ಆ್ಯಪ್ನಗರ

ಮಾನವ ಸಂಪನ್ಮೂಲ ಸೇವಾ ಸಂಸ್ಥೆ ಏಜೆನ್ಸಿ ರದ್ದುಗೊಳಿಸಿ

ಗದಗ: ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ಸಲ್ಲಿಸುತ್ತಿರುವ ನೂರಾರು ಅರೆಕಾಲಿಕ ಸಿಬ್ಬಂದಿ ಸಂಭಾವನೆ ಪಾವತಿ ಮಾಡದ ಮಾನವ ಸಂಪನ್ಮೂಲ ಸೇವಾ ಸಂಸ್ಥೆ ಏಜೆನ್ಸಿ ರದ್ದುಗೊಳಿಸುವಂತೆ ಒತ್ತಾಯಿಸಿ ಜೈಭೀಮ ಸಂಘರ್ಷ ಸಮಿತಿಯಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿ ಸತೀಶ ಕುಮಾರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

Vijaya Karnataka 15 Jul 2020, 5:00 am
ಗದಗ: ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ಸಲ್ಲಿಸುತ್ತಿರುವ ನೂರಾರು ಅರೆಕಾಲಿಕ ಸಿಬ್ಬಂದಿ ಸಂಭಾವನೆ ಪಾವತಿ ಮಾಡದ ಮಾನವ ಸಂಪನ್ಮೂಲ ಸೇವಾ ಸಂಸ್ಥೆ ಏಜೆನ್ಸಿ ರದ್ದುಗೊಳಿಸುವಂತೆ ಒತ್ತಾಯಿಸಿ ಜೈಭೀಮ ಸಂಘರ್ಷ ಸಮಿತಿಯಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿ ಸತೀಶ ಕುಮಾರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
Vijaya Karnataka Web 14RUDRAGOUD5_25
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಹೊರಗುತ್ತಿಗೆ ಸಿಬ್ಬಂದಿ ಸಂಭಾವನೆ ಪಾವತಿ ಮಾಡದ ಮಾನವ ಸಂಪನ್ಮೂಲ ಸೇವಾ ಸಂಸ್ಥೆ
ಏಜೆನ್ಸಿ ರದ್ದುಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.


Üದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನೂರಾರು ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಜೀವ ಅಂಗೈಯಲ್ಲಿಹಿಡಿದು ಬೇರೆಯವರ ಪ್ರಾಣ ಉಳಿಸುವಲ್ಲಿಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಮಾತ್ರ ಕಳೆದ 6 ತಿಂಗಳಿನಿಂದ ಸಂಭಾವನೆ ನೀಡದೇ ಮಾನವ ಸಂಪನ್ಮೂಲ ಸೇವಾ ಸಂಸ್ಥೆ ಅವರಿಂದ ಹೆಚ್ಚಿನ ಸೇವೆ ಪಡೆಯುತ್ತಿದೆ. ರಾಜ್ಯ ಸರಕಾರ ಅನುದಾನ ಪಡೆದೆ ಹೊರಗುತ್ತಿಗೆ ಸಿಬ್ಬಂದಿ ಸೇವೆ ಪಡೆಯುವ ಮಾನವ ಸಂಪನ್ಮೂಲ ಸೇವಾ ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ನೀಡುವ ಪರವಾನಿಗೆ ನೀಡಬಾರದು, ಸರಕಾರದ ಅನುದಾನ ಯಾವಾಗದರೂ ಬರಬಹುದು, ಆದರೆ, ಸಂಸ್ಥೆ ನಂಬಿ ದುಡಿಯುವ ಸಿಬ್ಬಂದಿಗೆ ಮಾನವ ಸಂಪನ್ಮೂಲ ಸೇವಾ ಸಂಸ್ಥೆ ಸಂಭಾವನೆ ಮಾಡುವ ನಿಯಮಾವಳಿಯಿದೆ. ಆದರೆ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನೂರಾರು ಅರೆಕಾಳಿಕ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳುತ್ತಿರುವ ಮಾನವ ಸಂಪನ್ಮೂಲ ಸೇವಾ ಸಂಸ್ಥೆ ಅವರಿಗೆ ಸಂಭಾವನೆ ನೀಡದೇ ಸರಕಾರಿ ನಿಯಮ ಗಾಳಿಗೆ ತೂರಿದೆ ಎಂದು

ಸಂಭಾವನೆ ಪಾವತಿಗೆ ಕ್ರಮ ಕೂಗೊಳ್ಳಲು ಸೂಚಿಸಬೇಕು. ಇಲ್ಲದಿದ್ದರೇ ಜೈಭೀಮ ಸಂಘರ್ಷ ಸಮಿತಿ ವಿವಿಧ ದಲಿತ ಸಂಘಟನೆಗಳ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮನವಿಯಲ್ಲಿತಿಳಿಸಿದೆ.

ಅಶೋಕ ಎಂ.ಹಾದಿಮನಿ, ಶ್ರೀಕಾಂತ ಪೇರೂರ, ಶ್ರೀಧರ ಹುಯಿಲಗೋಳ, ಓಬಳೇಶ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ