ಆ್ಯಪ್ನಗರ

ಜಾಲವಾಡಗಿ ಕೆರೆ ತುಂಬಿಸಲು ಯತ್ನ

ಮುಂಡರಗಿ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿಮೂಲ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು ಹಾಗೂ ಜಾಲವಾಡಗಿ ಕೆರೆ ತುಂಬಿಸುವ ಕೆಲಸಕ್ಕೆ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Vijaya Karnataka 18 Jan 2020, 5:00 am
ಮುಂಡರಗಿ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿಮೂಲ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು ಹಾಗೂ ಜಾಲವಾಡಗಿ ಕೆರೆ ತುಂಬಿಸುವ ಕೆಲಸಕ್ಕೆ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
Vijaya Karnataka Web attempts to fill a lake
ಜಾಲವಾಡಗಿ ಕೆರೆ ತುಂಬಿಸಲು ಯತ್ನ


ತಾಲೂಕಿನ ಜಾಲವಾಡಗಿಯಲ್ಲಿ56.38 ಲಕ್ಷ ರೂ. ವೆಚ್ಚದ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಚಾಲನೆ ಹಾಗೂ ತಾಂಡಾದಲ್ಲಿಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಗ್ರಾಮಸ್ಥರ ಬಹುದಿನಗಳ ಬೇಡಿಕೆ ಏತ ನೀರಾವರಿ ಕಾಲುವೆ ನಿರ್ಮಾಣಕ್ಕಿಂತ ಮೊದಲು ಕೆರೆಗಳನ್ನು ತುಂಬಿಸುವುದಕ್ಕಾಗಿ ಸರಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಕಳಿಸಲಾಗಿದೆ. ಹೀಗಾಗಿ ಗ್ರಾಮಸ್ಥರಿಗೆ ನೀಡಿದ ಭರವಸೆಯಂತೆ ಕೆರೆ ತುಂಬಿಸುವ ಮತ್ತು ಕಾಲುವೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು ಎಂದರು.

ನಂತರ ಬಾಗೇವಾಡಿ ಗ್ರಾಮದ ಮುಖ್ಯರಸ್ತೆಯಿಂದ ಎಸ್‌ಸಿ ಕಾಲೊನಿಗೆ 54 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಬಿದರಹಳ್ಳಿ ಗ್ರಾಮದ ಹೊಸ ಪ್ಲಾಟಿನಲ್ಲಿಯ ಎಸ್‌ಸಿ ಕಾಲೊನಿಯಲ್ಲಿ36 ಲಕ್ಷ ರೂ. ವೆಚ್ಚದ ಕಾಂಕ್ರಿಟ್‌ ರಸ್ತೆ ನಿರ್ಮಾಣ ನಂತರ 48 ಲಕ್ಷ ರೂ. ವೆಚ್ಚದ ಕೊರ್ಲಹಳ್ಳಿ -ಹಮ್ಮಿಗಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಜಾಲವಾಡಗಿ ತಾಂಡಾ ಮತ್ತು ಬಿದರಹಳ್ಳಿ ಗ್ರಾಮದಲ್ಲಿಅಂಗನವಾಡಿ ಕಟ್ಟಡವನ್ನು ಶಾಸಕ ಲಮಾಣಿ ಉದ್ಘಾಟಿಸಿದರು.

ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಬಾಗೇವಾಡಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಶೇಖರ ಕಂತಿ, ತಾಪಂ ಸದಸ್ಯೆ ಪುಷ್ಪಾ ಪಾಟೀಲ, ರಮೇಶ ಹುಳಕಣ್ಣವರ, ಆರ್‌.ಎಂ.ತಪ್ಪಡಿ ರಘುವೀರ ಪಾಟೀಲ, ಡಿ.ಡಿ.ಮೋರನಾಳ, ರಮೇಶ ಕವಲೂರ, ವೀರನಗೌಡ ಪಾಟೀಲ, ಚಿನ್ನಪ್ಪ ವಡ್ಡಟ್ಟಿ ಗಂಗಮ್ಮ ಈಟಿ, ಮಲ್ಲಿಕಾರ್ಜುನ ಹಣಜಿ, ಸಿದ್ದೇಶ ತಳವಾರ, ರಮೇಶ ಲಮಾಣಿ ಮಲ್ಲಪ್ಪ ತಳವಾರ, ಲೋಕೋಪಯೋಗಿ ಇಲಾಖೆ ಎಇಇ ಉಮಾಪತಿ ಶೆಟ್ಟರ, ಎನ್‌.ಎಂ.ಹಾರೊಗೇರಿ ಇತರರು ಪಾಲ್ಗೊಂಡಿದ್ದರು.

ಕೆಲಸ ಕೊಡಿ: ಜಾಲವಾಡಗಿ ಗ್ರಾಮದಲ್ಲಿಗ್ರಾಮದ ಕಾರ್ಯಕರ್ತರಿಗೆ ಕೆಲಸ ಕೊಡಿರಿ ಹಾಗೂ ನೀರಾವರಿ ಕಾಲುವೆ ನಿರ್ಮಾಣ ಮಾಡಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಅವರಿಗೆ ಮನವಿ ಮಾಡಲಾಯಿತು.ಈ ಬಗ್ಗೆ ಗಂಭೀರ ಪ್ರಯತ್ನ ನಡೆಸಲಾಗಿದೆ. ನಮ್ಮದೆ ಸರಕಾರ ಇದೆ. ವರ್ಷದೊಳಗೆ ಗ್ರಾಮದ ಕೆರೆ ತುಂಬಿಸುವ ಹಾಗೂ ಕಾಲುವೆ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ