ಆ್ಯಪ್ನಗರ

ರಂಗೋಲಿಯಲ್ಲಿ ಅರಳಿದ ಗಣಿತ ಲೆಕ್ಕ

ಡಂಬಳ : ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳ ಶಿಕ್ಷ ಣ ಗುಣಮಟ್ಟ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 8ನೇ ತರಗತಿ ಮಕ್ಕಳಿಗೆ ಓದು, ಬರಹ, ಮಗ್ಗಿ ಮಾಸ ಆಚರಣೆ ತಂದಿದ್ದು, ರಚನಾತ್ಮಕ ಕಲಿಕೆಗಳಿಂದ 120ರ ವರೆಗೆ ಮಗ್ಗಿಗಳನ್ನು, ಲೇಕ್ಕ ಪರಿಣಿತರಾಗಿರುವ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವುದರ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕ್ಷೇತ್ರ ಶೀಕ್ಷ ಣಾಧಿಕಾರಿ ಎಸ್‌.ಎನ್‌.ಹಳ್ಳಿಗುಡಿ ಹೇಳಿದರು.

Vijaya Karnataka 25 Feb 2019, 5:00 am
ಡಂಬಳ : ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳ ಶಿಕ್ಷ ಣ ಗುಣಮಟ್ಟ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 8ನೇ ತರಗತಿ ಮಕ್ಕಳಿಗೆ ಓದು, ಬರಹ, ಮಗ್ಗಿ ಮಾಸ ಆಚರಣೆ ತಂದಿದ್ದು, ರಚನಾತ್ಮಕ ಕಲಿಕೆಗಳಿಂದ 120ರ ವರೆಗೆ ಮಗ್ಗಿಗಳನ್ನು, ಲೇಕ್ಕ ಪರಿಣಿತರಾಗಿರುವ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವುದರ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕ್ಷೇತ್ರ ಶೀಕ್ಷ ಣಾಧಿಕಾರಿ ಎಸ್‌.ಎನ್‌.ಹಳ್ಳಿಗುಡಿ ಹೇಳಿದರು.
Vijaya Karnataka Web GDG-24DML1A
ಡೋಣಿ ಗ್ರಾಮದ ಸಿಬಿಜಿ ಸರಕಾರಿ ಫ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚಾರಣೆ ಅಂಗವಾಗಿ ಗಣಿತ ಕಾರ್ಯಾಗಾರದಲ್ಲಿ ರಂಗೋಲಿಯಲ್ಲಿ ಅರಳಿದ ಗಣಿತದ ಆಯಾಮಗಳು.


ಸಮೀಪದ ಡೋಣಿ ಗ್ರಾಮದ ಸಿಬಿಜಿ ಸರಕಾರಿ ಫ್ರೌಡ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಗಣಿತ ಕಲಿಕಾ ಮಟ್ಟ ಸುಧಾರಿಸಲು ಶ್ರಮಿಸಿದ ಶಿಕ್ಷ ಕರ ಕಾರ್ಯವನ್ನು ಶ್ಲಾಘಿಸಿ, ಒಂದು ಭೇಟಿ, ಒಂದು ಸ್ಥಳ, ಒಬ್ಬ ವ್ಯಕ್ತಿ, ಒಂದು ಮಾತು ಅದು ಬದಲಾವಣೆ ತರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಡಯಟ್‌ ಹಿರಿಯ ಉಪನ್ಯಾಸಕ ಆರ್‌.ಎಸ್‌.ಬುರಡಿ, ಶಂಕರ ಹಡಗಲಿ, ವಿ.ವಿ.ನಡುವಿನಮನಿ, ಜಯಶ್ರೀ ಏಕಬೋಟೆ ಮಾತನಾಡಿ, ಗಣಿತ ವಿಷಯವನ್ನು ಚಟುವಟಿಕೆ ಮೂಲಕ ಬೋಧಿಸಿದಾಗ ಮಕ್ಕಳಲ್ಲಿ ಕಲಿಕಾ ಮಟ್ಟ ಸುಧಾರಿಸಿ ಉನ್ನತ ಜ್ಞಾನ ಮತ್ತು ಅಂಕ ಪಡೆಯಲು ಸಫಲರಾಗಲು ಸಾಧ್ಯ. ಮಕ್ಕಳಿಗೆ ಗುರುವೃಂದ ಶೈಕ್ಷ ಣಿಕವಾಗಿ ಉತ್ತಮ ಮಟ್ಟದ ಶಿಕ್ಷ ಣ ನೀಡಿ ಮಕ್ಕಳು ಉನ್ನತ ಸ್ಥಾನಹೊಂದುವುದಕ್ಕೆ ಪೂರಕ ವಾತಾವರಣಕ್ಕಾಗಿ ಸಧಾ ಪ್ರಯತ್ನ ಶೀಲವುಳ್ಳ ಗುರುಗಳ ಸ್ಥಾನವು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ ಮಕ್ಕಳ ಶೈಕ್ಷ ಣಿಕ ಪ್ರಗತಿಗೆ ಗುರುಗಳು ಅಷ್ಟೇ ಅಲ್ಲದೆ ಪಾಲಕರ ಪಾತ್ರವು ಅಷ್ಟೇ ಮುಖ್ಯವಾಗಿದೆ ಎಂದರು.

ಮನೋಹರ ಆಲೆ ಮಾತನಾಡಿ, ಗಣಿತ ಕಾರ್ಯಾಗಾರದಿಂದ ಗಣಿತದ ಸ್ವಾರಸ್ಯಕರ ಲೆಕ್ಕಗಳನ್ನು ಹೇಳುವಲ್ಲಿ, ಮೋಜಿನ ಗಣಿತದಿಂದ ಬಹು ಜ್ಞಾನವಂತರಾಗಿದ್ದು ಜ್ಞಾನದ ಬುತ್ತಿ ಬಿಚ್ಚಿಟ್ಟ ಗುರುವೃಂದವು ಮಾಯಾ ಲೋಕವನ್ನೆ ಸೃಷ್ಟಿಸಿದ್ದು ಜೀವನದ ಮರೆಯಲಾಗದ ಕ್ಷ ಣ ಎಂದರು.

ಶಾಲಾ ಮೈದಾನದಲ್ಲಿ 11*11, 9*9, 7*7, ಮಾಯಾ ಚೌಕ, ಮೋಜಿನ ಗಣಿತ, ಕೊಠಡಿಗಳಲ್ಲಿ ಗಣಿತದ ವಿವಿಧ ಆಯಾಮಗಳನ್ನು ಬಣ್ಣ ಬಣ್ಣದ ರಂಗೋಲಿಯಲ್ಲಿ ಬಿಡಿಸಲಾಗಿತ್ತು. ವಿದ್ಯಾರ್ಥಿನಿಯರ ಹಸ್ತ ಮತ್ತು ಕೈಗಳು ಸೂತ್ರ ಹಾಗೂ ಚಿಹ್ನೆಗಳಿಂದ ಕೂಡಿದ್ದವು. 90, 100, 120ರ ವರೆಗೆ ಮಗ್ಗಿಗಳನ್ನು ಹೇಳುವ ವಿದ್ಯಾರ್ಥಿಗಳಿಂದ ಗಣಿತ ಲೋಕವನ್ನೆ ಸೃಷ್ಠಿಸಲಾಗಿತ್ತು

ಈಶಪ್ಪ ಓಲಿ, ಎಚ್‌.ಬಿ.ರೆಡ್ಡೇರ, ಆರ್‌.ಎಸ್‌.ಬದಾಮಿ, ವೈ.ಟಿ.ವಡ್ಡರ, ರಾಮಪ್ಪ ಪೂಜಾರ, ರವಿ ನಾಯಕ, ಎ.ವಿ. ಶಿವನಗೌಡರ, ವೈ.ಎಸ್‌.ಬೊಮ್ಮನಾಳ, ಬಿ.ಡಿ.ಮೇಗೂರ, ಪವಿತ್ರಾ.ಎಂ, ಉಮೇಶ ಗಂಗಾಪೂರ, ಎಚ್‌.ಎ.ಚಿಂತಗುಂಟಿ, ವೈ.ಎಸ್‌.ಬಮ್ಮನಾಳ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ