ಆ್ಯಪ್ನಗರ

ಹೆತ್ತವರಿಗೆ ವಿಧೇಯರಾಗಿ:ಗಂಜಿಗಟ್ಟಿ ಶ್ರೀ

ಲಕ್ಷ್ಮೇಶ್ವರ : ಯುವಕರು ಇಂದಿನ ವ್ಯವಸ್ಥೆಯಲ್ಲಿ ಗುರು-ಹಿರಿಯರು, ಹೆತ್ತವರಿಗೆ ವಿಧೇಯರಾಗಿ ನಡೆದುಕೊಳ್ಳಬೇಕು ಎಂದು ಗಂಜಿಗಟ್ಟಿ ಚರಮೂರ್ತೆಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

Vijaya Karnataka 23 Apr 2019, 5:00 am
ಲಕ್ಷ್ಮೇಶ್ವರ : ಯುವಕರು ಇಂದಿನ ವ್ಯವಸ್ಥೆಯಲ್ಲಿ ಗುರು-ಹಿರಿಯರು, ಹೆತ್ತವರಿಗೆ ವಿಧೇಯರಾಗಿ ನಡೆದುಕೊಳ್ಳಬೇಕು ಎಂದು ಗಂಜಿಗಟ್ಟಿ ಚರಮೂರ್ತೆಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
Vijaya Karnataka Web be obedient to parents ganjigatti shree
ಹೆತ್ತವರಿಗೆ ವಿಧೇಯರಾಗಿ:ಗಂಜಿಗಟ್ಟಿ ಶ್ರೀ


ಅವರು ಪಟ್ಟಣದ ಹಾವಳಿ ಹನಮಂತ ದೇವಸ್ಥಾನದ ಆವರಣದಲ್ಲಿ ಜೈ ಶ್ರೀ ಹನುಮಾನ್‌ ಸೇನೆಯ ಲಕ್ಷ್ಮೇಶ್ವರ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಹಾಗೂ ಹನುಮ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ರಾಮಧೂತ ಹನುಮಂತ ಶಕ್ತಿ ಸ್ವರೂಪವಾಗಿದ್ದು ರಾಮಚಂದ್ರನಿಗೆ ಸಂಜೀವಿನಿ ತಂದು ಪರಮಶ್ರೇಷ್ಠ ಭಕ್ತಿಯನ್ನು ಪ್ರದರ್ಶಿಸಿದ್ದಾನೆ. ಇಂದು ಪರಿವರ್ತನೆಯಾಗಬೇಕಾದರೆ ಯುವಕರ ಪಾತ್ರ ಮಹತ್ವದ್ದಾಗಿದೆ. ಧರ್ಮ, ಸಂಸ್ಕೃತಿ, ಪಂರಂಪರೆ ನಮ್ಮ ನಾಡಿನ ಮಣ್ಣಿನ ಕಣಕಣದಲ್ಲೂ ಹಾಸುಹೊಕ್ಕಾಗಿದೆ. ಅದನ್ನು ಉಳಿಸಿ-ಬೆಳೆಸುವ ಗುರುತರ ಜವಾಬ್ದಾರಿ ಯುವಕರ ಮೇಲಿದೆ. ಈ ನಿಟ್ಟಿನಲ್ಲಿ ಹುಟ್ಟುಹಾಕಿರುವ ಸಂಘಟನೆ ತನ್ನ ಉದ್ದೇಶಗಳೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು.

ದೇವಸ್ಥಾನ ಸಮಿತಿಯ ಮಲ್ಲಯ್ಯ ಪುರಾಣಿಕಮಠ ಅಧ್ಯಕ್ಷ ತೆವಹಿಸಿದ್ದರು. ಅತಿಥಿಗಳಾಗಿ ಜೈ ಹನುಮಾನ್‌ ಸೇನೆ ರಾಜ್ಯಾಧ್ಯಕ್ಷ ಎಚ್‌.ಮಂಜುನಾಥ, ಕಲ್ಲಪ್ಪ ಶಿರಕೋಳ, ಪ್ರಕಾಶ ಮಾದನೂರ,ವಿಜಯ ವೈ.ಎಂ., ಮಹೇಶ, ನಾಗರತ್ನಾ, ವೆಂಕಟೇಶ, ಚಂಬಣ್ಣ ಬಾಳಿಕಾಯಿ, ನೀಲಪ್ಪ ಕರ್ಜೆಕಣ್ಣವರ, ಶಂಕರ ಗೋಡಿ, ಈಶ್ವರಪ್ಪ ಕುಂಬಾರ, ರಾಜು ಕಂಬಳಿ, ಮಲ್ಲಪ್ಪ ಚಕ್ರಸಾಲಿ, ಸೋಮು ಕರ್ಜೆಕಣ್ಣವರ, ಭರಮಪ್ಪ ಅಣ್ಣಿಗೇರಿ, ಜಗದೀಶ, ಆಕಾಶ ಅನೇಕರಿದ್ದರು.

ಪ್ರಿಯಾಂಕಾ ಹಾವೇರಿ, ಅನುಷಾ ಅಗಡಿ, ಮೇಘಾ ಅಂಕಲಕೋಟಿ, ನವೀನ ಕುಲಕರ್ಣಿ, ನಾಗನಗೌಡ ಚಿಕ್ಕನಗೌಡ, ರಾಘವೇಂದ್ರ ಕ್ಷ ತ್ರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಲಾ ಸುಜಯ ಭರತನಾಟ್ಯ ಶಾಲೆಯ ವಿ. ಸುಜಯ ಶಾನಭಾಗ್‌, ಭವ್ಯ ಕತ್ತಿ ಅವರಿಂದ ಭರತನಾಟ್ಯ, ಕಲಾ ಕುಸುಮ ಜಾನಪದ ಮಹಿಳಾ ತಂಡದಿಂದ ಜಾನಪದ ಜಾತ್ರೆ ಜರುಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ