ಯಲ್ಲಪ್ಪ ತಳವಾರ
ರೋಣ : ಅಂತೂ ಇಂತೂ ಶೈಕ್ಷ ಣಿಕ ವರ್ಷ ಆರಂಭಗೊಂಡು 2 ತಿಂಗಳ ಬಳಿಕ ಪಟ್ಟಣದ ಎಸ್.ಆರ್.ಪಾಟೀಲ ಮಾದರಿ ಶಾಲೆಗೆ ಸೈಕಲ್ಗಳು ತಲುಪಿವೆ. ಇಷ್ಟು ದಿನ 8ನೇ ತರಗತಿಯ ವಿದ್ಯಾರ್ಥಿಗಳು ಸೈಕಲ್ಗಾಗಿ ಕಾದು ಕುಳಿತಿದ್ದರೂ ಸೈಕಲ್ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. ತಾಲೂಕಿನಲ್ಲಿ ಸೈಕಲ್ ಜೋಡಣೆ ಕಾರ್ಯ ನಡೆದಿದ್ದು,ವಿತರಣೆ ಮಾತ್ರ ಬಾಕಿಯಿದೆ.
ಶೈಕ್ಷ ಣಿಕ ಅವಧಿ ಆರಂಭದಲ್ಲಿಯೇ ಸೈಕಲ್ ವಿತರಿಸಿದರೆ ಅನುಕೂಲ. ಜುಲೈ ತಿಂಗಳಲ್ಲಿ ಎಲ್ಲ ವಿಷಯಗಳ ತರಗತಿ ಆರಂಭವಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೈಕಲ್ ಇಲ್ಲದೆ ಶಾಲೆಗೆ ಹೋಗುವುದು ಕಷ್ಟವಾಗಿದೆ. 2 ತಿಂಗಳು ತಡವಾಗಿ ಸೈಕಲ್ ರೋಣಕ್ಕೆ ಬಂದಿವೆ. ಇನ್ನೂ ಅವುಗಳ ಜೋಡಣೆ ಕಾರ್ಯ ನಡೆಯುತ್ತಿದೆ. ಎಲ್ಲ ಮುಗಿದು ವಿದ್ಯಾರ್ಥಿಗಳ ಕೈ ಸೇರಲು ಕನಿಷ್ಠವೆಂದರೂ ಇನ್ನೊಂದು ತಿಂಗಳು ಕಾಯಬೇಕು. ಶೈಕ್ಷ ಣಿಕ ವರ್ಷದ ಆರಂಭದಲ್ಲಿ ವಿತರಿಸುವ ಬದಲು ಈಗ ಸೈಕಲ್ ವಿತರಣೆಗೆ ಮುಂದಾಗುವುದರ ಪ್ರಯೋಜನವೇ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.
ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಸರಕಾರ ಮಾಡಿರುವ ಯೋಜನೆಗಳಲ್ಲಿ ಸೈಕಲ್ ಭಾಗ್ಯ ಕೂಡ ಒಂದಾಗಿದ್ದು, ಶಾಲೆ ಪ್ರಾರಂಭದ ಸಮಯದಲ್ಲಿ ಸಿಗಬೇಕಾದ ಸೈಕಲ್ಗಳು,ಜುಲೈ ಕೊನೆ ವಾರದಲ್ಲಿ ತಾಲೂಕು ಕೇಂದ್ರಕ್ಕೆ ದೌಡಾಯಿಸಿವೆ. 8ನೇ ತರಗತಿಗೆ ಹೋದರೆ ನಮಗೆ ಸೈಕಲ್ಗಳು ಬರುತ್ತವೆ ಎಂಬ ಕನಸು ಹೊತ್ತ ಮಕ್ಕಳಲ್ಲಿ ಸಂತಸ ಮೂಡಿದೆ.
ಏನಿದು ಯೋಜನೆ ? : ಬಡತನ ರೇಖೆಗಿಂತ ಕೆಳಗಿನ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಯೋಜನೆಯನ್ನು 2007ರಲ್ಲಿ ಸರಕಾರ ಜಾರಿಗೆ ತಂದಿದೆ. ಆದರೆ ಪ್ರಸಕ್ತ ವರ್ಷ ಶಾಲೆ ಆರಂಭಗೊಂಡು ಎರಡು ತಿಂಗಳು ಕಳೆಯುತ್ತಿದ್ದರೂ ಮಕ್ಕಳ ಕೈಸೇರುತ್ತಿಲ್ಲ.
3555 ವಿದ್ಯಾರ್ಥಿಗಳು : ತಾಲೂಕಿನಲ್ಲಿ ಒಟ್ಟು 31 ಸರಕಾರಿ ಪ್ರೌಢಶಾಲೆಗಳು, 31 ಅನುದಾನಿತ ಪ್ರೌಢಶಾಲೆಗಳು ಹಾಗೂ 52 ಉನ್ನತಿಕರಿಸಿದ ಶಾಲೆಗಳು ಸೇರಿದಂತೆ 114 ಶಾಲೆಗಳಲ್ಲಿ ಒಟ್ಟು 3555 ವಿದ್ಯಾರ್ಥಿಗಳಿದ್ದು ಇವರಲ್ಲಿ 1902 ಹೆಣ್ಣು ಹಾಗೂ 1653 ಗಂಡು ಮಕ್ಕಳು 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಗ್ರಾಮೀಣ ಭಾಗದ ಭಾಗದಲ್ಲಿ 2300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ, 1256 ವಿದ್ಯಾರ್ಥಿಗಳು ಪಟ್ಟಣಗಳಲ್ಲಿ ಓದುತ್ತಿದ್ದಾರೆ. ಆದರೆ ಇವರೆಲ್ಲರಿಗೂ ಜುಲೈ ಮುಗಿಯುತ್ತ ಬಂದರೂ ಸೈಕಲ್ ವಿತರಣೆಯಾಗಿಲ್ಲ.
ಜೋಡಣಿ ಕಾರ್ಯ ಮುಗಿದಿಲ್ಲ : ಮಕ್ಕಳಿಗೆ ಸೈಕಲ್ ವಿತರಿಸಲು ಕಳೆದ 15 ದಿನಗಳಿಂದ ಪಟ್ಟಣದ ಎಸ್.ಆರ್.ಪಾಟೀಲ ಕೇಂದ್ರ ಮಾದರಿ ಶಾಲೆಯಲ್ಲಿ ಸೈಕಲ್ ಜೋಡಣೆ ಕಾರ್ಯ ಸಾಗಿದೆ. ಈವರೆಗೂ ಕೇವಲ 500 ಸೈಕಲ್ ಜೋಡಣೆ ಕಾರ್ಯ ಮುಗಿದಿದ್ದು,ಇನ್ನೂ 3055 ಸೈಕಲ್ ಜೋಡಣೆಯಾಗಬೇಕಿದೆ. ಇವೆಲ್ಲ ಜೋಡಣೆಯಾಗಲೂ ಕನಿಷ್ಠ ಒಂದು ತಿಂಗಳು ಬೇಕು. ಅಷ್ಟಕ್ಕೆ ಅರ್ಧ ಶೈಕ್ಷ ಣಿಕ ವರ್ಷ ಕಳೆಯುತ್ತದೆ ನಂತರ ವಿದ್ಯಾರ್ಥಿಗಳ ಕೈಸೇರುವ ಸಾಧ್ಯತೆಯಿದೆ.
ಇನ್ನು ಬಂದಿಲ್ಲ ಸಮವಸ್ತ್ರ : ಪ್ರಸಕ್ತ ಶೈಕ್ಷ ಣಿಕ ವರ್ಷ ಆರಂಭವಾಗಿ ಎರಡು ಕಳೆಯುತ್ತ ಬಂದರೂ ಇನ್ನೂ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇನ್ನು ಸಮವಸ್ತ್ರ ಪೂರೈಕೆಯಾಗಿಲ್ಲ. ಸಮವಸ್ತ್ರ ಸಮಾನತೆಯ ಸಂಕೇತ ಆದರೆ ಸರಕಾರಿ ಶಾಲೆ ಮಕ್ಕಳಿಗೆ ಹೊಸ ಸಮವಸ್ತ್ರ ಪೂರೈಕೆಯಾದ ಕಾರಣ ಸಾಕಷ್ಟು ಮಕ್ಕಳು ಹರಿದಿರುವ ಸಮವಸ್ತ್ರ ಹಾಕಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ.
ರೋಣ : ಅಂತೂ ಇಂತೂ ಶೈಕ್ಷ ಣಿಕ ವರ್ಷ ಆರಂಭಗೊಂಡು 2 ತಿಂಗಳ ಬಳಿಕ ಪಟ್ಟಣದ ಎಸ್.ಆರ್.ಪಾಟೀಲ ಮಾದರಿ ಶಾಲೆಗೆ ಸೈಕಲ್ಗಳು ತಲುಪಿವೆ. ಇಷ್ಟು ದಿನ 8ನೇ ತರಗತಿಯ ವಿದ್ಯಾರ್ಥಿಗಳು ಸೈಕಲ್ಗಾಗಿ ಕಾದು ಕುಳಿತಿದ್ದರೂ ಸೈಕಲ್ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. ತಾಲೂಕಿನಲ್ಲಿ ಸೈಕಲ್ ಜೋಡಣೆ ಕಾರ್ಯ ನಡೆದಿದ್ದು,ವಿತರಣೆ ಮಾತ್ರ ಬಾಕಿಯಿದೆ.
ಶೈಕ್ಷ ಣಿಕ ಅವಧಿ ಆರಂಭದಲ್ಲಿಯೇ ಸೈಕಲ್ ವಿತರಿಸಿದರೆ ಅನುಕೂಲ. ಜುಲೈ ತಿಂಗಳಲ್ಲಿ ಎಲ್ಲ ವಿಷಯಗಳ ತರಗತಿ ಆರಂಭವಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೈಕಲ್ ಇಲ್ಲದೆ ಶಾಲೆಗೆ ಹೋಗುವುದು ಕಷ್ಟವಾಗಿದೆ. 2 ತಿಂಗಳು ತಡವಾಗಿ ಸೈಕಲ್ ರೋಣಕ್ಕೆ ಬಂದಿವೆ. ಇನ್ನೂ ಅವುಗಳ ಜೋಡಣೆ ಕಾರ್ಯ ನಡೆಯುತ್ತಿದೆ. ಎಲ್ಲ ಮುಗಿದು ವಿದ್ಯಾರ್ಥಿಗಳ ಕೈ ಸೇರಲು ಕನಿಷ್ಠವೆಂದರೂ ಇನ್ನೊಂದು ತಿಂಗಳು ಕಾಯಬೇಕು. ಶೈಕ್ಷ ಣಿಕ ವರ್ಷದ ಆರಂಭದಲ್ಲಿ ವಿತರಿಸುವ ಬದಲು ಈಗ ಸೈಕಲ್ ವಿತರಣೆಗೆ ಮುಂದಾಗುವುದರ ಪ್ರಯೋಜನವೇ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.
ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಸರಕಾರ ಮಾಡಿರುವ ಯೋಜನೆಗಳಲ್ಲಿ ಸೈಕಲ್ ಭಾಗ್ಯ ಕೂಡ ಒಂದಾಗಿದ್ದು, ಶಾಲೆ ಪ್ರಾರಂಭದ ಸಮಯದಲ್ಲಿ ಸಿಗಬೇಕಾದ ಸೈಕಲ್ಗಳು,ಜುಲೈ ಕೊನೆ ವಾರದಲ್ಲಿ ತಾಲೂಕು ಕೇಂದ್ರಕ್ಕೆ ದೌಡಾಯಿಸಿವೆ. 8ನೇ ತರಗತಿಗೆ ಹೋದರೆ ನಮಗೆ ಸೈಕಲ್ಗಳು ಬರುತ್ತವೆ ಎಂಬ ಕನಸು ಹೊತ್ತ ಮಕ್ಕಳಲ್ಲಿ ಸಂತಸ ಮೂಡಿದೆ.
ಏನಿದು ಯೋಜನೆ ? : ಬಡತನ ರೇಖೆಗಿಂತ ಕೆಳಗಿನ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಯೋಜನೆಯನ್ನು 2007ರಲ್ಲಿ ಸರಕಾರ ಜಾರಿಗೆ ತಂದಿದೆ. ಆದರೆ ಪ್ರಸಕ್ತ ವರ್ಷ ಶಾಲೆ ಆರಂಭಗೊಂಡು ಎರಡು ತಿಂಗಳು ಕಳೆಯುತ್ತಿದ್ದರೂ ಮಕ್ಕಳ ಕೈಸೇರುತ್ತಿಲ್ಲ.
3555 ವಿದ್ಯಾರ್ಥಿಗಳು : ತಾಲೂಕಿನಲ್ಲಿ ಒಟ್ಟು 31 ಸರಕಾರಿ ಪ್ರೌಢಶಾಲೆಗಳು, 31 ಅನುದಾನಿತ ಪ್ರೌಢಶಾಲೆಗಳು ಹಾಗೂ 52 ಉನ್ನತಿಕರಿಸಿದ ಶಾಲೆಗಳು ಸೇರಿದಂತೆ 114 ಶಾಲೆಗಳಲ್ಲಿ ಒಟ್ಟು 3555 ವಿದ್ಯಾರ್ಥಿಗಳಿದ್ದು ಇವರಲ್ಲಿ 1902 ಹೆಣ್ಣು ಹಾಗೂ 1653 ಗಂಡು ಮಕ್ಕಳು 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಗ್ರಾಮೀಣ ಭಾಗದ ಭಾಗದಲ್ಲಿ 2300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ, 1256 ವಿದ್ಯಾರ್ಥಿಗಳು ಪಟ್ಟಣಗಳಲ್ಲಿ ಓದುತ್ತಿದ್ದಾರೆ. ಆದರೆ ಇವರೆಲ್ಲರಿಗೂ ಜುಲೈ ಮುಗಿಯುತ್ತ ಬಂದರೂ ಸೈಕಲ್ ವಿತರಣೆಯಾಗಿಲ್ಲ.
ಜೋಡಣಿ ಕಾರ್ಯ ಮುಗಿದಿಲ್ಲ : ಮಕ್ಕಳಿಗೆ ಸೈಕಲ್ ವಿತರಿಸಲು ಕಳೆದ 15 ದಿನಗಳಿಂದ ಪಟ್ಟಣದ ಎಸ್.ಆರ್.ಪಾಟೀಲ ಕೇಂದ್ರ ಮಾದರಿ ಶಾಲೆಯಲ್ಲಿ ಸೈಕಲ್ ಜೋಡಣೆ ಕಾರ್ಯ ಸಾಗಿದೆ. ಈವರೆಗೂ ಕೇವಲ 500 ಸೈಕಲ್ ಜೋಡಣೆ ಕಾರ್ಯ ಮುಗಿದಿದ್ದು,ಇನ್ನೂ 3055 ಸೈಕಲ್ ಜೋಡಣೆಯಾಗಬೇಕಿದೆ. ಇವೆಲ್ಲ ಜೋಡಣೆಯಾಗಲೂ ಕನಿಷ್ಠ ಒಂದು ತಿಂಗಳು ಬೇಕು. ಅಷ್ಟಕ್ಕೆ ಅರ್ಧ ಶೈಕ್ಷ ಣಿಕ ವರ್ಷ ಕಳೆಯುತ್ತದೆ ನಂತರ ವಿದ್ಯಾರ್ಥಿಗಳ ಕೈಸೇರುವ ಸಾಧ್ಯತೆಯಿದೆ.
ಇನ್ನು ಬಂದಿಲ್ಲ ಸಮವಸ್ತ್ರ : ಪ್ರಸಕ್ತ ಶೈಕ್ಷ ಣಿಕ ವರ್ಷ ಆರಂಭವಾಗಿ ಎರಡು ಕಳೆಯುತ್ತ ಬಂದರೂ ಇನ್ನೂ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇನ್ನು ಸಮವಸ್ತ್ರ ಪೂರೈಕೆಯಾಗಿಲ್ಲ. ಸಮವಸ್ತ್ರ ಸಮಾನತೆಯ ಸಂಕೇತ ಆದರೆ ಸರಕಾರಿ ಶಾಲೆ ಮಕ್ಕಳಿಗೆ ಹೊಸ ಸಮವಸ್ತ್ರ ಪೂರೈಕೆಯಾದ ಕಾರಣ ಸಾಕಷ್ಟು ಮಕ್ಕಳು ಹರಿದಿರುವ ಸಮವಸ್ತ್ರ ಹಾಕಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ.