ಆ್ಯಪ್ನಗರ

ಬಕ್ರಿದ್‌ : ಶಾಂತಿ ಸಭೆ

ಗದಗ : ಬಕ್ರೀದ್‌ ಹಬ್ಬದ ಸಮಯದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ಶಾಂತಿಸಭೆ ಏರ್ಪಡಿಸಲಾಗಿತ್ತು. ಶಹರ ಠಾಣೆ ಸಿಪಿಐ ಆರ್‌.ಎಫ್‌.ದೇಸಾಯಿ ಮಾತನಾಡಿ, ಬಕ್ರಿದ ದಾನ ಧರ್ಮದ ಹಬ್ಬವಾಗಿದ್ದು, ಆ ಸಮಯದಲ್ಲಿ ಹಿಂದೂ ಮುಸ್ಲಿಂ ಸಮಾಜದವರು ಒಟ್ಟಾಗಿ ಸೇರಿ

Vijaya Karnataka 8 Aug 2019, 5:00 am
ಗದಗ : ಬಕ್ರೀದ್‌ ಹಬ್ಬದ ಸಮಯದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ಶಾಂತಿಸಭೆ ಏರ್ಪಡಿಸಲಾಗಿತ್ತು.
Vijaya Karnataka Web bakrid peace meeting
ಬಕ್ರಿದ್‌ : ಶಾಂತಿ ಸಭೆ

ಶಹರ ಠಾಣೆ ಸಿಪಿಐ ಆರ್‌.ಎಫ್‌.ದೇಸಾಯಿ ಮಾತನಾಡಿ, ಬಕ್ರಿದ ದಾನ ಧರ್ಮದ ಹಬ್ಬವಾಗಿದ್ದು, ಆ ಸಮಯದಲ್ಲಿ ಹಿಂದೂ ಮುಸ್ಲಿಂ ಸಮಾಜದವರು ಒಟ್ಟಾಗಿ ಸೇರಿ ಶಾಂತರೀತಿಯಿಂದ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಬಕ್ರೀದ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುವುದಾಗಿ ಗಣ್ಯರು ಭರವಸೆ ನೀಡಿದರು. ಆ. 12ರಂದು ಬೆಳಗ್ಗೆ 7.30ಕ್ಕೆ ಮುಳಗುಂದ ನಾಕಾ ಶಾಹಿ ಇದ್ಗಾದಲ್ಲಿ ಹಾಗೂ 9.30ಕ್ಕೆ ಡಂಬಳ ನಾಕಾ ಇದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.

ಪಿಎಸ್‌ಐ ಸೋಮೇಶ ಗೆಜ್ಜಿ, ರಾಮಣ್ಣ ಫಲದೊಡ್ಡಿ, ಎಸ್‌.ಎನ್‌. ಬಳ್ಳಾರಿ, ಅಕ್ಬರಸಾಬ ಬಬರ್ಚಿ, ಸೈಯದ ಖಾಲಿದ ಕೊಪ್ಪಳ, ಭಾಷಾ ಮಲ್ಲಸಮುದ್ರ, ಅಶೋಕ ಕುಡತಿನ್ನಿ, ಜೀವನಸಾಬ ನಮಾಜಿ, ಫಾರೂಕ ಹುಬ್ಬಳ್ಳಿ, ರಾಘವೇಂದ್ರ ಹಬೀಬ, ವಿಜಯ ಕಲ್ಮನಿ, ಸುರೇಶ ಹಾದಿಮನಿ, ಮುನ್ನಾ ರೇಶ್ಮಿ, ಬರಕತಅಲಿ ಮುಲ್ಲಾ, ಆನಂದ ಶಿಂಗಾಡಿ, ಪರಶುರಾಮ ಪೂಜಾರ ಇತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರ್ತವ್ಯದಲ್ಲಿರುವಾಗ ಅಪಘಾತದಲ್ಲಿ ಮೃತಪಟ್ಟ ಕಿತ್ತೂರು ಪೊಲೀಸ್‌ ಠಾಣೆ ಪಿಎಸ್‌ಐ ವೀರಣ್ಣ ಲಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ