ಆ್ಯಪ್ನಗರ

ಹುತಾತ್ಮ ಯೋಧರಿಗೆ ನೆರವಿನ ಹಸ್ತ

ಕೊಣ್ಣೂರು : ಸ್ಥಳೀಯ ವಿರಕ್ತಮಠದ ಡಾ.ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ನಾನಾ ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳ ಆಶ್ರಯದಲ್ಲಿ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಯೋಧರ ಕುಟುಂಬಗಳಿಗೆ ಧನ ಸಂಗ್ರಹ ಹಾಗೂ ಜನ ಜಾಗೃತಿ ರಾರ‍ಯಲಿ ನಡೆಯಿತು.

Vijaya Karnataka 24 Feb 2019, 5:00 am
ಕೊಣ್ಣೂರು : ಸ್ಥಳೀಯ ವಿರಕ್ತಮಠದ ಡಾ.ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ನಾನಾ ಸಂಘ ಸಂಸ್ಥೆಗಳು ಹಾಗೂ ಶಾಲಾ ಕಾಲೇಜುಗಳ ಆಶ್ರಯದಲ್ಲಿ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಯೋಧರ ಕುಟುಂಬಗಳಿಗೆ ಧನ ಸಂಗ್ರಹ ಹಾಗೂ ಜನ ಜಾಗೃತಿ ರಾರ‍ಯಲಿ ನಡೆಯಿತು.
Vijaya Karnataka Web GDG-23 KNR PHTO 1A
ಕೊಣ್ಣೂರು ವಿರಕ್ತವåಠದ ಡಾ.ಶಿವಕುಮಾರ ಸ್ವಾಮೀಜಿ ನೇತೃತ್ವವದಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ ಧನ ಸಂಗ್ರಹ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.


ನಿವೃತ್ತ ಸೈನಿಕ ಶಂಕರ ವಾಲಿ ಮಾತನಾಡಿ, ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಗುಂಡಿಗೆ ವೀೕರಮರಣ ಹೊಂದಿದ ಭಾರತೀಯ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳುವುದು ಅಷ್ಟೇ ಅಲ್ಲ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ. ಭಾರತೀಯ ಸೇನೆಯಲ್ಲಿ ಇನ್ನೂ ಸಾಕಷ್ಟು ಬದಲಾವಣೆ ಆಗಬೇಕಾಗಿದ್ದು ಇಸ್ರೇಲ್‌ ಮಾದರಿಯ ಕಾರ್ಯಾಚರಣೆಯಿಂದ ಮಾತ್ರ ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯ ಎಂದರು

ಸೈನಿಕ ಬಾಬು ಮುದಕವಿ ಮಾತನಾಡಿ, ಪ್ರತಿಯೊಬ್ಬ ಯೋಧ ತನ್ನ ವೈಯಕ್ತಿಕ ಆಸೆ ಅಭಿಲಾಷೆ ಮರೆತು ತನ್ನ ಈಡೀ ಜೀವನವನ್ನು ದೇಶಕ್ಕಾಗಿ ತ್ಯಾಗ ಮಾಡಲು ಸದಾ ಸಿದ್ದನಿರುತ್ತಾನೆ ಎಂದರು.

ಉಪನ್ಯಾಸಕ ಕೆ.ಎಂ.ಮಾಕಣ್ಣವರ,ಭೈರವಿ ರಾಮನಗೌಡ್ರ ,ನೇತಾಜಿಗೌಡ ಕೆಂಪನಗೌಡ್ರ ಮಾತನಾಡಿದರು.

ನೇತೃತ್ವವನ್ನು ವಿರಕ್ತಮಠದ ಡಾ.ಶಿವಕುಮಾರ ಸ್ವಾಮಿಗಳು ವಹಿಸಿದ್ದರು. ಹುತಾತ್ಮ ಯೋಧನ ನೆರವಿಗೆ 50,200 ರೂ. ಸಂಗ್ರಹಿಸಲಾಯಿತು.ಕೆಇಎಸ್‌ ಶಿಕ್ಷ ಣ ಸಂಸ್ಥೆ,ಕನಕದಾಸ ಬಾಲಕಿಯರ ಪ್ರೌಢ ಶಾಲೆ,ಸರಕಾರಿ ಹಿರಿಯ ಪ್ರಾಥಮಿಕ ಉರ್ದುಶಾಲೆ,ಎಂಪಿಎಸ್‌.ಶಾಲೆ, ಕೆಜಿಎಸ್‌ ಶಾಲೆ,ಜನತಾ ಕಾಲೊನಿಯ ಎಂಪಿಎಸ್‌ ಶಾಲೆ,ವಿದ್ಯಾಚೇತನ ಶಿಕ್ಷ ಣ ಸಮಿತಿ ವಿದ್ಯಾರ್ಥಿಗಳು ,ನಾನಾ ಸಂಘಸಂಸ್ಥೆಗಳು,ಯುವಕ ಮಂಡಳ,ಅಂಗನವಾಡಿ ಕಾರ್ಯಕರ್ತೆಯರು,ಶಿಕ್ಷ ಕರು,ನಾಗರೀಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ