ಆ್ಯಪ್ನಗರ

ಶಿರಹಟ್ಟಿಗೆ ಬಸ್‌ ಡೀಪೊ : ವಿಜಯೋತ್ಸವ

ಶಿರಹಟ್ಟಿ : ಶಿರಹಟ್ಟಿ ತಾಲೂಕು ಕೇಂದ್ರ ಸ್ಥಾಪನೆಯಾದಾಗಿನಿಂದಲೂ ಸಹ ಸಾರಿಗೆ ಘಟಕ ಇಲ್ಲದಿರುವುದಕ್ಕೆ ಪಟ್ಟಣದ ಸ್ಥಳೀಯ ಕುಂದುಕೊರತೆ ನಿವಾರಣೆ ಸಮಿತಿ, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಶನಿವಾರ ನೆಹರು ವೃತ್ತ, ಮಹಾತ್ಮಾಗಾಂಧಿ ವೃತ್ತಗಳಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು.

Vijaya Karnataka 9 Jun 2019, 5:00 am
ಶಿರಹಟ್ಟಿ : ಶಿರಹಟ್ಟಿ ತಾಲೂಕು ಕೇಂದ್ರ ಸ್ಥಾಪನೆಯಾದಾಗಿನಿಂದಲೂ ಸಹ ಸಾರಿಗೆ ಘಟಕ ಇಲ್ಲದಿರುವುದಕ್ಕೆ ಪಟ್ಟಣದ ಸ್ಥಳೀಯ ಕುಂದುಕೊರತೆ ನಿವಾರಣೆ ಸಮಿತಿ, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಶನಿವಾರ ನೆಹರು ವೃತ್ತ, ಮಹಾತ್ಮಾಗಾಂಧಿ ವೃತ್ತಗಳಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು.
Vijaya Karnataka Web GDG-8SHT2
ಶಿರಹಟ್ಟಿಗೆ ಸಾರಿಗೆ ಘಟಕ ಸ್ಥಾಪನೆಗೆ ಸರಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ, ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಶನಿವಾರ ವಿಜಯೋತ್ಸವ ಆಚರಿಸಿದರು


ನಂತರ ಮಾತನಾಡಿದ ಸ್ಥಳೀಯ ಕುಂದುಕೊರತೆ ನಿವಾರಣೆ ಸಮಿತಿ ಅಧ್ಯಕ್ಷ ಅಕ್ಬರಸಾಬ ಯಾದಗಿರಿ,ಮಾಜಿ ಅಧ್ಯಕ್ಷ ಎಸ್‌.ಪಿ. ಹಾವೇರಿಮಠ, ಬಸ್‌ ಘಟಕ ಪ್ರಾರಂಭಿಸುವಂತೆ ಸಮಿತಿಯಿಂದ ಸತತ 30ದಿನಗಳ ಕಾಲ ಸುದೀರ್ಘ ಹೋರಾಟ ಮಾಡಲಾಗಿತ್ತು.ಅದಕ್ಕೆ ಅಂದಿನ ಸರಕಾರ ಸಾರಿಗೆ ಘಟಕ ನಿರ್ಮಾಣಕ್ಕೆ ಜಮೀನು ಖರೀದಿಸಿತ್ತು. ಇದೀಗ ಘಟಕ ಕಾರಾರ‍ಯರಂಭವಾಗುವುದಕ್ಕೆ ಎನ್‌ಡಬ್ಲ್ಯುಕೆಆರ್‌ಟಿಸಿ ಸಂಸ್ಥೆ ಅಧ್ಯಕ್ಷ ಶಿವರಾಮ ಹೆಬ್ಬಾರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಚಾಲಕ-ನಿರ್ವಾಹಕರ ನೇಮಕಾತಿ ಹಾಗೂ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಡೀಪೋ ಸ್ಥಾಪನೆಗೆ ಸರಕಾರ ಅಸ್ತು ನೀಡಿದೆ ಎಂದು ಹೇಳಿರುವುದಕ್ಕೆ ನಮ್ಮ ಹೋರಾಟಕ್ಕೆ ಪ್ರತಿಫಲ ಸಿಗುವುದರ ಜತೆಗೆ ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.

ಶ್ರೀನಿವಾಸ ಬಾರಬಾರ, ಚನ್ನವೀರಪ್ಪ ಕಲ್ಯಾಣಿ, ಶಿವಾನಂದ ಸಾಮ್ರಾಟ, ರಾಮಣ್ಣ ಕಂಬಳಿ, ಶ್ರೀನಿವಾಸ ಕಪಟಕರ, ಮುನ್ನಾ ಢಾಲಾಯತ, ಸಂಜೀವ ಹಸರಡ್ಡಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ