ಆ್ಯಪ್ನಗರ

ಶ್ರೀಮಂತಗಡದಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಶಿರಹಟ್ಟಿ : ಶಿರಹಟ್ಟಿ ತಾಲೂಕಿನ ಶಕ್ತಿದೇವತೆ ಎಂದೇ ಖ್ಯಾತಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರಿಗೆ ವೀರಖಡ್ಗ ನೀಡಿದ ಇತಿಹಾಸ ಹೊಂದಿರು ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ದೇವಸ್ಥಾನದಲ್ಲಿಭಾನುವಾರ ನವರಾತ್ರಿ ಉತ್ಸವದ ಮೊದಲನೆ ದಿನ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

Vijaya Karnataka 1 Oct 2019, 5:00 am
ಶಿರಹಟ್ಟಿ : ಶಿರಹಟ್ಟಿ ತಾಲೂಕಿನ ಶಕ್ತಿದೇವತೆ ಎಂದೇ ಖ್ಯಾತಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರಿಗೆ ವೀರಖಡ್ಗ ನೀಡಿದ ಇತಿಹಾಸ ಹೊಂದಿರು ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ದೇವಸ್ಥಾನದಲ್ಲಿಭಾನುವಾರ ನವರಾತ್ರಿ ಉತ್ಸವದ ಮೊದಲನೆ ದಿನ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.
Vijaya Karnataka Web 30SHT2_25
ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಹೊಳಲಮ್ಮದೇವಿ ದೇವಸ್ಥಾನದಲ್ಲಿಭಾನುವಾರ ನವರಾತ್ರಿ ಉತ್ಸವದ ಮೊದಲನೆ ದಿನ ಪ್ರವಚನ ನೀಡಿದ ದೋತರಗಾಂವನ ಚನ್ನಬಸವ ಸ್ವಾಮೀಜಿ ಹಾಗೂ ಪುರಾಣ ಪಠಣ ಮಾಡಿದ ಪ್ರಕಾಶ ಮೇಟಿ.


ಉತ್ಸವದ ಅಂಗವಾಗಿ ನಿತ್ಯವೂ ನಡೆಯುತ್ತಿರುವಂತಹ ಶ್ರೀದೇವಿಯ ಪುರಾಣವನ್ನು ಕಲಬುರ್ಗಿ ಜಿಲ್ಲೆಯ ದೋತರಗಾಂವನ ಚನ್ನಬಸವ ಸ್ವಾಮೀಜಿ ಹಾಗೂ ಶಿರಹಟ್ಟಿಯ ಪ್ರಕಾಶ ಮೇಟಿ ಪುರಾಣ ಪಠಣ ಮಾಡುತ್ತಾ, ಇಡೀ ಮನುಕುಲವನ್ನು ಉದ್ಧಾರ ಮಾಡುವುದಕ್ಕಾಗಿ ಆದಿಶಕ್ತಿ ಜಗನ್ಮಾತೆಯು ಲೋಕ ಕಂಟಕನಾಗಿ ಮೆರೆಯುತ್ತಿದ್ದಂತಹ ಮಹಿಷಾಸುರನನ್ನು ಸಂಹರಿಸಿ ಲೋಕ ಜನನಿಯಾಗಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುತ್ತಾ, ಬೇಡಿದವ ಇಷ್ಟಾರ್ಥ ಕರುಣಿಸುತ್ತಿದ್ದಾಳೆ. ಇಂತಹ ಮಹಾಮಹಿಮಳ ಕಥೆಯನ್ನು ಪ್ರತಿಯೊಬ್ಬರೂ ಆಲಿಸಿ ಕೃತಾರ್ಥರಾಗಬೇಕೆಂದು ಹೇಳಿದರು.

9ದಿನಗಳ ಕಾಲ ನಿರಂತರವಾಗಿ ನಡೆಯುವ ಈ ಪುರಾಣ ಪ್ರವಚನ ಕಾರ‍್ಯಕ್ರಮ ಸಂಜೆ 6ರಿಂದ ರಾತ್ರಿ 10ಗಂಟೆ ವರೆಗೂ ನಡೆಯುತ್ತದೆ. ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ನಿತ್ಯ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ