ಆ್ಯಪ್ನಗರ

ರಾಹುಲ್‌ ಪ್ರಚಾರಕ್ಕೆ ಕರೆದು ಗೆದ್ದು ತೋರಿಸಲಿ; ಈಶ್ವರಪ್ಪ ಸವಾಲು

ಸೋಮವಾರ ಇಲ್ಲಿ ನಡೆದ ಬಾಗಲಕೋಟ ಲೋಕಸಭಾ ಚುನಾವಣಾ ಪೂರ್ವ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ''ನಮ್ಮಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯನವರೇ ಈಗ ಅವರನ್ನೇ ಕರೆತಂದು ಸಿಎಂ ಮಾಡಿ ದುಸ್ಥಿತಿ ತಂದುಕೊಡ್ಡಿದ್ದಾರೆ'', ಎಂದು ಟೀಕಿಸಿದರು.

Vijaya Karnataka 19 Feb 2019, 8:48 am
ನರಗುಂದ (ಗದಗ): ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡದಂತಹ ದುರ್ಗತಿ ಕಾಂಗ್ರೆಸ್‌ ಪಕ್ಷ ಕ್ಕೆ ಬಂದಿದೆ. ರಾಹುಲ್‌ ಗಾಂಧಿ ಹೋದಲ್ಲೆಲ್ಲ ಸೋಲು ಕಂಡಿದ್ದಾರೆ. ಬಾಗಲಕೋಟ ಕ್ಷೇತ್ರದ ಮೇಲೆ ಪ್ರೀತಿಯಿದ್ದರೆ ರಾಹುಲ್‌ ಕರೆ ತಂದು ಪ್ರಚಾರ ನಡೆಸಿ ಗೆದ್ದು ತೋರಿಸಲಿ ನೋಡೋಣ ಎಂದು ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.
Vijaya Karnataka Web Eshwarappa


ಸೋಮವಾರ ಇಲ್ಲಿ ನಡೆದ ಬಾಗಲಕೋಟ ಲೋಕಸಭಾ ಚುನಾವಣಾ ಪೂರ್ವ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ''ನಮ್ಮಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯನವರೇ ಈಗ ಅವರನ್ನೇ ಕರೆತಂದು ಸಿಎಂ ಮಾಡಿ ದುಸ್ಥಿತಿ ತಂದುಕೊಡ್ಡಿದ್ದಾರೆ'', ಎಂದು ಟೀಕಿಸಿದರು.

''ಒಬ್ಬ ಸ್ವಯಂ ಘೋಷಿತ ಮಣ್ಣಿನಮಗ, ಇನ್ನೊಬ್ಬ ದಲಿತ ನಾಯಕ ಸಿದ್ದರಾಮಯ್ಯ. ಎಸ್‌ಐಟಿ ಅವರಪ್ಪನ ಆಸ್ತಿ ಅಂದುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಫೆ. 25 ರಂದು ಬಾಗಲಕೋಟದಲ್ಲಿ ನಡೆಯುವ ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ಜನಾಂಗದ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಕ್ತಿ ತೋರಿಸಬೇಕು'' ಎಂದು ಆ ಸಮುದಾಯಕ್ಕೆ ಕರೆ ನೀಡಿದರು.

''ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರನ್ನು ಕೊಲೆಗಡುಕ, ಕೋಮುವಾದಿ ಎಂದು ಆರೋಪಿಸುತ್ತಾರೆ. ಮುಸ್ಲಿಂ, ಕ್ರಿಶ್ಚಿಯನ್‌ ದೇಶಗಳು ಭಾರತ ಬೆಂಬಲಕ್ಕೆ ಬಂದಿರುವಾಗ ಮೋದಿ ಕೋಮುವಾದಿಯೆ?'' ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ