ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸಿಗೆ ಮನವಿ

ಗದಗ: ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇತ್ತೀಚೆಗೆ ತಾಲೂಕಿನ ಹಾತಲಗೇರಿ ಗ್ರಾಪಂ ಅಧ್ಯಕ್ಷರು, ಸಿಬ್ಬಂದಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 5 Jul 2019, 5:00 am
ಗದಗ: ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇತ್ತೀಚೆಗೆ ತಾಲೂಕಿನ ಹಾತಲಗೇರಿ ಗ್ರಾಪಂ ಅಧ್ಯಕ್ಷರು, ಸಿಬ್ಬಂದಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web appeal to dc to fulfill the demand
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸಿಗೆ ಮನವಿ


ತಾಲೂಕಿನ ಹಾತಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಇದುವರೆಗೂ ರುದ್ರಭೂಮಿ ಜಾಗಾ ನಿಗದಿ ಮಾಡಿಲ್ಲ. ಆದ್ದರಿಂದ ಹಾತಲಗೇರಿ ಗ್ರಾಮದಲ್ಲಿನ ಒಂದು ಎಕರೆ 28 ಗುಂಟೆ ಜಾಗೆಯನ್ನು ಸರಕಾದಿಂದ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಆದರೆ ಜಾಗೆ ನೀಡಿದ ಮಾಲೀಕರಿಗೆ ಹಣ ನೀಡಿ ಖರೀದಿಸಲು ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ ಕೂಡಲೇ ರುದ್ರಭೂಮಿಗೆ ಜಾಗೆ ನೀಡಿದ ರೈತರಿಗೆ ಹಣ ನೀಡಬೇಕು. ಜತೆಗೆ ನಾಗಸಮುದ್ರ ರಸ್ತೆ, ಹಾತಲಗೇರಿ ಗ್ರಾಮದಿಂದ ಸಂಭಾಪುರ ರಸ್ತೆ, ಹಾತಲಗೇರಿ ಗ್ರಾಮದಿಂದ ಅಡವಿಸೋಮಾಪುರ ರಸ್ತೆ, ಹರ್ಲಾಪುರ ರಸ್ತೆ, ನರಸಾಪುರ ಗ್ರಾಮದಿಂದ ಗದ್ದಿ ಹಳ್ಳದವರೆಗೆ, ಸಂಭಾಪುರ ಗ್ರಾಮದಿಂದ ಇಚ್ಚಲಹಳ್ಳದವರೆಗೆ ರಸ್ತೆ ಅಭಿವೃದ್ಧಿ ಪಡಿಸಲು ಮನವಿ ಮೂಲಕ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.

ಹಾತಲಗೇರಿ ಗ್ರಾಪಂ ಅಧ್ಯಕ್ಷ ಎಂ.ಎನ್‌.ಜಾಲಮ್ಮನವರ, ಉಪಾಧ್ಯಕ್ಷ ಕೆ.ಎಸ್‌.ಬಂಡಿ, ಎಸ್‌.ಕೆ.ಬಿದರನ್ನವರ, ಎಸ್‌.ಟಿ.ಗದಗ, ಎಸ್‌.ಆರ್‌.ಪೂಜಾರ, ಆರ್‌.ಡಿ.ಹೂವಣ್ಣವರ, ಎಲ್‌.ಬಿ. ಬಿದರಹಳ್ಳಿ, ವಿ.ಆರ್‌.ನಾಗನೂರ, ಎನ್‌.ಬಿ.ದೇಸಾಯಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ