ಆ್ಯಪ್ನಗರ

ಮನೆ ಸುತ್ತ ಸೊಳ್ಳೆ ಬರದಂತೆ ಜಾಗೃತಿ ವಹಿಸಿ

ಗದಗ: ಈಡೀಸ್‌ ಸೊಳ್ಳೆಗಳ ಕಡಿತದಿಂದ ಡೆಂಗೆ, ಚಿಕೂನ್‌ಗುನ್ಯ ರೋಗಗಳು ಬರುತ್ತವೆ. ಅವು ಮನೆಯ ನೀರಿನ ಪರಿಕರಗಳಲ್ಲಿ ಬೆಳೆಯುತ್ತವೆ. ಮನೆಯಲ್ಲಿ ಬೆಳೆದ(ಸೊಳ್ಳೆ) ಲಾರ್ವಾ ನಾಶಕ್ಕೆ ಜನರು ಮುಂದಾಗಬೇಕು ಎಂದು ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ವಿ.ಆರ್‌.ಬಂಢಾ ಹೇಳಿದರು.

Vijaya Karnataka 15 Jun 2019, 5:00 am
ಗದಗ: ಈಡೀಸ್‌ ಸೊಳ್ಳೆಗಳ ಕಡಿತದಿಂದ ಡೆಂಗೆ, ಚಿಕೂನ್‌ಗುನ್ಯ ರೋಗಗಳು ಬರುತ್ತವೆ. ಅವು ಮನೆಯ ನೀರಿನ ಪರಿಕರಗಳಲ್ಲಿ ಬೆಳೆಯುತ್ತವೆ. ಮನೆಯಲ್ಲಿ ಬೆಳೆದ(ಸೊಳ್ಳೆ) ಲಾರ್ವಾ ನಾಶಕ್ಕೆ ಜನರು ಮುಂದಾಗಬೇಕು ಎಂದು ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ವಿ.ಆರ್‌.ಬಂಢಾ ಹೇಳಿದರು.
Vijaya Karnataka Web be aware of the mosquito around the house
ಮನೆ ಸುತ್ತ ಸೊಳ್ಳೆ ಬರದಂತೆ ಜಾಗೃತಿ ವಹಿಸಿ


ತಾಲೂಕಿನ ಕೊಟುಮಚಗಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಕೋಟುಮಚಗಿ, ಕರ್ನಾಟಕ ರಾಜ್ಯದ ಆರೋಗ್ಯ ಸಹಾಯಕ ಮತ್ತು ಮೇಲ್ವಿಚಾರಕರ ಸಂಘ, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಡೆಂಗೆ ಜ್ವರ ಮತ್ತು ಚಿಕೂನ್‌ಗುನ್ಯ ರೋಗಗಳ ಮುಂಜಾಗ್ರತೆಯ ಕುರಿತು ಪ್ರೌಢಶಾಲಾ ಮಕ್ಕಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೊಳ್ಳೆಯ ಅರಮನೆ ಕತ್ತಲು ಕೋಣೆ. ನಿಂತ ನೀರು ಸೊಳ್ಳೆಯ ತವರು. ಈಡಿಸ್‌ ಸೊಳ್ಳೆ ಸ್ವಚ್ಚವಾದ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಅದು ಹಗಲು ಕಚ್ಚುತ್ತದೆ. ಮನೆಯಲ್ಲಿ ಪ್ರತಿನಿತ್ಯ ಬೇವಿನಸೊಪ್ಪಿನಿಂದ ಧೂಮಿಕರಣ ಮಾಡಬೇಕು. ಸರಕಾರಿ ಪ್ರೌಢ ಶಾಲಾ ಮಕ್ಕಳೊಂದಿಗೆ ಆರೋಗ್ಯ ಇಲಾಖೆಯವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು ಎಂದು ಹೇಳಿದರು.

ಆರೋಗ್ಯ ಇಲಾಖೆಯ ಅಜಯಕುಮಾರ ಕಲಾಲ ಮಾತನಾಡಿ, ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರೆ ಅದು ಪರಿಣಾಮಕಾರಿಯಾಗಿ ಗ್ರಾಮದಲ್ಲಿ ಯಶಸ್ವಿಯಾಗುತ್ತಿರುವುರಿಂದ ಶಾಲಾ ಕಾಲೇಜುಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಕೀಟಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗಿದೆ. ಜನರು ಪ್ರತಿ ನಿತ್ಯ ನೀರಿನ ಪರಿಕರಗಳಾದ ಹಂಡೆ, ಬ್ಯಾರಲ್‌, ಡ್ರಮ್‌, ಸಿಮೆಂಟ್‌ ಟ್ಯಾಂಕ್‌, ಟೈಯರ್‌ ಮುಂತಾದವುಗಳ ನೀರಿನ ಸಂಗ್ರಹಣೆಯಲ್ಲಿ ಲಾರ್ವಾ ಕಂಡುಬಂದರೆ ನಾಶಪಡಿಸಿರಿ. ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ಪರದೆ. ಸೊಳ್ಳೆ ಬತ್ತಿ ಹಾಗೂ ಬೇವಿನಸೊಪ್ಪಿನ ಧೂಮಿಕರಣ ಮಾಡಿದರೆ ಸೊಳ್ಳೆ ಕಡಿತದಿಂದ ದೂರ ಇರಬಹುದು ಎಂದರು.

ಆರೋಗ್ಯ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಪ್ಪ ಲಿಂಗದಾಳ, ಸಿ.ಆರ್‌.ಹೆಬ್ಬಳ್ಳಿ, ಎಸ್‌.ಸಿ.ಕೊಳಿವಾಡ, ಎಂ.ಎಚ್‌.ಕದಂಪೂರ, ಮಂಜುನಾಥ ತಳವಾರ, ವೈ.ಎನ್‌.ಕಡೆಮನಿ, ಬಿ.ಎಚ್‌.ಕುಲಕರ್ಣಿ, ಆರೋಗ್ಯ ಸಹಾಯಕ ಶಾಮೂಲ್‌ ಕರಡಿಗುಡ್ಡ, ನಾಗರಾಜ ಜೋಷಿ. ಬಿ.ಸಿ.ಹಿರೇಹಾಳ, ಬಿ.ಡಿ.ಕೊಪ್ಪಳ. ನೀತಾರಾಣಿ ಕಾಂಬಳೆ. ಎಸ್‌.ಬಿ.ಕವಳಿಕಾಯಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ