ಆ್ಯಪ್ನಗರ

ವ್ಯಾಪಾರ ಕಲಿತ ಮಕ್ಕಳು

ಲಕ್ಷ್ಮೇಶ್ವರ : ಶಹರ ಮತ್ತು ಪಟ್ಟಣದಲ್ಲಿ ಸಂತೆ ನಡೆಯುತ್ತವೆ ಆದರೆ ಶಾಲಾ ಆವರಣದಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗಿದ್ದು ಕಂಡು ಬಂದಿತ್ತು. ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಟೊಮೆಟೊ, ಆಲೂಗಡ್ಡೆ, ಸೊಪ್ಪು, ಎಲ್ಲ ಇದೆ. ತಗೊಳ್ಳಿ ಅಮ್ಮಾ ತಿಪಟೂರ ತೆಂಗಿನಕಾಯಿ, ಸೌತೆಕಾಯಿ ಎಳೆ ಸೌತೆಕಾಯಿ...ತಗೊಳ್ಳಣ್ಣಾ ಬಿಸಿ ಬಿಸಿ ಬಜ್ಜಿ ವಡೆ 11 ರೂ.ಗೆ ನಾಲ್ಕು...ಬನ್ನಿ ಸಾರ್‌ ಎಂದು ಮಕ್ಕಳು ಕರೆಯುತ್ತಿದ್ದರು.

Vijaya Karnataka 14 Feb 2019, 5:00 am
ಲಕ್ಷ್ಮೇಶ್ವರ : ಶಹರ ಮತ್ತು ಪಟ್ಟಣದಲ್ಲಿ ಸಂತೆ ನಡೆಯುತ್ತವೆ ಆದರೆ ಶಾಲಾ ಆವರಣದಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗಿದ್ದು ಕಂಡು ಬಂದಿತ್ತು. ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಟೊಮೆಟೊ, ಆಲೂಗಡ್ಡೆ, ಸೊಪ್ಪು, ಎಲ್ಲ ಇದೆ. ತಗೊಳ್ಳಿ ಅಮ್ಮಾ ತಿಪಟೂರ ತೆಂಗಿನಕಾಯಿ, ಸೌತೆಕಾಯಿ ಎಳೆ ಸೌತೆಕಾಯಿ...ತಗೊಳ್ಳಣ್ಣಾ ಬಿಸಿ ಬಿಸಿ ಬಜ್ಜಿ ವಡೆ 11 ರೂ.ಗೆ ನಾಲ್ಕು...ಬನ್ನಿ ಸಾರ್‌ ಎಂದು ಮಕ್ಕಳು ಕರೆಯುತ್ತಿದ್ದರು.
Vijaya Karnataka Web GDG-10LXR03A
ಲಕ್ಷ್ಮೇಶ್ವರ ತಾಲೂಕಿನ ಬಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ನಿಮಿತ್ತ ನಡೆದ ಮಕ್ಕಳ ಸಂತೆ ನಡೆಯಿತು.


ಇದು ತಾಲೂಕಿನ ಬಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲೆ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸಂತೆಯಲ್ಲಿ ಕಂಡು ಬಂದಿತ್ತು. ಮಕ್ಕಳು ಸಂತೆ ಕಟ್ಟಿರುವುದಕ್ಕೆ ಗ್ರಾಮಸ್ಥರಿಗೆ ಅಚ್ಚರಿಯಾಯಿತು. ಗ್ರಾಮಸ್ಥರು ಶಾಲೆ ಆವರಣದಲ್ಲಿ ಬಂದು ನೋಡಿದಾಗ ಗೊತ್ತಾಗಿದ್ದು ಇದು ಮಕ್ಕಳ ಸಂತೆ ಎಂದು ಅಚ್ಚರಿಯಿಂದ ನೋಡಿ ಇದು ಕೆಜಿಗೆ ಎಷ್ಟು ಎಂದು ಮಕ್ಕಳನ್ನು ಕೇಳುತ್ತಿದ್ದರು. ಮಕ್ಕಳ ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿ, ಹೂವು, ಸಿಹಿ-ತಿನಿಸುಗಳು, ತೆಂಗಿನಕಾಯಿ, ಹಣ್ಣುಗಳು, ಕಾಫಿ, ಟೀ, ಕಡಲೇಪುರಿ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಮಕ್ಕಳು ಗ್ರಾಮಸ್ಥರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರ ವೃತ್ತಿನಿರತ ವ್ಯಾಪಾರಸ್ಥರನ್ನು ನಾಚಿಸುವಂತಿತ್ತು. ಮಕ್ಕಳ ಸಂತೆಗೆ ಗ್ರಾಮಸ್ಥರು ಬುಟ್ಟಿ, ಚೀಲವನ್ನು ಹಿಡಿದುಕೊಂಡು ಮಕ್ಕಳ ಸಂತೆಗೆ ಬಂದು ವ್ಯಾಪಾರ ಮಾಡುತ್ತಿದ್ದರು.

ತರಕಾರಿ ಚೆನ್ನಾಗಿವೆ. ಸೊಪ್ಪು ಚೆನ್ನಾಗಿದೆ. ವ್ಯಾಪಾರ ಮಾಡಿ ಎಂಬ ಮಕ್ಕಳ ಕೂಗು ಶಾಲೆ ಆವರಣದಲ್ಲಿ ಸಂತೆಯ ವಾತವರಣ ಸೃಷ್ಟಿಸಿತ್ತು. ಮಕ್ಕಳು ದೊಡ್ಡವರು, ಶಿಕ್ಷ ಕರು ಎಲ್ಲರೂ ಮಕ್ಕಳು ಮಾರಾಟ ಮಾಡುತ್ತಿದ್ದ ವಿವಿಧ ಸಾಮಗ್ರಿಗಳನ್ನು ಚೌಕಾಸಿ ಮಾಡಿ ಖರೀದಿಸಿ ಸಂತಸಪಟ್ಟರು.ಸಾವಕ್ಕ ತಾಮ್ರಗುಂಡಿಮಠ, ಎ.ಎಂ.ಮಠದ, ಎಸ್‌.ಕೆ.ಅಮ್ಮಿನಭಾವಿ, ಬಿ.ಎಂ.ಕುಂಬಾರ, ಎಸ್‌.ವಿ.ಕನೋಜ್‌, ಮಹಾಂತೇಶ ಬಡಿಗೇರ, ಮಲ್ಲಿಕಾರ್ಜುನ ಉಪ್ಪಿನ, ಎಸ್‌,ಬಿ.ಉಪ್ಪಿನ, ಡಿ.ಎಚ್‌.ಪಾಟೀಲ್‌, ಸತೀಶ ಬೋಮಲೆ, ಎನ್‌.ಆರ್‌.ಸಾತಪುತೆ, ವಿ.ವಿ.ಗೊಲ್ಲರ್‌, ಜಿ.ಎಸ್‌.ಗುಡಗೇರಿ, ಎಮ್‌.ಎಸ್‌.ಹಿರೇಮಠ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ