ಆ್ಯಪ್ನಗರ

ಎಪಿಎಂಸಿಯಿಂದ ಖರೀದಿ ನಡೆಯಲಿ

ಗದಗ : ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ರೈತರ ಉತ್ಪನ್ನಗಳನ್ನು ಭಾವಾಂತರ ಯೋಜನೆಯಲ್ಲಿ ಎಪಿಎಂಸಿ ಮೂಲಕ ನಡೆಯಲಿ ಎಂದು ಸೋಮವಾರ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸುರಕೋಡ ಹಾಗೂ ಎಪಿಎಂಸಿ ಉಪ ಸಮಿತಿ ಚೇರ್ಮನ್‌ ಸಂಗಮೇಶ ದುಂದೂರ ನೇತೃತ್ವದ ನಿಯೋಗ ಜಿಲ್ಲಾಡಳಿತ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.

Vijaya Karnataka 15 Jan 2019, 5:00 am
ಗದಗ : ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ರೈತರ ಉತ್ಪನ್ನಗಳನ್ನು ಭಾವಾಂತರ ಯೋಜನೆಯಲ್ಲಿ ಎಪಿಎಂಸಿ ಮೂಲಕ ನಡೆಯಲಿ ಎಂದು ಸೋಮವಾರ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸುರಕೋಡ ಹಾಗೂ ಎಪಿಎಂಸಿ ಉಪ ಸಮಿತಿ ಚೇರ್ಮನ್‌ ಸಂಗಮೇಶ ದುಂದೂರ ನೇತೃತ್ವದ ನಿಯೋಗ ಜಿಲ್ಲಾಡಳಿತ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.
Vijaya Karnataka Web buy from apmc
ಎಪಿಎಂಸಿಯಿಂದ ಖರೀದಿ ನಡೆಯಲಿ


ರಾಜ್ಯ ಸರಕಾರ ಈಚೆಗೆ ಅಳವಡಿಸಿರುವ ಆಯ್ದ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಪ್ರಕ್ರಿಯೇ ರೈತರು, ವ್ಯಾಪಾರಸ್ಥರಿಗೆ, ಕೂಲಿ ಕಾರ್ಮಿಕರಿಗೆ, ತಳಗಾಳಿನವರಿಗೆ, ಚಕ್ಕಡಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದ್ದು, ಭಾವಾಂತರ ಯೋಜನೆ ಜಾರಿ ಮಾಡಿ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮೂಲಕ ಮಾರಾಟ ಮಾಡಿಸಿ, ಬೆಲೆ ವ್ಯತ್ಯಾಸವನ್ನು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಪೂರೈಕೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಿಗೆ ನಿಯೋಗ ಮನವಿ ಸಲ್ಲಿಸಿತು.

ಗದಗ ಎಪಿಎಂಸಿ ಖರೀದಿ ವರ್ತಕರ ಸಂಘದ ಅಧ್ಯಕ್ಷ ಶೇಖಣ್ಣ ಗದ್ದಿಕೇರಿ, ಗೌರವ ಕಾರ್ಯದರ್ಶಿ ರಾಘವೇಂದ್ರ ಕಾಲವಾಡ ಮತ್ತು ದಲಾಲ ವರ್ತಕರ ಸಂಘದ ಅಧ್ಯಕ್ಷ ಎಚ್‌.ಆರ್‌. ಶಹಪುರ, ಗೌರವ ಕಾರ್ಯದರ್ಶಿ ಸಿ.ಪಿ. ಹುಣಸಿಕಟ್ಟಿ ಹಾಗೂ ಗದಗ ಖರೀದಿ ವರ್ತಕರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ