ಆ್ಯಪ್ನಗರ

ಬಿಎಸ್‌ಎನ್‌ಎಲ್‌ ನಿವೃತ್ತ ನೌಕರರ ಸಭೆ

ಗದಗ: ನಗರದ ದೂರವಾಣಿ ಕೇಂದ್ರ ಕಚೇರಿ ಆವರಣದಲ್ಲಿ ಬಿಎಸ್‌ಎನ್‌ಎಲ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ನಿವೃತ್ತ ನೌಕರರ ಸಭೆ ನಡೆಯಿತು. ರಾಜ್ಯ ಮಟ್ಟದ ವಲಯ ಕಾರ್ಯದರ್ಶಿ ಜಿ. ಜಿ. ಪಾಟೀಲ, ಮುದ್ದಯ್ಯ, ಪ್ರಕಾಶ ಪುರದ ಆಗಮಿಸಿದ್ದರು.

Vijaya Karnataka 12 Dec 2018, 5:00 am
ಗದಗ: ನಗರದ ದೂರವಾಣಿ ಕೇಂದ್ರ ಕಚೇರಿ ಆವರಣದಲ್ಲಿ ಬಿಎಸ್‌ಎನ್‌ಎಲ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ನಿವೃತ್ತ ನೌಕರರ ಸಭೆ ನಡೆಯಿತು. ರಾಜ್ಯ ಮಟ್ಟದ ವಲಯ ಕಾರ್ಯದರ್ಶಿ ಜಿ. ಜಿ. ಪಾಟೀಲ, ಮುದ್ದಯ್ಯ, ಪ್ರಕಾಶ ಪುರದ ಆಗಮಿಸಿದ್ದರು. ನೌಕರರ ಸಮಸ್ಯೆ ಮತ್ತು ನಿವೃತ್ತಿ ವೇತನ ವಿಮರ್ಶೆ ಇತ್ಯಾದಿ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಯಿತು. ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ಕೋಲ್ಕತಾ ಸಮ್ಮೇಳನಕ್ಕೆ ಪ್ರತಿನಿಧಿ ಆಯ್ಕೆ ಬಗ್ಗೆ ನಿರ್ಧರಿಸಲಾಯಿತು. ಇದೇ ವೇಳೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
Vijaya Karnataka Web bsnl retired employees meeting
ಬಿಎಸ್‌ಎನ್‌ಎಲ್‌ ನಿವೃತ್ತ ನೌಕರರ ಸಭೆ


ಅಧ್ಯಕ್ಷ ರಾಗಿ ಟಿ.ಎಲ್‌. ಬೇಲೂರ, ಕಾರ್ಯದರ್ಶಿಯಾಗಿ ಬಿ.ಎಲ್‌. ಪತ್ತಾರ, ಕೋಶಾಧ್ಯಕ್ಷ ರಾಗಿ ಎಸ್‌.ಎಸ್‌. ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಯಿತು.

ಬ್ಯಾಳಿ, ಎಸ್‌.ಎಂ. ಬಳ್ಳಾರಿ, ದೊಡ್ಡಮನಿ, ಕೊಟಗಿ, ಬಣಕಾರ, ಗೋಡಿ, ನಮಾಜಿ, ಸುಲಾಖೆ, ತಳವಾರ, ಉಪ್ಪಿನಬೆಟಗೇರಿ, ಪತ್ತಾರ, ಪುರದ, ಬಾರಕೇರ, ಮುಲ್ಲಾ ಜಂತ್ಲಿ ಇದ್ದರು. ರೇಣುಕಾ ಬಣಕಾರ ಪ್ರಾರ್ಥಿಸಿದರು. ಯು.ಎಂ. ಪುರದ ನಿರೂಪಿಸಿದರು.ಬೇಲೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ