ಆ್ಯಪ್ನಗರ

ಮೂರ್ತಿಗಳ ಭಗ್ನಗೊಳಿಸಿದವರ ಬಂಧಿಸಿ

ಗದಗ: ಬೆಟಗೇರಿಯ ಹಳೆ ಬನಶಂಕರಿ ದೇವಸ್ಥಾನದ ಆವರಣದಲ್ಲಿರುವ ಬನ್ನಿಮಹಾಂಕಾಳಿ ಹಾಗೂ ನಾಗದೇವರ ಮೂರ್ತಿಗಳನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೇವಾಂಗ ಸಮಾಜದಿಂದ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಿದರು.

Vijaya Karnataka 11 Sep 2019, 5:00 am
ಗದಗ: ಬೆಟಗೇರಿಯ ಹಳೆ ಬನಶಂಕರಿ ದೇವಸ್ಥಾನದ ಆವರಣದಲ್ಲಿರುವ ಬನ್ನಿಮಹಾಂಕಾಳಿ ಹಾಗೂ ನಾಗದೇವರ ಮೂರ್ತಿಗಳನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೇವಾಂಗ ಸಮಾಜದಿಂದ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಿದರು.
Vijaya Karnataka Web 10RUDRAGOUD9_25
ಬೆಟಗೇರಿ ಹಳೆ ಬನಶಂಕರಿ ದೇವಸ್ಥಾನದಲ್ಲಿದೇವರ ಮೂರ್ತಿಗಳನ್ನು ಭಗ್ನಗೊಳಿಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದೇವಾಂಗ ಸಮಾಜದ ಪ್ರಮುಖರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಇತ್ತೀಚೆಗೆ ಕಿಡಗೇಡಿಗಳು ದೇವಸ್ಥಾನದಲ್ಲಿಅಕ್ರಮವಾಗಿ ಪ್ರವೇಶಿಸಿ, ದೇವರ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಈ ಕೂಡಲೇ ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಬೇಕು. ಮತ್ತೊಮ್ಮೆ ಈ ರೀತಿಯ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜೇಂದ್ರ ಭರದ್ವಾಡ, ಪ್ರೇಮನಾಥ ಬಣ್ಣದ, ಶ್ರೀನಿವಾಸ ಹುಬ್ಬಳ್ಳಿ, ಬಸಪ್ಪ ಗುತ್ತಿ, ಮನೋಹರ ಹೊನ್ನಳ್ಳಿ, ಎನ್‌.ಟಿ.ಕಂಗೂರಿ, ಕೆ.ಎಸ್‌. ಭೋಜಗಾರ, ಚನ್ನಪ್ಪ ನೆಗಳೂರ, ದಶರಥ ಕೊಳ್ಳಿ, ಎ.ಜಿ. ಹೊನ್ನಳ್ಳಿ, ಪಿ.ಟಿ. ನೀಲಗುಂದ, ಆರ್‌.ಎಚ್‌. ನಂದರಗಿ, ಮರಿಯಪ್ಪ ಕೌಜಗಾರ, ರೇವಣಸಿದ್ದಪ್ಪ ಹಾಳಕೇರಿ, ಮಹದೇವಪ್ಪ ಗಂಜಿ, ಬಸವರಾಜ, ಮುದಗಲ್ಲ, ಬಸವರಾಜ ಗಂಜಿ, ಜಿ.ಎಸ್‌. ಬಾಲೆಹೊಸೂರ, ಚಿದಾನಂದ ಕಾಲವಾಡ, ಈರಣ್ಣ ಹುಳ್ಳಿ, ಎಂ.ಜಿ. ಬೆಲ್ಲದ ಇದ್ದರು.

ದೇವಸ್ಥಾನಕ್ಕೆ ಎಚ್ಕೆ ಭೇಟಿ :
ಇಲ್ಲಿನ ಪುರಾತನ ಹಳೇಬನಶಂಕರಿ ದೇವಸ್ಥಾನದ ಆವರಣದಲ್ಲಿರುವ ಪ್ರತಿಷ್ಠಾಪಿಸಿರುವ ಬನ್ನಿಮಹಾಂಕಾಳಿ ಹಾಗೂ ನಾಗಪ್ಪ ಮೂರ್ತಿಗಳನ್ನು ಶಾಸಕ ಎಚ್‌. ಕೆ. ಪಾಟೀಲ ವೀಕ್ಷಣೆ ಮಾಡಿದರು. ದೇವರ ವಿಗ್ರಹವನ್ನು ಭಗ್ನ ಮಾಡಿರುವ ಆರೋಪಿಯನ್ನು ಬಂಧಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗುರಣ್ಣ ಬಳಗಾನೂರ, ಮೋಹನ ಹೊನ್ನಳ್ಳಿ, ಮಾಜಿ ನಗರಾಧ್ಯಕ್ಷ ಸುರೇಶ ಕಟ್ಟಿಮನಿ, ಪ್ರಭು ಬುರಬುರೆ, ದಶರಥ ಕೊಳ್ಳಿ, ಅಶೋಕ ಹೊನ್ನಳ್ಳಿ, ಚಿನ್ನಪ್ಪ ನೆಗಳೂರ ಪ್ರೇಮನಾಥ ಭರದ್ವಾಡ, ಮಲ್ಲಿಕಾರ್ಜುನ ಬೆಲ್ಲದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ