ಆ್ಯಪ್ನಗರ

ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಲಕ್ಷ್ಮೇಶ್ವರ : ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 2 ದಿನಗಳ ಭಾರತ ಬಂದ್‌ ಬೆಂಬಲಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಮೆರವಣಿಗೆ ನಡೆಸಿ ಬಂದ್‌ ಬೆಂಬಲ ವ್ಯಕ್ತಪಡಿಸಿದವು.

Vijaya Karnataka 9 Jan 2019, 5:00 am
ಲಕ್ಷ್ಮೇಶ್ವರ : ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 2 ದಿನಗಳ ಭಾರತ ಬಂದ್‌ ಬೆಂಬಲಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಮೆರವಣಿಗೆ ನಡೆಸಿ ಬಂದ್‌ ಬೆಂಬಲ ವ್ಯಕ್ತಪಡಿಸಿದವು.
Vijaya Karnataka Web GDG-08LXR02A
ಲಕ್ಷ್ಮೇಶ್ವರದ ಎಪಿಎಂಸಿ ಪ್ರಾಂಗಣ ಮುಂದೆ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಮಿಕರು ಪ್ರತಿಭಟನೆ ನಡೆಸಿದರು.


ಮಂಗಳವಾರ ಸಾರಿಗೆ ಸಂಸ್ಥೆ ಕಾರ್ಮಿಕರು ಬಸ್ಸ್‌ಗಳನ್ನು ಸ್ಥಗಿತಗೊಳಿಸಿ ಬಂದ್‌ ಬೆಂಬಲ ನೀಡಿದ್ದರೆ ಎಪಿಎಂಸಿ ಹಮಾಲರು, ಗ್ರಾಪಂ ಕಾರ್ಮಿಕರು, ಬಿಸಿಯೂಟ ಸಿಬ್ಬಂದಿ ಸೇರಿದಂತೆ ಅನೇಕ ಕಾರ್ಮಿಕ ಸಂಘಟನೆಯವರು ಪ್ರತಿಭಟನೆ ನಡೆಸಿದರು.

ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸೇರಿದ್ದ ವಿವಿಧ ಸಂಘಟನೆಗಳ ನೂರಾರು ಕಾರ್ಮಿಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿಗ್ಲಿ ನಾಕಾದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.

ವಿಠ್ಠಲ ನಾಯಕ ಮಾತನಾಡಿ ಬಂಡವಾಳಶಾಹಿಗಳ ಪರ ಕಾರ್ಯ ನಿರ್ವಹಿಸದೇ ದೇಶಕ್ಕೆ ಅನ್ನ ನೀಡುವ ಕಾರ್ಮಿಕರು, ಕೂಲಿಕಾರರು, ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಹಮಾಲರ ಸಂಘದ ಅಧ್ಯಕ್ಷ ಗೋವಿಂದಪ್ಪ ಶರಸೂರಿ, ಮಂಜುನಾಥ ಪೂಜಾರ, ಬಸಪ್ಪ ಗುದಗಿ, ಬಸಪ್ಪ ಕೆರೂರ, ಪಾರ್ವತಿ ಗಾಣಿಗೇರ, ಗ್ರಾಪಂ ಸಂಘದ ಅಧ್ಯಕ್ಷ ಬಸವರಾಜ ಅರ್ಕಸಾಲಿ, ಸುರೇಶ ಹಡಪದ, ಮಾಂತೇಶ ಕೂಲಕಾರ, ಸಿದ್ರಾಮಗೌಡ ಪಾಟೀಲ, ಅನ್ನಪೂರ್ಣ ಮಡಿವಾಳರ, ರಮೇಶ ಮರಾಠೆ, ಸವಿತಾ ಅಣ್ಣಿಗೇರಿ, ಬಸವರಾಜ ಮಲ್ಲಪ್ಪ ಗದ್ದಿ , ಶಿವಾಜಿ ಗಡದ, ಜುಂಜಪ್ಪ ಶೆರಸೂರಿ, ಸಿಂದೊಗೆಪ್ಪ ದುರಗಣ್ಣವರ ಇತರರು ಪಾಲ್ಗೊಂಡಿದ್ದರು.

ಬಂದ್‌ ನಿಂದಾಗಿ ಬಸ್‌ಗಳು ಸ್ಥಗಿತಗೊಂಡಿದ್ದರಿಂದ ವ್ಯಾಪಾರ ವಹಿವಾಟ ಕುಂಠಿತಗೊಂಡಿತ್ತು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಎಸ್‌ಬಿಐ ಸೇರಿ ಇತರೇ ಬ್ಯಾಂಕುಗಳು ಕಾರ್ಯ ನಿರ್ವಹಿಸಿದರೆ ಕೆನರಾ ಬ್ಯಾಂಕ್‌ ಕಾರ್ಯ ಸ್ಥಗಿತಗೊಳಿಸಿತ್ತು. ಎಪಿಎಂಸಿ, ಬಸ್‌, ಶಾಲಾ-ಕಾಲೇಜು, ಬ್ಯಾಂಗ್‌ ಬಂದ್‌ನಿಂದ ಜನಜೀವನ ಅಸ್ತವ್ಯಸ್ತವಾಯಿತು. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೂ ಸಿಬ್ಬಂದಿ ಕೊರತೆ ಇತ್ತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.

ಬಸ್‌ಗಳು ಇಲ್ಲದ್ದರಿಂದ ಖಾಸಗಿ ವಾಹನಗಳ ಸಂಚಾರ ಇತ್ತು.

ಇಂದು ಪ್ರತಿಭಟನೆ :

ಬುಧವಾರವೂ ಪ್ರತಿಭಟನೆ ಮುಂದುವರಿಯಲಿದ್ದು ಬೆಳಗ್ಗೆ ಪಟ್ಟಣದ ಪಂಪವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಾಗಿ ಹೊಸ ಬಸ್‌ ನಿಲ್ದಾಣದ ಹತ್ತಿರ ಸಭೆಯಾಗಿ ಮಾರ್ಪಡಲಿದೆ.ಬಳಿಕ ತಹಸೀಲ್ದಾರರಿಗೆ ಸಂಘಟನೆಗಳ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸಂಘಟನೆ ಪ್ರಮುಖ ಗೋವಿಂದಪ್ಪ ಶರಸೂರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ