ಆ್ಯಪ್ನಗರ

ಕಾಯಿಲೆ ಶಾಶ್ವತ ಪರಿಹಾರಕ್ಕೆ ಆಯುರ್ವೇದ ಮದ್ದು

ಲಕ್ಕುಂಡಿ: ಮಾನವನ ಜೀವನದಲ್ಲಿಆರೋಗ್ಯ ಪ್ರಮುಖ ಪಾತ್ರ ವಹಿಸುತ್ತಿದ್ದು ಆಯುರ್ವೇದ ಪದ್ಧತಿ ಚಿಕಿತ್ಸೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕೊಟ್ಟೂರೇಶ್ವರ ಸ್ವಾಮೀಜಿಗಳು ಹೇಳಿದರು.

Vijaya Karnataka 29 Sep 2019, 5:00 am
ಲಕ್ಕುಂಡಿ: ಮಾನವನ ಜೀವನದಲ್ಲಿಆರೋಗ್ಯ ಪ್ರಮುಖ ಪಾತ್ರ ವಹಿಸುತ್ತಿದ್ದು ಆಯುರ್ವೇದ ಪದ್ಧತಿ ಚಿಕಿತ್ಸೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕೊಟ್ಟೂರೇಶ್ವರ ಸ್ವಾಮೀಜಿಗಳು ಹೇಳಿದರು.
Vijaya Karnataka Web ayurvedic medicine for permanent cure
ಕಾಯಿಲೆ ಶಾಶ್ವತ ಪರಿಹಾರಕ್ಕೆ ಆಯುರ್ವೇದ ಮದ್ದು


ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿನಡೆದ 235 ನೇ ಶಿವಾನುಭವಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಜಂಜಾಟ ಮತ್ತು ಒತ್ತಡದ ಬದುಕಿನಲ್ಲಿಸಮರ್ಪಕವಾದ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಅಳವಡಿಸಿಕೊಳ್ಳದೇ ಇರುವದರಿಂದ ಅನಾರೋಗ್ಯದಿಂದ ಬಳಲುವಂತಾಗಿದೆ. ಅನಾರೋಗ್ಯದ ಕ್ಷಣಿಕ ಉಪಶಮನಕ್ಕಾಗಿ ರಾಸಾಯನಿಕ ಔಷಧಿ ತೆಗೆದುಕೊಂಡು ದೇಹವನ್ನು ವಿಷಯುಕ್ತ ಮಾಡಿಕೊಳ್ಳುವುದರ ಬದಲಾಗಿ ಶಾಶ್ವತ ರೋಗ ನಿವಾರಣೆಗೆ ರಾಮಬಾಣವಾಗಿರುವ ಆಯುರ್ವೇದ ಔಷಧ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.

ಮುಖ್ಯ ಅಥಿತಿ ಹುಬ್ಬಳ್ಳಿ ಸಂಜೀವಿನ ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಬಿ.ಎಲ್‌ ಪಾಟೀಲ ಮಾತನಾಡಿ, ನಮ್ಮ ಇಂದ್ರಿಯಗಳ ಹತೋಟಿಗೆ ಮನಸ್ಸಿಗೆ ಚಿಕಿತ್ಸೆ ನೀಡಿ ಬಂದಿರುವ ಕಾಯಿಲೆಯನ್ನು ಆಯುರ್ವೇದ ಪದ್ಧತಿಯಿಂದ ಸರಳವಾಗಿ ಗುಣಪಡಿಸಬಹುದು. ಮನಸ್ಸಿಗೆ ಬಂದ ಕಾಯಿಲೆಯನ್ನು ಆಧ್ಯಾತ್ಮಿಕವಾಗಿಯೂ ಹೋಗಲಾಡಿಸಲು ಶರಣರ ಆಧ್ಯಾತ್ಮಿಕ ಜೀವನ ಶೈಲಿ ಆಳವಡಿಸಿಕೊಳ್ಳಬೇಕು ಎಂದರು.

ಜಿ.ಪಂ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ ಮಾತನಾಡಿ, ಈ ಭಾಗದ ಕೊಟ್ಟೂರೇಶ್ವರ ಮಠವು ಸಾವಿರಾರು ಭಕ್ತರ ಶ್ರದ್ಧಾ ಕೇಂದ್ರವಾಗಿ ಬೆಳೆದಿದ್ದು ಶ್ರೀಗಳ ಸಮಾಜಮುಖಿ ಕಾರ್ಯ ಶ್ಲಾಘನಿವಾಗಿದೆ ಎಂದರು. ಡಾ. ಎಸ್‌.ಸಿ ಸರ್ವಿ, ತಾಪಂ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿದರು. ಸಂಭಾಪೂರದ ಮರಿಯಪ್ಪ ಡೋಣೆ ಉಪಸ್ಥಿತರಿದ್ದರು. ಕೆ.ಬಿ.ವೀರಾಪೂರ , ನಾಗೇಂದ್ರ ಅರ್ಕಸಾಲಿ ಸಂಗೀತ ಸೇವೆ ನೀಡಿದರು. ಕೆ.ಆರ್‌. ಕೋರಿ ಸ್ವಾಗತಿಸಿದರು. ಕೆ.ಬಿ.ಕೊಣ್ಣೂರು ನಿರೂಪಿಸಿದರು. ಶೋಭಾ ಹೂಗಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ