ಆ್ಯಪ್ನಗರ

ಹೊಳೆಆಲೂರಿನಲ್ಲಿ ಬಾಲಕಾರ್ಮಿಕರು ವಶಕ್ಕೆ

ಹೊಳೆಆಲೂರ : ಮಕ್ಕಳನ್ನು ಶಾಲೆಗೆ ಕಳಿಸದೇ ಅವರನ್ನು ದುಡಿಮೆಗೆ ತೊಡಗಿಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಈ ಬಗ್ಗೆ ಪಾಲಕರು ಹಾಗೂ ಕೆಲಸ ಮಾಡಿಸಿಕೊಳ್ಳುವವರು ಎಚ್ಚರದಿಂದ ಇರಬೇಕು ಇಲ್ಲವಾದಲ್ಲಿ ಶಿಕ್ಷೆ ಹಾಗೂ ದಂಡ ತಪ್ಪಿದ್ದಲ್ಲ ಎಂದು ಕಾರ್ಮಿಕ ಇಲಾಖೆ ನಿರೀಕ್ಷ ಕಿ ಸಂಗೀತಾ ಬೆನಕೊಪ್ಪ ಹೇಳಿದರು.

Vijaya Karnataka 1 May 2019, 5:00 am
ಹೊಳೆಆಲೂರ : ಮಕ್ಕಳನ್ನು ಶಾಲೆಗೆ ಕಳಿಸದೇ ಅವರನ್ನು ದುಡಿಮೆಗೆ ತೊಡಗಿಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಈ ಬಗ್ಗೆ ಪಾಲಕರು ಹಾಗೂ ಕೆಲಸ ಮಾಡಿಸಿಕೊಳ್ಳುವವರು ಎಚ್ಚರದಿಂದ ಇರಬೇಕು ಇಲ್ಲವಾದಲ್ಲಿ ಶಿಕ್ಷೆ ಹಾಗೂ ದಂಡ ತಪ್ಪಿದ್ದಲ್ಲ ಎಂದು ಕಾರ್ಮಿಕ ಇಲಾಖೆ ನಿರೀಕ್ಷ ಕಿ ಸಂಗೀತಾ ಬೆನಕೊಪ್ಪ ಹೇಳಿದರು.
Vijaya Karnataka Web child labor detained in holealur
ಹೊಳೆಆಲೂರಿನಲ್ಲಿ ಬಾಲಕಾರ್ಮಿಕರು ವಶಕ್ಕೆ


ಅವರು ಹೊಳೆಆಲೂರಿನಲ್ಲಿ ಗದುಗಿನ ಮಕ್ಕಳ ಸಹಾಯವಾಣಿ ಕೇಂದ್ರ, ಕಾರ್ಮಿಕ ಇಲಾಖೆ, ಸ್ಥಳೀಯ ಆರಕ್ಷ ಕ ಠಾಣೆ ಪೊಲೀಸರ ನೇತೃತ್ವದಲ್ಲಿ ಹೊಟೆಲ್‌, ಎಗ್‌ ರೈಸ್‌ ಅಂಗಡಿ, ಐಸ್ಕ್ರೀಮ್‌ ಮಾರಾಟ ಮಾಡುವವರು ಮುಂತಾದ ಕಡೆ ಭೇಟಿ ನೀಡಿ ಅಲ್ಲಿ ಅಪ್ರಾಪ್ತ ಮಕ್ಕಳು ಕೆಲಸ ಮಾಡುವುದನ್ನು ಪತ್ತೆ ಹಚ್ಚಿ ವಿಚಾರಣೆಯಲ್ಲಿ ಈ ಕುರಿತು ಮಾತನಾಡಿದರು.

ಗದುಗಿನ ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ಸೂರಜ್‌ ಮಾಯೇಕರ ಮಾತನಾಡಿ, ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ ಎಂದರು. ಹಠಾತ್‌ ಭೇಟಿ ಸಂದರ್ಭದಲ್ಲಿ ವರ್ಧನ, ಅಜಯಕುಮಾರ, ಸಾದಿಕ್‌, ಪ್ರವೀಣ, ಬಸವರಾಜ ಎಂಬ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಗದಗಕ್ಕೆ ಕರೆದುಕೊಂಡು ಹೋದರು.

ಇಲಾಖೆಯ ಬಿ.ಎಫ್‌. ಬಂತಿ, ಸಹಾಯವಾಣಿ ಕೇಂದ್ರದ ಶಿವಾನಂದ ಹೊಸಳ್ಳಿ, ಆರಕ್ಷ ಕ ಠಾಣೆಯ ವಿ. ಎಸ್‌. ಹುಲ್ಲೂರ, ಹೆರಕಲ್ಲ, ಎಂ.ವಿ. ಅಲ್ಲಿಪುರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ