ಆ್ಯಪ್ನಗರ

ಬಸವಣ್ಣದೇವರ ಮೂರ್ತಿ ಪಲ್ಲಕ್ಕಿ ಉತ್ಸವ

ಡಂಬಳ : ಕೆರೆ ಬಸವಣ್ಣದೇವರ ದೇವಸ್ಥಾನದ ಜಾತ್ರೆ ಹಾಗೂ ಶ್ರಾವಣ ಸೋಮವಾರ ವಿಜೃಂಭಣೆಯಿಂದ ಜರುಗಿತು. ಜಾತ್ರಾ ನಿಮಿತ್ತವಾಗಿ ಭಾನುವಾರ ರಾತ್ರಿ 63 ಶರಣರ ನಾಮದ ಸ್ಮರಣೆ ಪ್ರತಿಕವಾದ 63 ಪಡಗದ ಗೋಧಿ ಹುಗ್ಗಿ ತಯಾರಿಸಲು ಭಕ್ತರು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು.

Vijaya Karnataka 27 Aug 2019, 5:00 am
ಡಂಬಳ : ಕೆರೆ ಬಸವಣ್ಣದೇವರ ದೇವಸ್ಥಾನದ ಜಾತ್ರೆ ಹಾಗೂ ಶ್ರಾವಣ ಸೋಮವಾರ ವಿಜೃಂಭಣೆಯಿಂದ ಜರುಗಿತು. ಜಾತ್ರಾ ನಿಮಿತ್ತವಾಗಿ ಭಾನುವಾರ ರಾತ್ರಿ 63 ಶರಣರ ನಾಮದ ಸ್ಮರಣೆ ಪ್ರತಿಕವಾದ 63 ಪಡಗದ ಗೋಧಿ ಹುಗ್ಗಿ ತಯಾರಿಸಲು ಭಕ್ತರು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು.
Vijaya Karnataka Web basavanna deva murthy pallakki festival
ಬಸವಣ್ಣದೇವರ ಮೂರ್ತಿ ಪಲ್ಲಕ್ಕಿ ಉತ್ಸವ


ಸೋಮವಾರ ಬಸವಣ್ಣದೇವರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ ನಂತರ ಮುಂಡರಗಿ ಸಂಸ್ಥಾನಮಠದ ಅನ್ನದಾನಿಶ್ವರ ಮಹಾಸ್ವಾಮಿಗಳ ಪಾದಪೂಜೆ, 10ಕ್ಕೆ ವಾದ್ಯವೃಂದಗಳೊಂದಿಗೆ ನಂದಿಧ್ವಜ, 63 ಶರಣರ ಗ್ರಂಥ, ಶ್ರೀಗುರು ಬಸವಣ್ಣದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಉತ್ಸವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಗಣಾರಾಧನೆ ನಂತರ ಅನ್ನ ಸಂತರ್ಪಣೆ ಪ್ರಾರಂಭವಾಯಿತು.

ಸಂಜೆ 5ಕ್ಕೆ ಏಳು ಸಿಮೆ ಜನ ಸೇರಿ, 63 ಪುರಾತನ ಪ್ರಸಾದವ ಮಾಡಿ, ಅಷ್ಟ ದಿಕ್ಪಾಲಕರಿಗೆ ಎಡೆ ಮಾಡಿ ಮನದಲ್ಲಿ ಗುರು ಗವಿಸಿದ್ದ ಅನ್ನದಾನಿಯರ ನೆನೆದ ಮಹಾ ಪ್ರಸಾದವನ್ನುಂಡು ಎಪ್ಪತ್ತಗಿರಿಯ ಕಪ್ಪತ್ತ ಮಲ್ಲಯ್ಯನನ್ನು ನೆನೆಸುತ್ತ ಹರ ಹರ ಮಹಾದೇವ ಎಂಬ ಘೊಷಣೆಗಳೊಂದಿಗೆ ಮಹಾರಥೋತ್ಸವ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ