ಆ್ಯಪ್ನಗರ

ಬೆಂಕಿಗಾಹುತಿಯಾದ ವಾಯುವ್ಯ ಸಾರಿಗೆ ಬಸ್: ಪ್ರಯಾಣಿಕರು ಪಾರು

ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ವಾಯುವ್ಯ ಸಾರಿಗೆ ಬಸ್ ಹೊತ್ತಿ ಉರಿದ ಘಟನೆ ಗೋವಾದ ಪೋಂಡಾ ಬಳಿ ನಡೆದಿದೆ.

Vijaya Karnataka Web 4 Jul 2018, 10:27 am
ಗದಗ: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ವಾಯುವ್ಯ ಸಾರಿಗೆ ಬಸ್ ಹೊತ್ತಿ ಉರಿದ ಘಟನೆ ಗೋವಾದ ಪೋಂಡಾ ಬಳಿ ನಡೆದಿದೆ.
Vijaya Karnataka Web ಬೆಂಕಿಗಾಹುತಿಯಾದ ವಾಯುವ್ಯ ಸಾರಿಗೆ ಬಸ್


ಗದಗ ಜಿಲ್ಲೆ ಮುಂಡರಗಿ ಡಿಪೋ ಸಂಬಂಧಿಸಿದ ಬಸ್ ಇದಾಗಿದ್ದು. ರಾತ್ರಿ 10 ರ ವೇಳೆಗೆ ಪಣಜಿಯಿಂದ ಮುಂಡರಗಿ ಕಡೆಗೆ ಬರುತ್ತಿದ್ದ ಬಸ್ಸಿಗೆ ಪೋಂಡಾ ಬಳಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಇಡೀ ಬಸ್ಸನ್ನು ಆಕ್ರಮಿಸಿದ್ದು, ನೋಡು ನೋಡುತ್ತಲೇ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.

ಬೆಂಕಿ ಹತ್ತುತ್ತಿದ್ದಂತೆ ಬಸ್ ನಿಲ್ಲಿಸಿದ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿದಿದ್ದಾರೆ. ಆದರೆ ಅಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ