ಆ್ಯಪ್ನಗರ

ಸಂಭ್ರಮದ ದುರ್ಗಾದೇವಿ ರಥೋತ್ಸವ

ಲಕ್ಕುಂಡಿ : ಇಲ್ಲಿಯ ಸಮೀಪದ ತಿಮ್ಮಾಪುರದ ನೂತನ ದುರ್ಗಾದೇವಿ ರಥೋತ್ಸವ ಮಂಗಳವಾರ ಸಂಜೆ ಸಾವಿರಾರು ಭಕ್ತರ ಮದ್ಯೆ ಜರುಗಿತು. ದೇವಸ್ಥಾನದಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ವಿವಿಧ ವಾಧ್ಯ ಮೇಳದೊಂದಿಗೆ ರಥೋತ್ಸವ ಸಾಗಿತು. ಭಕ್ತರು ದುರ್ಗಾಮಾತಾ ಕೀ ಜೈ, ಉಧೋ, ಉಧೋ ಎಂದು

Vijaya Karnataka 6 Jun 2019, 5:00 am
ಲಕ್ಕುಂಡಿ : ಇಲ್ಲಿಯ ಸಮೀಪದ ತಿಮ್ಮಾಪುರದ ನೂತನ ದುರ್ಗಾದೇವಿ ರಥೋತ್ಸವ ಮಂಗಳವಾರ ಸಂಜೆ ಸಾವಿರಾರು ಭಕ್ತರ ಮದ್ಯೆ ಜರುಗಿತು.
Vijaya Karnataka Web GDG-5LKD2
ಲಕ್ಕುಂಡಿ ಸಮೀಪದ ತಿಮ್ಮಾಪುರದಲ್ಲಿ ದುರ್ಗಾದೇವಿ ರಥೋತ್ಸವ ಸಂಭ್ರಮದಿಂದ ಜರುಗಿತು.

ದೇವಸ್ಥಾನದಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ವಿವಿಧ ವಾಧ್ಯ ಮೇಳದೊಂದಿಗೆ ರಥೋತ್ಸವ ಸಾಗಿತು. ಭಕ್ತರು ದುರ್ಗಾಮಾತಾ ಕೀ ಜೈ, ಉಧೋ, ಉಧೋ ಎಂದು ಘೋಷ ಕೂಗುತ್ತ ತೇರನ್ನು ಎಳೆದರು. ಹರ್ಲಾಪುರ ಕೊಟ್ಟೂರೇಶ್ವರ ಸ್ವಾಮೀಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಪೂರ್ವ ಮುಂಜಾನೆ ಗಂಗಾ ಪೂಜೆ ಸಲ್ಲಿಸಿದ ನಂತರ ವಿಧಿ ವಿಧಾನಗಳೊಂದಿಗೆ ಅಗ್ನಿ ಪ್ರವೇಶ ಕಾರ್ಯಕ್ರಮ ನೆರವೇರಿತು.

ನಂತರ ಮಧ್ಯಾಹ್ನ ನಡೆದ ಸಾಮೂಹಿಕ ಕಾರ್ಯಕ್ರಮವನ್ನು ಪುರಸಭೆ ಸದಸ್ಯ ಮಿಥುನ್‌ ಪಾಟೀಲ ಉದ್ಘಾಟಿಸಿದರು. ಡಿಎಸ್‌ಎಸ್‌ ರಾಜ್ಯಧ್ಯಕ್ಷ ರಾದ ಎಸ್‌.ಎನ್‌.ಬಳ್ಳಾರಿ, ಗ್ರಾಪಂ ಅಧ್ಯಕ್ಷೆ ರೇಣವ್ವ ಸೋಮಾಪೂರ, ಉಪಾಧ್ಯಕ್ಷ ಯಲ್ಲಪ್ಪ ಬಾಬರಿ, ಹಾಗೂ ಗ್ರಾ.ಪಂ ಸದಸ್ಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ