ಆ್ಯಪ್ನಗರ

ಜ್ಞಾನ ಗುಣಮಟ್ಟ ಶಿಕ್ಷಣದ ತಳಹದಿಯಾಗಲಿ

ಗದಗ: ಶಿಕ್ಷಣ ಗುಣಾತ್ಮಕತೆಯಿಂದ ಕೂಡಿರಬೇಕು. ಇದರ ಮೂಲಕ ವಿದ್ಯಾರ್ಥಿಗಳಲ್ಲಿಗುಣಾತ್ಮಕತೆ ತರಲು ಸಾಧ್ಯ. ವಿಚಾರ ಸಂಕಿರಣದ ಉಪಯೋಗವನ್ನು ಪ್ರತಿಯೊಬ್ಬರು ಉಪಯೋಗಿಸಿಕೊಳ್ಳಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಆರ್‌.ಆರ್‌. ಮದನಕರ ಹೇಳಿದರು.

Vijaya Karnataka 27 Aug 2019, 5:00 am
ಗದಗ: ಶಿಕ್ಷಣ ಗುಣಾತ್ಮಕತೆಯಿಂದ ಕೂಡಿರಬೇಕು. ಇದರ ಮೂಲಕ ವಿದ್ಯಾರ್ಥಿಗಳಲ್ಲಿಗುಣಾತ್ಮಕತೆ ತರಲು ಸಾಧ್ಯ. ವಿಚಾರ ಸಂಕಿರಣದ ಉಪಯೋಗವನ್ನು ಪ್ರತಿಯೊಬ್ಬರು ಉಪಯೋಗಿಸಿಕೊಳ್ಳಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಆರ್‌.ಆರ್‌. ಮದನಕರ ಹೇಳಿದರು.
Vijaya Karnataka Web be the foundation of knowledge quality education
ಜ್ಞಾನ ಗುಣಮಟ್ಟ ಶಿಕ್ಷಣದ ತಳಹದಿಯಾಗಲಿ


ಸ್ಥಳೀಯ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿನಡೆದ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಪ್ರಶಿಕ್ಷಣಾರ್ಥಿಗಳು ಮುಂದಿನ ನಿಜವಾದ ಶಿಕ್ಷಕರು. ಜ್ಞಾನವು ಗುಣಮಟ್ಟ ಶಿಕ್ಷಣದ ತಳಹದಿಯಾಗಬೇಕು. ಗುಣಮಟ್ಟದ ಶಿಕ್ಷಣಕ್ಕೆ ಇರುವ ಪ್ರಚಲಿತ ಸವಾಲು ಎದುರಿಸಬೇಕು ಎಂದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ತಮ್ಮ ಸಂಶೋಧನಾ ಲೇಖನಗಳನ್ನು ವಿದ್ವತ್ತಪೂರ್ಣವಾಗಿ ಪ್ರಸ್ತುತ ಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಮಿತಿ ಚೇರಮನ್‌ ಭುಜಂಗಸ್ವಾಮಿ ಇನಾಮದಾರ, ಚಂದ್ರಣ್ಣ ಬಾಳಿಹಳ್ಳಿಮಠ, ರೇವಣಸಿದ್ದೇಶ್ವರಸ್ವಾಮಿ ಹಿರೇಮಠ, ಅಜ್ಜಣ್ಣ ಮುಧೋಳ, ಡಾ.ಎಚ್‌.ವಿ. ವಾಮದೇವಪ್ಪ, ಡಾ. ಶಿವಕುಮಾರ ಗಾಣಾಪೂರ, ಪ್ರೊ.ಎಂ.ಎಸ್‌. ಹೊಟ್ಟಿನ್‌, ಪ್ರೊ.ಸುರೇಶ ಮಾಬಿನ್‌, ಡಾ.ಎಸ್‌.ಎಲ್‌. ಹಿರೇಕೆರೂರ, ವಿಜಯಕುಮಾರ ಗಡ್ಡಿ, ವಿಜಯಕುಮಾರ ಮುತ್ತಿನಪೆಂಡಿಮಠ ಇದ್ದರು.

ರಾಜೇಶ್ವರಿ ಜಿಗಳೂರು ಪ್ರಾರ್ಥಿಸಿದರು. ಪ್ರಾಚಾರ್ಯ ಬಿ.ಸಿ.ಉಪ್ಪಿನ ಸ್ವಾಗತಿಸಿದರು. ಡಾ.ಮಾಲಾ ಶಿರೋಳ ನಿರೂಪಿಸಿದರು. ಡಾ.ಬಸವರಾಜ ಎಮ್‌.ಎಚ್‌., ಸುಮಂಗಲಾ ರಾಯನಗೌಡರ ಪರಿಚಯಿಸಿದರು. ಬಿ.ಬಿ. ಹೊಳಗುಂದಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ