ಆ್ಯಪ್ನಗರ

ವ್ಯಸನ ಮುಕ್ತ ಸಮಾಜ ನಿರ್ಮಿಸಿ

ಲಕ್ಷ್ಮೇಶ್ವರ : ಪಾಲಕರು ಮಕ್ಕಳ ಎದುರಿನಲ್ಲಿಯೇ ತಂಬಾಕು ಸೇವನೆಯಂತಹ ಅಪಾಯಕಾರಿ ದುಶ್ಚಟಗಳನ್ನು ಮಾಡುತ್ತಿರುವದರಿಂದ ಅದು ಮಕ್ಕಳು ಮೇಲೆ ದುಷ್ಚಪರಿಣಾಮ ಬೀರುತ್ತಿದೆ ಎಂದು ನ್ಯಾಯಾಧೀಶ ಪ್ರತಾಪ್‌ ಕುಮಾರ ಎನ್‌.ಹೇಳಿದರು.

Vijaya Karnataka 1 Jun 2019, 5:00 am
ಲಕ್ಷ್ಮೇಶ್ವರ : ಪಾಲಕರು ಮಕ್ಕಳ ಎದುರಿನಲ್ಲಿಯೇ ತಂಬಾಕು ಸೇವನೆಯಂತಹ ಅಪಾಯಕಾರಿ ದುಶ್ಚಟಗಳನ್ನು ಮಾಡುತ್ತಿರುವದರಿಂದ ಅದು ಮಕ್ಕಳು ಮೇಲೆ ದುಷ್ಚಪರಿಣಾಮ ಬೀರುತ್ತಿದೆ ಎಂದು ನ್ಯಾಯಾಧೀಶ ಪ್ರತಾಪ್‌ ಕುಮಾರ ಎನ್‌.ಹೇಳಿದರು.
Vijaya Karnataka Web GDG-31LXR02
ಲಕ್ಷ್ಮೇಶ್ವರದ ಪುರಸಭೆ ಸಭಾಭವನದಲ್ಲಿ ನಡೆದ ವಿಶ್ವತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ
ಪ್ರತಾಪ್‌ ಕುಮಾರ ಎನ್‌. ಮತನಾಡಿದರು.


ಪಟ್ಟಣದ ಪುರಸಭೆ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷ ಣ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಪುರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು. ಸಧೃಢ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕು. ಆದರೆ ಶಾಲಾ-ಕಾಲೇಜು ಹಂತದಲ್ಲಿಯೇ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ದುದೈರ್‍ವದ ಸಂಗತಿ ಎಂದರು.

ಮುಖ್ಯ ಅತಿಥಿ ತಹಸೀಲ್ದಾರ ಭ್ರಮಾರಾಂಬ ಗುಬ್ಬಿಶೆಟ್ಟಿ ಮಾತನಾಡಿ, ತಂಬಾಕು ಸೇವನೆ ಇಂದು ಫ್ಯಾಷನ್‌ ಆಗಿ ಪರಿವರ್ತನೆಯಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಬಲಿಯಾಗಿದ್ದು, ಈ ಹಾವಳಿಯನ್ನು ನಿಯಂತ್ರಿಸದಿದ್ದರೆ. ರೋಗಗ್ರಸ್ಥ ಯುವಕರ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

ಡಾ.ಚಂದ್ರು ಲಮಾಣಿ ಹಾಗೂ ನ್ಯಾಯಾವಾದಿ ಮಹೇಶ ಹಾರೋಗೇರಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಎಸ್‌.ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು.

ಕ್ಷೇತ್ರ ಶಿಕ್ಷ ಣಾಧಿಕಾರಿ ವಿ.ವಿ.ಸಾಲಿಮಠ, ಡಾ.ಶ್ರೀಕಾಂತ ಕಾಟೇವಾಲೆ, ಎಂ.ಎ.ರಾಜಾಪೂರ, ಎಂ.ಎಸ್‌.ಬೆಂತೂರ, ಆನಂದ ಬದಿ, ಎನ್‌.ಐ.ಬೆಲ್ಲದ, ವಿ.ಎಸ್‌.ಪಶುಪತಿಹಾಳ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ