ಆ್ಯಪ್ನಗರ

ಪ್ರಮಾಣಪತ್ರ ಯಥಾಸ್ಥಿತಿ ಮುಂದುವರಿಸಿ

ಮುಂಡರಗಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿವಿದ್ಯಾರ್ಥಿಗಳು ಪಾಲಕರು ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಅಲೆದಾಡಿಸುವ ಬದಲು ಕಳೆದ ವರ್ಷದ ಆದಾಯ ಪ್ರಮಾಣ ಪತ್ರವನ್ನೇ ಮುಂದುವರಿಸುವಂತೆ ಸರಕಾರ ಆದೇಶಿಸಬೇಕು ಎಂದು ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆಗ್ರಹಿಸಿದರು.

Vijaya Karnataka 26 May 2020, 5:00 am
ಮುಂಡರಗಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿವಿದ್ಯಾರ್ಥಿಗಳು ಪಾಲಕರು ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಅಲೆದಾಡಿಸುವ ಬದಲು ಕಳೆದ ವರ್ಷದ ಆದಾಯ ಪ್ರಮಾಣ ಪತ್ರವನ್ನೇ ಮುಂದುವರಿಸುವಂತೆ ಸರಕಾರ ಆದೇಶಿಸಬೇಕು ಎಂದು ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆಗ್ರಹಿಸಿದರು.
Vijaya Karnataka Web certificate status continue
ಪ್ರಮಾಣಪತ್ರ ಯಥಾಸ್ಥಿತಿ ಮುಂದುವರಿಸಿ


ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ಬಸ್‌ ಅನಾನುಕೂಲತೆ, ಗುಂಪುಗೂಡುವುದು ಸೇರಿದಂತೆ ಅನೇಕ ತೊಂದರೆಗಳನ್ನು ವಿದ್ಯಾರ್ಥಿಗಳು, ಪಾಲಕರು ಅನುಭವಿಸುತ್ತಿದ್ದಾರೆ. ಹೀಗಾಗಿ ಶಾಲೆ, ಕಾಲೇಜುಗಳಲ್ಲಿಕಳೆದ ವರ್ಷದ ಆದಾಯ ಪ್ರಮಾಣಪತ್ರದ ಮೇಲೆ ಪ್ರವೇಶ ಇತರ ಕೆಲಸಕ್ಕೆ ಅನ್ವಯ ಮಾಡಿಕೊಳ್ಳಬೇಕು. ಈ ಬಗ್ಗೆ ಕಂದಾಯ ಸಚಿವ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದರು.

ಕಪ್ಪತಗುಡ್ಡದಲ್ಲಿಗಣಿಗಾರಿಕೆ ಬೇಡ: ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಿದ್ದು ಇಲ್ಲಿನ ನೈಸರ್ಗಿಕ ಸಂಪತ್ತು ಉಳಿಯಲು ಗಣಿಗಾರಿಕೆ ಬೇಡ ಎಂದರು.

ಬಿಜೆಪಿ ವಿಫಲ ಆಡಳಿತ: ಸರಕಾರ ಕೊರೊನಾ ಲಾಕ್‌ ಡೌನ್‌ ಹಿನ್ನೆಲೆಯಲ್ಲಿಅನೇಕ ತೊಂದೆಗೊಳಗಾದ ವೃತ್ತಿಯವರಿಗೆ ಸಹಾಯಧನ ನೀಡಲಾಗುವುದು ಎಂದು ಹೇಳಿದರೂ ಎಲ್ಲಿಯೂ ಸಮರ್ಪಕವಾಗಿ ಹಣ ಬಂದಿಲ್ಲ. ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ. ಹೂವು,ತೋಟಗಾರಿಕೆ ಬೆಳೆಗಾರರಿಗೆ ಸಹಾಯಧನ ಇಲ್ಲ. ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಸರಿಯಾದ ವೇತನ ನೀಡಿಲ್ಲಎಂದು ಆರೋಪಿಸಿದರು.

ಶಿರಹಟ್ಟಿ ಮತಕ್ಷೇತ್ರದಲ್ಲಿಜನಪ್ರತಿನಿಧಿಗಳಿಂದ ಅಭಿವೃದ್ಧಿ ಕೆಲಸ ನಡೆದಿಲ್ಲ. ಜನರ ನಿರೀಕ್ಷೆ ತಕ್ಕ ಕೆಲಸವಾಗಿಲ್ಲ. ಜಾಲವಾಡಗಿ, ಇಟಗಿ, ಸಾಸಲವಾಡ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿದೆ. ಮೈಕ್ರೋ ಇರಿಗೇಷನ್‌ ಪೂರ್ಣಗೊಂಡಿಲ್ಲ ಎಂದರು.

ಲಕ್ಷೇಶ್ವರದಲ್ಲಿ60 ಎಕರೆ, ಮುಂಡರಗಿಯಲ್ಲಿ25 ಎಕರೆ, ಶಿರಹಟ್ಟಿಯಲ್ಲಿ10 ಎಕರೆ ತಾವು ಶಾಸಕರಾಗಿದ್ದಾಗ ಆಶ್ರಯ ಮನೆಗಳಿಗೆ ಖರೀದಿಸಿದ ಜಾಗೆಯಲ್ಲಿಇನ್ನು ನಿವೇಶನ ಮಾಡಿ ಫಲಾನುಭವಿಗಳಿಗೆ ವಿತರಿಸಿಲ್ಲಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ