ಆ್ಯಪ್ನಗರ

ಉತ್ತಮ ಆರೋಗ್ಯಕ್ಕೆ ಆಯುಷ್ಮಾನ್‌ ಯೋಜನೆ

ಮುಂಡರಗಿ: ಪ್ರತಿಯೊಬ್ಬರು ಆರೋಗ್ಯವಾಗಿರಬೇಕು. ಪೌಷ್ಠಿಕಾಂಶ ಪ್ರತಿಯೊಬ್ಬ ನಾಕರಿಕರ ಹಕ್ಕು. ಹೀಗಾಗಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕನಸು ನನಸು ಮಾಡಲು ಎಲ್ಲರೂ ಶ್ರಮಿಸೋಣ ಎಂದು ಪುರಸಭೆ ಮುಖ್ಯಾಧಿಕಾರಿ ಆರ್‌.ಎಂ.ಪಾಟೀಲ ಹೇಳಿದರು.

Vijaya Karnataka 22 Sep 2019, 5:00 am
ಮುಂಡರಗಿ: ಪ್ರತಿಯೊಬ್ಬರು ಆರೋಗ್ಯವಾಗಿರಬೇಕು. ಪೌಷ್ಠಿಕಾಂಶ ಪ್ರತಿಯೊಬ್ಬ ನಾಕರಿಕರ ಹಕ್ಕು. ಹೀಗಾಗಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕನಸು ನನಸು ಮಾಡಲು ಎಲ್ಲರೂ ಶ್ರಮಿಸೋಣ ಎಂದು ಪುರಸಭೆ ಮುಖ್ಯಾಧಿಕಾರಿ ಆರ್‌.ಎಂ.ಪಾಟೀಲ ಹೇಳಿದರು.
Vijaya Karnataka Web 21MDR1 AYUSMAN_25
ಮುಂಡರಗಿಯಲ್ಲಿಆಯುಷ್ಮಾನ್‌ ಭಾರತ, ಆರೋಗ್ಯ ಕರ್ನಾಟಕ ಪಾಕ್ಷಿಕ ಆಚರಣೆ ಕುರಿತು ಶನಿವಾರ ಜನಜಾಗೃತಿ ಜಾಥಾ ನಡೆಯಿತು.


ಆರೋಗ್ಯ ಇಲಾಖೆ, ಪುರಸಭೆ ಮತ್ತು ಸಿಡಿಪಿಒ ಇಲಾಖೆಯ ಆಶ್ರಯದಲ್ಲಿ ಶನಿವಾರ ನಡೆದ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಜಾಥಾದಲ್ಲಿಅವರು ಮಾತನಾಡಿದರು.

ಯೋಜನೆಯಡಿ ಬಿಪಿಎಲ್‌ ಹೊಂದಿದ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ರಾಜ್ಯದ ಎಲ್ಲನಾಗರಿಕರಿಗೂ ಆರೋಗ್ಯ ರಕ್ಷಣೆ, ಆರೋಗ್ಯಯುತ ಸ್ವಸಹಾಯ ಸಂಘದ ಕುಟುಂಬದ ಕನಸು ನನಸು ಮಾಡುವದು, ಬಿಪಿಎಲ್‌ ಹೊಂದಿದ ಕುಟುಂಬಗಳಿಗೆ ಸರಕಾರಿ ಪ್ಯಾಕೇಜ್‌ ದರದ ಶೇ.30 ರಷ್ಟು ಲಭ್ಯ, ವರ್ಷಕ್ಕೆ 1.5 ಲಕ್ಷ ರೂ ಮಿತಿ ಇದೆ. ಕಟ್ಟಿಗೆ, ಸೀಮೆ ಎಣ್ಣೆ ಬಳಕೆ ನಿಲ್ಲಿಸಿ ವಾಯುಮಾಲಿನ್ಯ ಕಡಿಮೆ ಮಾಡಬೇಕು. ಗಿಡಮರಗಳನ್ನು ನೆಡಬೇಕು, ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ ವ್ಯರ್ಥ ನೀರು ಹೋಗುವುದನ್ನು ತಡೆಯಬೇಕು, ಶೌಚಾಲಯ ಬಳಸಿ ಹೀಗೆ ಆರೋಗ್ಯ ಕುರಿತು ಹೇಳಿದರು.

ನಂತರ ಪುರಸಭೆ ಸಭಾಭವನದಲ್ಲಿಸ್ವಸಹಾಯ ಗುಂಪುಗಳ ಸದಸ್ಯರಿಗೆ, ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಆಯುಷ್ಮಾನ್‌ ಯೋಜನೆ ಕುರಿತು ವಿವರವಾಗಿ ತಿಳಿಸಲಾಯಿತು.

ಜಾಥಾದಲ್ಲಿಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಬಿ.ಅಳವಂಡಿ, ಪುರಸಭೆಯ ಸಿದ್ದಮ್ಮ ಮಳ್ಳಪ್ಪನಮಠ, ಎಂ.ಎಸ್‌.ಮ್ಯಾಗೇರಿ, ಎಂ.ಎಂ.ದೊಡ್ಡಮನಿ, ಶೋಭಾ ಅರಳಿಕಟ್ಟಿ, ವೈ.ವೈ.ನದಾಫ್‌, ಗಣೇಶ ಶೇಡದ ಸೇರಿದಂತೆ ತಾಲೂಕಿನ ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ