕರವಾದ ಹಾಗೂ ಪ್ರೇರಣೆ ನೀಡುವ ತತ್ವಸಿದ್ಧಾಂತ, ಶಿಕ್ಷ ಣ ಸಂಸ್ಥೆಗಳ ಮೂಲಕ ಶೈಕ್ಷ ಣಿಕ ಕ್ರಾಂತಿ ಎಬ್ಬಿಸಿ ಈ ನಾಡಿಗೆ ಬಹುದೊಡ್ಡ ಕೊಡುಗೆ ಕೊಟ್ಟ ಲಿಂ.ಅನ್ನದಾನ ಶ್ರೀಗಳು ಶ್ರೇಷ್ಠ ದಾರ್ಶನಿಕರೆನಿಸಿದ್ದಾರೆ ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ನಿಯೋಜಿತ ಉತ್ತಾರಾಧಿಕಾರಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

Vijaya Karnataka 9 Aug 2019, 5:00 am
ರೋಣ: ಮನುಷ್ಯನ ಬದುಕಿಗೆ ಬೇಕಾಗುವ, ಆತನ ಜೀವನಕ್ಕೆ ಅನುಕೂಲಕರವಾದ ಹಾಗೂ ಪ್ರೇರಣೆ ನೀಡುವ ತತ್ವಸಿದ್ಧಾಂತ, ಶಿಕ್ಷ ಣ ಸಂಸ್ಥೆಗಳ ಮೂಲಕ ಶೈಕ್ಷ ಣಿಕ ಕ್ರಾಂತಿ ಎಬ್ಬಿಸಿ ಈ ನಾಡಿಗೆ ಬಹುದೊಡ್ಡ ಕೊಡುಗೆ ಕೊಟ್ಟ ಲಿಂ.ಅನ್ನದಾನ ಶ್ರೀಗಳು ಶ್ರೇಷ್ಠ ದಾರ್ಶನಿಕರೆನಿಸಿದ್ದಾರೆ ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ನಿಯೋಜಿತ ಉತ್ತಾರಾಧಿಕಾರಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
Vijaya Karnataka Web GDG-7 RON 4


ತಾಲೂಕಿನ ಜಕ್ಕಲಿ ಗ್ರಾಮದ ಶ್ರೀ ಪಾಲಕಿ ಮಂಟಪದಲ್ಲಿ ಶ್ರೀ ಬನಶಂಕರಿ ದೇವಿ ಭಜನಾ ಸಂಘ ಹಾಗೂ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಶ್ರೀ ಗುರು ಅನ್ನದಾನೇಶ್ವರರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷ ಣಿಕ ತತ್ವ ಸಿದ್ಧಾಂತ ಮತ್ತು ಮಾನವೀಯ ಮೌಲ್ಯಗಳ ಚೇತನಕ್ಕೆ ಕಾರಣಿಕರ್ತರಾದ ಲಿಂ.ಅನ್ನದಾನ ಶ್ರೀಗಳು, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡುತ್ತಿದ್ದರು. ಸಾಧಕರಿಗೆ ಸಾಧನೆ ಮಾರ್ಗ ತೋರಿಸಿ ತಮ್ಮಲ್ಲಿರುವ ಜ್ಞಾನ ಹಾಗೂ ಸಾಹಿತ್ಯ, ಶಿಕ್ಷ ಣವನ್ನು ಸದ್ಬಕ್ತರಿಗೆ ನೀಡಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದರು

ಜೀವನದ ಶ್ರೇಯಸ್ಸಿಗೆ ಧರ್ಮವೇ ದಾರಿ ದೀಪ. ಸುಖ, ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮಪ್ರಜ್ಞೆ ಅವಶ್ಯಕವಾದುದು. ಮನುಷ್ಯನಲ್ಲಿನ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕು ಮೂಡಿಸಲು ಭಗವಂತನ ಧ್ಯಾನ, ಗುರುವಿನ ಸ್ಮರಣೆ ಹಾಗೂ ಭಕ್ತಿ ಮಾರ್ಗದಿಂದ ಸಾಧ್ಯ ಎಂದರು.

ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಕಾಯಕ ದಾಸೋಹ ತತ್ವಗಳನ್ನು ಈ ನಾಡಿಗೆ ಕೊಟ್ಟ ಲಿಂ.ಅನ್ನದಾನ ಶ್ರೀಗಳು ತತ್ವ ಸಿದ್ದಾಂತ, ಮಠಗಳು ಧಾರ್ಮಿಕ ಕೇಂದ್ರಗಳ ಜತೆಗೆ ಶಿಕ್ಷ ಣ, ವಸತಿ, ದಾಸೋಹ ನೀಡುವಲ್ಲಿ ಕರ್ನಾಟಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಠ ಮಾನ್ಯಗಳ ಪಾತ್ರ ಪ್ರಮುಖವಾಗಿದೆ ಎಂದರು.

ನಂತರ ಅನ್ನಸಂತರ್ಪಣೆ ಜರುಗಿತು. ದರೂರು ಕೊಟ್ಟೂರು ದೇಶಿಕರು, ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಸೋಮಸಮುದ್ರದ ನಾಗನಾಥ ಸ್ವಾಮೀಜಿ, ಬೂದಗುಂಪದ ವಿಜಯ ಪ್ರಭು ಸ್ವಾಮೀಜಿ, ಕುರಗೋಡದ ಪರ್ವತ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ರುದ್ರಪ್ಪ ದೊಡ್ಡಮೇಟಿ, ಮುತ್ತಣ್ಣ ಬಂಡಿ, ಅಶೋಕ ಮೇಟಿ, ರಾಜೇಸಾಬ ಜಿಡ್ಡಿಮನಿ, ಈರಪ್ಪ ಚಿನ್ನೂರ, ಮಂಜುನಾಥ ಮುಗಳಿ, ವಿನಾಯ ಆರೇರ್‌, ಮುನ್ನಾಸಾಹೇಬ ಜಕ್ಕಲಿ, ಬಸವರಾಜ ಮಡಿವಾಳರ, ಚಿದಾನಂದ ರೋಣದ, ರಮೇಶ ಆದಿ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ