ಲಕ್ಷ್ಮೇಶ್ವರ: ಪಟ್ಟಣದ ಹಜರತ್ ಸಯ್ಯದ ಸುಲೇಮಾನ ಖಾದ್ರಿ ಉಫ್ರ್ ದೂದಪೀರಾಂ ದರ್ಗಾ ಮ್ಯಾನೇಜಿಂಗ್ ಕಮೀಟಿ ಮತ್ತು ಅಂಜುಮನ್ ಏ-ಇಸ್ಲಾಂ ಕಮಿಟಿ ಆಶ್ರಯದಲ್ಲಿಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ದೂದಪೀರಾಂ ದರ್ಗಾ ಸುಲೇಮಾನಿಯಾ ಶಾದಿಮಹಲ್ನಲ್ಲಿಪ್ರಥಮಬಾರಿಗೆ ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ ನೆರವೇರಿಸಲಾಯಿತು.
6 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದೂದಪೀರಾಂ ಕಮಿಟಿ ಹಾಗೂ ಅಂಜುಮನ್ ಏ-ಇಸ್ಲಾಂ ವತಿಯಿಂದ ವಧುವಿಗೆ ತಾಳಿ, ಸೀರೆ ಹಾಗೂ ಇನ್ನಿತರ ಅಗತ್ಯ ವಸ್ತುಗಳು ಅದರಂತೆ ವರನಿಗೆ ಬೆಳ್ಳಿ ಉಂಗುರ, ಬಟ್ಟೆ, ಇನ್ನಿತರ ವಸ್ತುಗಳನ್ನು ನೀಡಲಾಯಿತು. ನೂತನ ವಧುವರರಿಗೆ ಪ್ರಮಾಣಪತ್ರಗಳನ್ನು ಕಮಿಟಿಯಿಂದ ನೀಡಲಾಯಿತು.
ವಧು ವರರಿಗೆ ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಹಾಗೂ ಸೋಮಣ್ಣ ಮುಳಗುಂದ, ಚಂಬಣ್ಣ ಬಾಳಿಕಾಯಿ ಗದಗ ಜಿಲ್ಲಾವಕ್ಫ್ ಕಮೀಟಿ ಚೇರಮನ್ ದಂಡಿನ, ಎಸ್.ಡಿ.ಮಕಾನದಾರ ಆಗಮಿಸಿ ಶುಭಕೋರಿದರು.
ಎರಡು ಕಮಿಟಿ ಅಧ್ಯಕ್ಷ ಸುಲೇಮಾನ ಕಣಕೆ, ಅನ್ವರಸಾಬ ಹವಾಲ್ದಾರ ಮಾತನಾಡಿ, ಸಮಾಜದಲ್ಲಿಸಾಕಷ್ಟು ಜನ ಬಡವರಿದ್ದು, ವಿವಾಹ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿಸಾಮಾಜಿಕ ಕಳಕಳಿಯಿಂದ ಪ್ರಥಮ ಬಾರಿಗೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಇದನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಮೌಲ್ವಿಗಳು ಸಂಪ್ರದಾಯದಂತೆ ವಿವಾಹ ನೆರವೇರಿಸಿದರು. ಜಮೀಲ ಸೂರಣಗಿ, ಡಿ.ಜೆ.ಮುಚ್ಚಾಲೆ, ಮಾಜಿ ಅಧ್ಯಕ್ಷ ಗೌಸುಸಾಬ ಕಾರಡಗಿ, ನಜೀರಸಾಬ ಗದಗ, ಅಬ್ದುಲ್ಕರೀಂ ಕರೀಂಖಾನವರ ಎಸ್.ಕೆ.ಹವಾಲ್ದಾರ, ಎಂ.ಎಂ.ಗದಗ, ಖ್ವಾಜಾಹುಸೇನ್ ಹಡಗಲಿ, ಶೌಕತ್ ಮುಳಗುಂದ, ಇಸ್ಮಾಯಿಲ್ ಆಡೂರ, ಮುಸ್ತಾಕ ಶಿರಹಟ್ಟಿ, ಫಿರ್ದೋಶ ಆಡೂರ, ಸಿಕಂದರ ಕಣಕೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
6 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದೂದಪೀರಾಂ ಕಮಿಟಿ ಹಾಗೂ ಅಂಜುಮನ್ ಏ-ಇಸ್ಲಾಂ ವತಿಯಿಂದ ವಧುವಿಗೆ ತಾಳಿ, ಸೀರೆ ಹಾಗೂ ಇನ್ನಿತರ ಅಗತ್ಯ ವಸ್ತುಗಳು ಅದರಂತೆ ವರನಿಗೆ ಬೆಳ್ಳಿ ಉಂಗುರ, ಬಟ್ಟೆ, ಇನ್ನಿತರ ವಸ್ತುಗಳನ್ನು ನೀಡಲಾಯಿತು. ನೂತನ ವಧುವರರಿಗೆ ಪ್ರಮಾಣಪತ್ರಗಳನ್ನು ಕಮಿಟಿಯಿಂದ ನೀಡಲಾಯಿತು.
ವಧು ವರರಿಗೆ ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಹಾಗೂ ಸೋಮಣ್ಣ ಮುಳಗುಂದ, ಚಂಬಣ್ಣ ಬಾಳಿಕಾಯಿ ಗದಗ ಜಿಲ್ಲಾವಕ್ಫ್ ಕಮೀಟಿ ಚೇರಮನ್ ದಂಡಿನ, ಎಸ್.ಡಿ.ಮಕಾನದಾರ ಆಗಮಿಸಿ ಶುಭಕೋರಿದರು.
ಎರಡು ಕಮಿಟಿ ಅಧ್ಯಕ್ಷ ಸುಲೇಮಾನ ಕಣಕೆ, ಅನ್ವರಸಾಬ ಹವಾಲ್ದಾರ ಮಾತನಾಡಿ, ಸಮಾಜದಲ್ಲಿಸಾಕಷ್ಟು ಜನ ಬಡವರಿದ್ದು, ವಿವಾಹ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿಸಾಮಾಜಿಕ ಕಳಕಳಿಯಿಂದ ಪ್ರಥಮ ಬಾರಿಗೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಇದನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಮೌಲ್ವಿಗಳು ಸಂಪ್ರದಾಯದಂತೆ ವಿವಾಹ ನೆರವೇರಿಸಿದರು. ಜಮೀಲ ಸೂರಣಗಿ, ಡಿ.ಜೆ.ಮುಚ್ಚಾಲೆ, ಮಾಜಿ ಅಧ್ಯಕ್ಷ ಗೌಸುಸಾಬ ಕಾರಡಗಿ, ನಜೀರಸಾಬ ಗದಗ, ಅಬ್ದುಲ್ಕರೀಂ ಕರೀಂಖಾನವರ ಎಸ್.ಕೆ.ಹವಾಲ್ದಾರ, ಎಂ.ಎಂ.ಗದಗ, ಖ್ವಾಜಾಹುಸೇನ್ ಹಡಗಲಿ, ಶೌಕತ್ ಮುಳಗುಂದ, ಇಸ್ಮಾಯಿಲ್ ಆಡೂರ, ಮುಸ್ತಾಕ ಶಿರಹಟ್ಟಿ, ಫಿರ್ದೋಶ ಆಡೂರ, ಸಿಕಂದರ ಕಣಕೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.