ಆ್ಯಪ್ನಗರ

ಭಜಂತ್ರಿಯವರ ಕವನಗಳಲ್ಲಿ ಜೀವನಾನುಭವ

ನರಗುಂದ : ಬಾಲ್ಯದಲ್ಲಿ ಅನುಭವಿಸಿದ ಪಾಡು ಹಾಡಾಗಿ ಹೊರಹೊಮ್ಮಿದೆ. ಅವರ ಕಥೆ, ಕಾವ್ಯದುದ್ದಕ್ಕೂ ಅವಮಾನ ಎದುರಿಸಿದ ರೀತಿ, ಅದನ್ನು ಬೇಧಿಸಿ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದ ಬಗೆ ವಿಶಿಷ್ಟವಾಗಿದೆ ಎಂದು ಸವದತ್ತಿಯ ಡಾ.ವೈ.ಎಂ.ಯಾಕೊಳ್ಳಿ ಹೇಳಿದರು.

Vijaya Karnataka 9 Jun 2019, 5:00 am
ನರಗುಂದ : ಬಾಲ್ಯದಲ್ಲಿ ಅನುಭವಿಸಿದ ಪಾಡು ಹಾಡಾಗಿ ಹೊರಹೊಮ್ಮಿದೆ. ಅವರ ಕಥೆ, ಕಾವ್ಯದುದ್ದಕ್ಕೂ ಅವಮಾನ ಎದುರಿಸಿದ ರೀತಿ, ಅದನ್ನು ಬೇಧಿಸಿ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದ ಬಗೆ ವಿಶಿಷ್ಟವಾಗಿದೆ ಎಂದು ಸವದತ್ತಿಯ ಡಾ.ವೈ.ಎಂ.ಯಾಕೊಳ್ಳಿ ಹೇಳಿದರು.
Vijaya Karnataka Web GDG-7NRD1
ನರಗುಂದ ತಾಲೂಕು ಭೈರನಹಟ್ಟಿ ದೊರೆಸ್ವಾಮಿಮಠದಲ್ಲಿ ಡಾ.ಭಜಂತ್ರಿ ಸಾಹಿತ್ಯ ವಿಚಾರ ಸಂಕಿರಣದಲ್ಲಿ ಡಾ.ಶೋಭಾ ಮಾತನಾಡಿದರು.


ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಗದುಗ ಡಾ.ತೋಂಟದ ಸಿದ್ದಲಿಂಗ ಶ್ರೀಗಳ ವೇದಿಕೆಯಲ್ಲಿ ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಹಾಗೂ ಡಾ.ಭಜಂತ್ರಿಯವರ ವಿದ್ಯಾರ್ಥಿ ಬಳಗದ ಆಶ್ರಯದಲ್ಲಿ ನಡೆದ ಡಾ.ವೈ.ಎಂ.ಭಜಂತ್ರಿಯವರ ಸಾಹಿತ್ಯ ಕುರಿತು ವಿಚಾರ ಸಂಕಿರಣದ ವಿಶೇಷ ಗೋಷ್ಠಿಯಲ್ಲಿ ಮಾತನಾಡಿದರು.

ಡಾ.ಭಜಂತ್ರಿಯವರು 10ನೇ ತರಗತಿಯಿಂದಲೇ ಕಥೆ, ಕಾವ್ಯ ಬರೆದವರು. ಆದರೆ ಅದು ಬೆಳಕಿಗೆ ಬಂದದ್ದು 2009ರಲ್ಲಿ ಕೆಂಪು ನೀರು ಎಂಬ ಪುಸ್ತಕದ ಮೂಲಕ. ಅಲ್ಲಿ ಪ್ರತಿ ಕವನಗಳು ಅವರ ಜೀವನಾನುಭವ ತೆರೆದಿಟ್ಟರೆ, ಇಂದಿನ ಕೆಳವರ್ಗದ, ಶೋಷಿತ ಜನಾಂಗದ ಬದುಕಿಗೆ ದಾರಿದೀಪವಾಗಿವೆ ಎಂದರು.

ಡಾ.ಶೋಭಾ ಚಪ್ಪರದಹಳ್ಳಿಮಠ ಮಾತನಾಡಿ, ಕಥೆಗಳೆಂದರೆ ಹೀಗೇ ಇರಬೇಕು ಎನ್ನುವುದಕ್ಕೆ ಹೊಸ ಮಾದರಿ ಸೃಷ್ಟಿಸಿವೆ ಎಂದರು.

ಗ್ರಂಥ ಸಂಪಾದನೆ ಕುರಿತು ಡಾ.ಜೀನದತ್ತ ಹಡಗಲಿ,ಡಾ.ಭಜಂತ್ರಿಯವರ ಸಂಶೋಧನೆ, ವಿಮರ್ಶೆ ಕುರಿತು ಡಾ.ಬಿ.ಜಿ.ಬಿರಾದಾರ, ಬದುಕಿನ ನಡೆ ಕುರಿತು ಡಾ.ಬಿ.ಎಸ್‌.ಭಜಂತ್ರಿ ಮಾತನಾಡಿದರು.

ಡಾ.ವೈ.ಎಂ.ಭಜಂತ್ರಿ ಮಾತನಾಡಿ, ಬಾಲ್ಯದಿಂದ ಪಟ್ಟ ಕಷ್ಟ,ನೋವು, ನಲಿವು ನನ್ನ ಸಾಹಿತ್ಯಕ್ಕೆ ಮೂಲ ಪ್ರೇರಣೆ.

ನನ್ನ ತಂದೆ, ತಾಯಿಗಳು ನನಗೆ ನೀಡಿದ ಶಿಕ್ಷ ಣ ನನ್ನನ್ನು ಈ ಹಂತಕ್ಕೆ ಬೆಳೆಸಿದೆ ಎಂದರು.

ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಂಕ್ರಣ್ಣ ಸಂಕನ್ನವರ ಕ್ರಾಂತಿಗೀತೆ ಹೇಳಿದರು. ವೇದಿಕೆ ಮೇಲೆ ಡಾ.ಎಸ್‌.ಬಿ.ಕೋಲ್ಕಾರ, ಡಾ.ಅರ್ಜುನ ಗೊಳಸಂಗಿ, ವಿನಾಯಕ ಕಮತರ, ಪಿ.ಎಸ್‌.ಅಣ್ಣಿಗೇರಿ ಇದ್ದರು. ಮಹಾಂತೇಶ ಹಿರೇಮಠ ಸ್ವಾಗತಿಸಿದರು. ರಮೇಶ ಐನಾಪೂರ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ