ಆ್ಯಪ್ನಗರ

ಆಲೂರ ವೆಂಕಟರಾಯರ ಜನ್ಮದಿನಾಚರಣೆ

ಹೊಳೆಆಲೂರ : ಒಡೆದು, ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದು ಮಾಡಿದ್ದು ಇಲ್ಲಿನ ಆಲೂರ ವೆಂಕಟರಾಯರು ಎನ್ನುವುದು ನಮ್ಮ ಹೆಮ್ಮ. ಅವರ ಋುಣವನ್ನು ರಾಜ್ಯದ ಜನತೆ ಎಂದೂ ಮರೆಯಲಾರರು ಎಂದು ಕಸಾಪ ಹೋಬಳಿ ಅಧ್ಯಕ್ಷ ಮಹೇಶ ಕರಡದರ ಹೇಳಿದರು. ಅವರು ಇಲ್ಲಿನ ವೆಂಕಟರಾವ್‌ ವೃತ್ತದಲ್ಲಿ ಆಲೂರ ವೆಂಕಟರಾಯರ ಜಯಂತಿ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

Vijaya Karnataka 13 Jul 2019, 5:00 am
ಹೊಳೆಆಲೂರ : ಒಡೆದು, ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದು ಮಾಡಿದ್ದು ಇಲ್ಲಿನ ಆಲೂರ ವೆಂಕಟರಾಯರು ಎನ್ನುವುದು ನಮ್ಮ ಹೆಮ್ಮ. ಅವರ ಋುಣವನ್ನು ರಾಜ್ಯದ ಜನತೆ ಎಂದೂ ಮರೆಯಲಾರರು ಎಂದು ಕಸಾಪ ಹೋಬಳಿ ಅಧ್ಯಕ್ಷ ಮಹೇಶ ಕರಡದರ ಹೇಳಿದರು. ಅವರು ಇಲ್ಲಿನ ವೆಂಕಟರಾವ್‌ ವೃತ್ತದಲ್ಲಿ ಆಲೂರ ವೆಂಕಟರಾಯರ ಜಯಂತಿ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
Vijaya Karnataka Web GDG-12HLR1
ಕಸಾಪ ಹೋಬಳಿ ಘಟಕದಿಂದ ಹೊಳೆಆಲೂರಿನ ಗಾಡಗೋಳಿ ಕ್ರಾಸ್‌ ಬಳಿಯ ಆಲೂರ ವೆಂಕಟರಾಯರ ಜನ್ಮದಿನ ಪ್ರಯುಕ್ತ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.


ಕನ್ನಡ ಭಾಷೆಗೆ, ನಾಡಿನ ಗಡಿಗಳಿಗೆ ನಮ್ಮ ತಲೆಮಾರಿನವರು ಅವರ ಕೊಡುಗೆ ಕುರಿತು ಅರಿಯುವುದು ಬಹಳ ಮುಖ್ಯವಾಗಿದೆ ಎಂದರು.

ಬೆಳಗ್ಗೆ ಕಸಾಪದಿಂದ ಗಾಡಗೋಳಿ ಕ್ರಾಸ್‌ಲ್ಲಿರುವ ಆಲೂರ ವೆಂಕಟರಾಯರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

ಕಸಾಪ ಪ್ರಧಾನ ಕಾರ್ಯದರ್ಶಿ ಕಲ್ಮೇಶ ಗಾಣಿಗೇರ, ಖಜಾಂಚಿ ಎಂ.ವಿ.ಪಾಟೀಲ, ಯಚ್ಚರಪ್ಪ ಸನಬದ, ಶಶಿಧರ ಹಿರೇಮಠ, ಚಂದ್ರು ಬಿಳೇಕಲ್‌, ಮೇಘರಾಜ ಮಠಪತಿ, ಸನಬದ, ಎಸ್‌.ಜಿ. ಮಾಳವಾಡ, ಶ್ರೀಕಾಂತ ಲಮಾಣಿ, ಮಹೇಶ ಪಾಟೀಲ, ನಿಂಗಬಸಪ್ಪ ಚಲವಾದಿ, ವಾಸು ದಾಮೋದರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ