ಆ್ಯಪ್ನಗರ

ಬಸ್‌ ಡಿಕ್ಕಿ :ಮಗು ಸಾವು

ನರಗುಂದ : ಸವದತ್ತಿ ಎಲ್ಲಮ್ಮನ ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ ಟಂಟಂ ಮತ್ತು ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮಗುವೊಂದು ಸಾವನ್ನಪ್ಪಿ ಯುವಕ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

Vijaya Karnataka 24 Jan 2019, 5:00 am
ನರಗುಂದ : ಸವದತ್ತಿ ಎಲ್ಲಮ್ಮನ ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ ಟಂಟಂ ಮತ್ತು ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮಗುವೊಂದು ಸಾವನ್ನಪ್ಪಿ ಯುವಕ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
Vijaya Karnataka Web bus collision child death
ಬಸ್‌ ಡಿಕ್ಕಿ :ಮಗು ಸಾವು


ನರಗುಂದ ಚಿಕ್ಕನರಗುಂದ ಕ್ರಾಸ್‌ ಬಳಿ ಈಘಟನೆ ನಡೆದಿದ್ದು ವಿಜಯಪೂರ ಜಿಲ್ಲೆಯ ಕೊರ್ತಿಕೋಲಾರದ ಏಳು ವರ್ಷದ ಆಕಾಶ ರಂಗಪ್ಪ ಮಾದರ ಎಂಬ ಮಗು ಟಂಟಂ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಅದೇ ಊರಿನ ಇನ್ನೊಬ್ಬ ಯುವಕ ಲಕ್ಷ ್ಮಣ ಹನಮಂತ ಕುದರಿ(22) ಸ್ಥಿತಿ ಚಿಂತಾಜನಕವಾಗಿದ್ದು ನರಗುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಾಗಲಕೋಟಗೆ ಕಳುಹಿಸಿಕೊಡಲಾಯಿತು. ಚಿಕ್ಕನರಗುಂದ, ಆಚಮಟ್ಟಿ ಕ್ರಾಸ್‌ ಬಳಿ 7ರಿಂದ 8 ಜನರನ್ನು ತುಂಬಿದ್ದ ಟಂಟಂಗೆ ಡಿಕ್ಕಿ ಹೊಡೆದ ಬಸ್‌ ನಾಮತ್ತೆಯಾಗಿದೆ. 108 ವಾಹನದಲ್ಲಿ ಗಾಯಾಳುಗಳನ್ನು ಸಾಗಿಸಲಾಯಿತು. ಅಪಘಾತಕ್ಕೆ ಕಾರಣವಾದ ಕೆಎಸ್‌ಆರ್‌ಟಿಸಿ ಬಸ್‌ ಪತ್ತೆಯಾಗಿಲ್ಲ. ಈ ಕುರಿತು ನರಗುಂದ ಪೊಲೀಸರು ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ