ಆ್ಯಪ್ನಗರ

ಭಯ ಮುಕ್ತರಾಗಿ ಪರೀಕ್ಷೆ ಎದುರಿಸಿ

ಗದಗ: ಯಾವುದೇ ಕೆಲಸದಲ್ಲಿಯಶ ಸಾಧಿಸಲು ಆತ್ಮವಿಶ್ವಾಸ ಹಾಗೂ ಸತತ ಪರಿಶ್ರಮ ಅತ್ಯಂತ ಮುಖ್ಯ. ಧರ್ಯದಿಂದ ಎಂತಹ ಸವಾಲನ್ನಾದರೂ ಎದುರಿಸಬಹುದು. ಕಾರಣ ವಿದ್ಯಾರ್ಥಿಗಳು ಮೊದಲು ಭಯ ಮುಕ್ತರಾಗಿ ಪರೀಕ್ಷಾ ಕೋಠಡಿ ಪ್ರವೇಶಿಸಿ.ಆತ್ಮಶ್ವಾಸ ಇದ್ದಲ್ಲಿಅಂಕಗಳಿಸುವುದು ಬಹು ಸುಲಭದ ಕೆಲಸ ಎಂದು ವಿಧಾನ ಪರಿಷತ್‌ ಸದಸ್ಯ ಪ್ರೊ.ಎಸ್‌.ವಿ. ಸಂಕನೂರ ಹೇಳಿದರು.

Vijaya Karnataka 20 Jan 2020, 5:00 am
ಗದಗ: ಯಾವುದೇ ಕೆಲಸದಲ್ಲಿಯಶ ಸಾಧಿಸಲು ಆತ್ಮವಿಶ್ವಾಸ ಹಾಗೂ ಸತತ ಪರಿಶ್ರಮ ಅತ್ಯಂತ ಮುಖ್ಯ. ಧರ್ಯದಿಂದ ಎಂತಹ ಸವಾಲನ್ನಾದರೂ ಎದುರಿಸಬಹುದು. ಕಾರಣ ವಿದ್ಯಾರ್ಥಿಗಳು ಮೊದಲು ಭಯ ಮುಕ್ತರಾಗಿ ಪರೀಕ್ಷಾ ಕೋಠಡಿ ಪ್ರವೇಶಿಸಿ.ಆತ್ಮಶ್ವಾಸ ಇದ್ದಲ್ಲಿಅಂಕಗಳಿಸುವುದು ಬಹು ಸುಲಭದ ಕೆಲಸ ಎಂದು ವಿಧಾನ ಪರಿಷತ್‌ ಸದಸ್ಯ ಪ್ರೊ.ಎಸ್‌.ವಿ. ಸಂಕನೂರ ಹೇಳಿದರು.
Vijaya Karnataka Web 19RUDRAGOUD9_25


ಭಾನುವಾರ ನಗರದ ಬಸವೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿಜಿಲ್ಲಾವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ 4ನೇ ವರ್ಷದ ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮಾಜದಲ್ಲಿಆರ್ಥಿಕವಾಗಿ ಹಿಂದುಳಿದವರ ಸಂಖ್ಯೆ ಹೆಚ್ಚಿದೆ. ಹಾಗೆಂದು ಯಶಸ್ಸಿಗೆ, ಸಾಧನೆಗೆ ಬಡತನ, ಜಾತಿ ಅಡ್ಡಿಯಾಗದು. ಸತತ ಪರಿಶ್ರಮ ಹಾಕಿ ಫಲಿತಾಂಶ ತಾನಾಗಿಯೇ ಬರುತ್ತದೆ. ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ. ಎಲ್ಲಸಮಾಜ, ಸಮುದಾಯದ ವಿದ್ಯಾರ್ಥಿಗಳ ಶ್ರೇಯೋಭಿವೃದ್ಥಿ ಬಯಸುವ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌. ಎಸ್‌. ಹಿರೇಮಠ ಮಾತನಾಡಿ, ಪರೀಕ್ಷಾ ಸಮಯದಲ್ಲಿಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಸಮಯ ವೈರ್ಥಮಾಡದೇ ಅಭ್ಯಾಸ ಮಾಡಿ ತಕ್ಕ ತಯಾರಿ ಮಾಡಿಕೊಂಡಲ್ಲಿಮುಕ್ತವಾಗಿ ಪರೀಕ್ಷೆ ಎದುರಿಸುವಿರಿ. ಶ್ರಮ ಮತ್ತು ಸಮಯ ಹಾಕಿದಲ್ಲಿಉತ್ತಮ ಅಂಕಗಳಿಸಲು ಸಾಧ್ಯ. ಜಿಲ್ಲಾಡಳಿತ ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ಹೆಚ್ಚಿಸಲು ಕ್ರೀಯಾಶಿಲವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಅದರೊಟ್ಟಿಗೆ ಸಾಮಜಿಕ ಸಂಘಟನೆಗಳು, ಪಾಲಕರು ಆಸಕ್ತಿಯಿಂದ ಸಹಕಾರ ನೀಡಿದಲ್ಲಿಯಶಸ್ಸು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಮಾತನಾಡಿ, ವಿಶ್ವಕರ್ಮ ಸಮಾಜದ ಹಾಗೂ ಎಲ್ಲಸಮಾಜಗಳ ಮಕ್ಕಳಿಗೆ ಅನಕೂಲವಾಗಲೆಂಬ ಉದ್ದೇಶದಿಂದ ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಾಗಾರ ಕಳೆದ ನಾಲ್ಕುವರ್ಷಗಳಿಂದ ಹಮ್ಮಿಕೊಳ್ಳುತ್ತ ಬರಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸರಕಾರಿ ಪಿಯು ಕಾಲೇಜು ಪ್ರಾಚಾರ್ಯ ಬಿ.ಜಿ. ಗಿರಿತಮವರ, ಪ್ರಾಚಾರ್ಯ ಎಚ್‌.ಎಸ್‌.ರಾಜೂರ, ನಿವೃತ್ತ ಪ್ರಾಚಾರ್ಯ ಕೆ.ಎಸ್‌. ಬಡಿಗೇರ, ಮುಖ್ಯೋಪಾಧ್ಯಾಯ ಸಿ.ಎಂ. ಪತ್ತಾರ ಇದ್ದರು.

ಸಿ.ಎಂ. ಪತ್ತಾರ ಸ್ವಾಗತಿಸಿದರು. ವಿಶ್ವನಾಥ ಕಮ್ಮಾರ ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಸ್‌. ಎನ್‌. ಬಡಿಗೇರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ