ಆ್ಯಪ್ನಗರ

ಬುದ್ದನ ವಿಚಾರ ಮಾನವೀಯತೆ ಮಹಾಮಾರ್ಗ

ಗದಗ : ಬುದ್ದ- ಬಸವ-ಅಂಬೇಡ್ಕರ ಇವರೆಲ್ಲ ಮಹಾಚೇತನರು ಅವರ ತತ್ವ ಸಿದ್ಧಾಂತಗಳನ್ನು ಅರಿತುಕೊಳ್ಳಬೇಕಾಗಿದೆ. ಬುದ್ಧ ಜಗದ ಬೆಳಕು, ಬುದ್ದತ್ವ ಅರಿತು ಅರಗಿಸಿಕೊಂಡವರಿಗೆ ಮಾತ್ರ ಬುದ್ಧ ಸಿಗಬಲ್ಲ ಎಂದು ಚಿತ್ರಕಲಾವಿದ ವಿಜಯ ಕಿರೇಸೂರು ಹೇಳಿದರು.

Vijaya Karnataka 21 May 2019, 5:00 am
ಗದಗ : ಬುದ್ದ- ಬಸವ-ಅಂಬೇಡ್ಕರ ಇವರೆಲ್ಲ ಮಹಾಚೇತನರು ಅವರ ತತ್ವ ಸಿದ್ಧಾಂತಗಳನ್ನು ಅರಿತುಕೊಳ್ಳಬೇಕಾಗಿದೆ. ಬುದ್ಧ ಜಗದ ಬೆಳಕು, ಬುದ್ದತ್ವ ಅರಿತು ಅರಗಿಸಿಕೊಂಡವರಿಗೆ ಮಾತ್ರ ಬುದ್ಧ ಸಿಗಬಲ್ಲ ಎಂದು ಚಿತ್ರಕಲಾವಿದ ವಿಜಯ ಕಿರೇಸೂರು ಹೇಳಿದರು.
Vijaya Karnataka Web GDG-20RUDRAGOUD17
ಗದಗ ತೋಂಟದಾರ್ಯ ಮಠದ ಡಾ.ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರದ ನಿರಂಜನ ಸಭಾಂಗಣದಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮವನ್ನು ಬುದ್ಧನ ಚಿತ್ರಬಿಡಿಸುವ ಮೂಲಕ ಕಲಾವಿದ ವಿಜಯ ಕಿರೇಸೂರು ಉದ್ಘಾಟಿಸಿದರು


ನಗರದ ತೋಂಟದಾರ್ಯ ಮಠದ ಡಾ.ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರದ ನಿರಂಜನ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದಿಂದ ಏರ್ಪಡಿಸಿದ ಭಗವಾನ ಗೌತಮ ಬುದ್ಧ ಜಯಂತಿ ನಿಮಿತ್ತ ನಡೆದ ಬುದ್ಧ ಕಾವೋ ಸಮಾರಂಭವನ್ನು ಬುದ್ಧನ ಚಿತ್ರಬಿಡಿಸಿ, ಗೌತಮನ ಭಾವಚಿತ್ರಕ್ಕೆ ಮೇಣದಬತ್ತಿ ಹೊತ್ತಿಸಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಅರ್ಥವಾಗಬಲ್ಲ. ಬುದ್ಧನನ್ನು ಕಾವ್ಯ-ಚಿತ್ರ-ಕಥೆ-ಕಾದಂಬರಿಯಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂದು ಯುವ ಬುದ್ಧನ ಪ್ರೀತಿ, ಕರುಣೆ, ಶಾಂತಿ, ತ್ಯಾಗ ಪ್ರತಿಯೊಬ್ಬರಿಗೂ ಅತ್ಯವಶ್ಯ ಎಂದರು. ಬುದ್ಧಮಾರ್ಗ, ಬಸವ ಮಾರ್ಗ ಬೇರೆ ಅಲ್ಲ. ಎಲ್ಲ ಮಾನವೀಯತೆಯ ಮಹಾಮಾರ್ಗ ಎಂದು ಬುದ್ಧನ ಬಗೆಗಿನ ಕವಿತೆ ಓದಿದರು.

ಸಾಹಿತಿ ಡಾ.ವೈ.ಎಂ.ಭಜಂತ್ರಿ ಮಾತನಾಡಿ, ಬುದ್ಧ ಬೆಳಕು ನಮ್ಮ ಬಾಳ ಬೆಳಕಾಗಬೇಕು. ಆಸೆ, ವ್ಯಾಮೋಹ ತೊರೆಯುವವರಿಗೆ ಬುದ್ಧನ ಮಾರ್ಗ ಅತ್ಯಂತ ಮಹತ್ವದ್ದು ಎಂದರು. ನಂತರ ನಡೆದ ಕವಿಗೋಷ್ಠಿಯಲ್ಲಿ ವಸಂತ ಮಲ್ಲಾಪೂರ, ಅನಸೂಯಾ ಮಟ್ಟಿ, ನೀಲಮ್ಮ ಅಂಗಡಿ, ಎಸ್‌.ಎಸ್‌. ಸ್ಥಾವರಮಠ, ಎಂ.ಎಸ್‌.ಮುದಕನಗೌಡರ, ಪಿ.ಆರ್‌. ಹಿರೇಮಠ, ಎಂ.ಡಿ,ಮಾದರ, ಮಂಜುಳಾ ವೆಂಕಟೇಶಯ್ಯ, ಶಾರದಾ ಬಾಣದ, ವಿನಾಯಕ ಕಮತದ, ಆಸಿಫ್‌ ನಮಾಜಿ ಮುಂತಾದವರು ಬುದ್ಧನ ಕುರಿತು ಕವಿತೆ ಓದಿದರು.

ದಸಾಪ ರಾಜ್ಯಾಧ್ಯಕ್ಷ ಡಾ.ಎಚ್‌.ಬಿ.ಕೋಲ್ಕಾರ ಅಧ್ಯಕ್ಷ ತೆ ವಹಿಸಿ, ಬುದ್ಧನ ನೆಲದಲ್ಲಿ ಪ್ರೀತಿ, ಕರುಣೆ, ಶಾಂತಿ ಎಂದೂ ಬತ್ತದಿರಲಿ, ಬುದ್ಧ-ಬಸವ-ಅಂಬೇಡ್ಕರ ತತ್ವಭಾರತಕ್ಕೆ ಇಂದು-ಮುಂದು ಕೂಡ ಅಗತ್ಯ ಎಂದರು. ಡಾ.ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಅರ್ಜುನ ಗೊಳಸಂಗಿ, ಡಿ.ಎಚ್‌. ಮಲ್ಲೇಶಿ, ಶಿವು ಭಜಂತ್ರಿ, ಶಿವಾನಂದ ಕೊಟಗಾರ, ಆರ್‌.ಸಿ.ಹಿರೇಮಠ , ಶ್ರದ್ಧಾ ಬೆಳದಡಿ ಇದ್ದರು.ಎಸ್‌.ಎಸ್‌.ದೊಡ್ಡಮನಿ ಪ್ರಾರ್ಥಿಸಿದರು. ದಸಾಪ ಜಿಲ್ಲಾಧ್ಯಕ್ಷ ಈರಣ್ಣ ಮಾದರ ಸ್ವಾಗತಿಸಿದರು. ಎಂ.ಡಿ.ಮಾದರ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ