ಆ್ಯಪ್ನಗರ

ಕನ್ನಡಪರ ಸಂಘಟನೆಗಳಿಂದ ಆಚರಣೆ

ಗಜೇಂದ್ರಗಡ : ಸ್ಥಳೀಯ ಕುಷ್ಟಗಿ ರಸ್ತೆಯ ಯಲಬುರ್ಗಾಕ್ಕೆ ತೆರಳುವ ಮಾರ್ಗದ ಕಿತ್ತೂರಾಣಿ ಚನ್ನಮ್ಮ ವೃತ್ತದಲ್ಲಿವಿವಿಧ ಕನ್ನಡ ಪರ ಸಂಘಟನೆಗಳ ಕಾರ‍್ಯಕರ್ತರು 64ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.

Vijaya Karnataka 2 Nov 2019, 5:00 am
ಗಜೇಂದ್ರಗಡ : ಸ್ಥಳೀಯ ಕುಷ್ಟಗಿ ರಸ್ತೆಯ ಯಲಬುರ್ಗಾಕ್ಕೆ ತೆರಳುವ ಮಾರ್ಗದ ಕಿತ್ತೂರಾಣಿ ಚನ್ನಮ್ಮ ವೃತ್ತದಲ್ಲಿವಿವಿಧ ಕನ್ನಡ ಪರ ಸಂಘಟನೆಗಳ ಕಾರ‍್ಯಕರ್ತರು 64ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.
Vijaya Karnataka Web 1GJD6_25
ಗಜೇಂದ್ರಗಡ ಕುಷ್ಟಗಿ ರಸ್ತೆಯ ಯಲಬುರ್ಗಾಕ್ಕೆ ತೆರಳುವ ಮಾರ್ಗದ ಕಿತ್ತೂರಾಣಿ ಚೆನ್ನಮ್ಮ ವೃತ್ತದಲ್ಲಿವಿವಿಧ ಕನ್ನಡ ಪರ ಸಂಘಟನೆಗಳ ಕಾರ‍್ಯಕರ್ತರು ಕನ್ನಡ ರಾಜ್ಯೋತ್ಸವ ಆಚರಿಸಿದರು.


ಚಾಣಕ್ಯ ನವಭಾರತ ನಿರ್ಮಾಣ ಸಮಿತಿ ಸಂಘಟನೆ ಗೌರವ ರಾಜ್ಯಾಧ್ಯಕ್ಷೆ ಮಂಜುಳಾ ಈಶ್ವರಪ್ಪ ರೇವಡಿ ಮಾತನಾಡಿ, ಕನ್ನಡ ಭಾಷೆಯು ತನ್ನದೇ ಆದ ಗತವೈಭವ ಹೊಂದಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಗಜೇಂದ್ರಗಡ ಪಿಎಸ್‌ಐ ಗುರುಶಾಂತಪ್ಪ ದಾಶ್ಯಾಳ, ಶರಣು ಪೂಜಾರ ಮಾತನಾಡಿದರು. ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ, ಶರಣಪ್ಪ ಚಳಗೇರಿ ಯಲ್ಲಪ್ಪ ಬಂಕದ, ಬಸವರಾಜ ಬಂಕದ, ಬಾಲು ರಾಥೋಡ್‌, ಬಸುರಾಜ್‌ ಹೊಸಮನಿ, ಮುದಿಯಪ್ಪ ಮುಧೋಳ್‌, ಬಾಷಸಾಬ್‌ ಕರ್ನಾಚಿ, ರಜಾಕ ಡಾಲಾಯತ, ಹೂವಾಜಿ ಚಂದುಕರ ಸೇರಿದಂತೆ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ