ಆ್ಯಪ್ನಗರ

ಅಪರಾಧ ತಡೆಗೆ ಜಾಗೃತಿ ಅವಶ್ಯ

ಕೊಣ್ಣೂರ: ಹಳ್ಳಿಯಲ್ಲಿನಡೆಯುವ ಮೋಸ, ಕಳ್ಳತನಗಳ ಬಗ್ಗೆ ಗಮನಹರಿಸಿ ಅವು ನಡೆಯದಂತೆ ಜಾಗೃತರಾಗಿರಬೇಕು ಎಂದು ನರಗುಂದ ಎಎಸ್‌ಐ ವಿ.ಜಿ.ಪವಾರ ಹೇಳಿದರು.

Vijaya Karnataka 15 Dec 2019, 5:00 am
ಕೊಣ್ಣೂರ: ಹಳ್ಳಿಯಲ್ಲಿನಡೆಯುವ ಮೋಸ, ಕಳ್ಳತನಗಳ ಬಗ್ಗೆ ಗಮನಹರಿಸಿ ಅವು ನಡೆಯದಂತೆ ಜಾಗೃತರಾಗಿರಬೇಕು ಎಂದು ನರಗುಂದ ಎಎಸ್‌ಐ ವಿ.ಜಿ.ಪವಾರ ಹೇಳಿದರು.
Vijaya Karnataka Web awareness of crime prevention is essential
ಅಪರಾಧ ತಡೆಗೆ ಜಾಗೃತಿ ಅವಶ್ಯ


ಸಮೀಪದ ಶಿರೋಳದ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಪೋಲಿಸ್‌ ಇಲಾಖೆ, ಕೊಣ್ಣೂರ ಸಹಯೋಗದಲ್ಲಿ'ಅಪರಾಧ ತಡೆ ಮಾಸಾಚರಣೆ' ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಯುವಕರು ದುಷ್ಕೃತ್ಯ ಎಸಗಲು ಮುಂದಾಗಬೇಡಿ. ದುಶ್ಚಟಗಳನ್ನು ತ್ಯಜಿಸಿ. ಕ್ಷಣಿಕ ಸುಖಕ್ಕಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದರು. ಇತ್ತೀಚಿಗೆ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಗಟ್ಟಲು ಎಲ್ಲರೂ ಜಾಗೃತರಾಗಬೇಕು ಎಂದರು.

ಮುಖ್ಯೋಪಾಧ್ಯಾಯ ಆರ್‌.ಎಮ್‌.ಕ್ಯಾಮನಗೌಡ್ರ ಮಾತನಾಡಿ, ಇಂದಿನ ಯುವಕರು ಅಪರಾಧ ತಡೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ತಾವುಗಳೆಲ್ಲಾಅಪರಾಧವೆಸಗದಂತೆ ತಮ್ಮ ಜೀವನ ನಿರ್ವಹಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಎಸ್‌.ಸಾಲೀಮಠ ಮಾತನಾಡಿ, ಇಂದಿನ ಯುವಕರು ಅಪರಾಧಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಬೇಕು. ಅಪರಾಧ ತಡೆಗಟ್ಟುವಲ್ಲಿಪ್ರತಿಯೊಬ್ಬರೂ ಮುಂದಾಗಬೇಕು. ಅಮೂಲ್ಯವಾದ ವಿದ್ಯಾರ್ಥಿ ಜೀವನದಲ್ಲಿಕೆಟ್ಟ ವ್ಯಸನಗಳಿಗೆ ಬಲಿಯಾಗಿ ಅಪರಾಧ ಎಸಗುವಂತಾಗಬಾರದು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು. ಪೋಲಿಸ್‌ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿಪೋಲಿಸ್‌ ಇಲಾಖೆ ಸಿಬ್ಬಂದಿ ಎಂ.ಆರ್‌.ಹಿರೇಮಠ. ಹೆಡ್‌ ಕಾನಸ್ಟೇಬಲ್‌, ಎಸ್‌.ಆರ್‌.ರಾಯನಗೌಡ್ರ, ಐಟಿಐ ಕಾಲೇಜ್‌ ಸಿಬ್ಬಂದಿ ಮತ್ತು ಪ್ರೌಢಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಎಸ್‌.ಎಸ್‌.ದೊಡಮನಿ ಸ್ವಾಗತಿಸಿದರು. ಎಸ್‌.ಎಮ್‌. ಗಿರಿಯಪ್ಪಗೌಡ್ರ ನಿರೂಪಿಸಿದರು.

ಎನ್‌.ಆರ್‌.ಪೋಟೋ 1ಏ- ಕೊಣ್ಣೂರ ಸಮೀಪದ ಶಿರೋಳದ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಪೋಲಿಸ್‌ ಇಲಾಖೆ ಸಹಯೋಗದಲ್ಲಿಅಪರಾಧ ತಡೆ ಮಾಸಾಚರಣೆ ಕಾರ‍್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ