ಆ್ಯಪ್ನಗರ

ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಕಳಂಕ

ರೋಣ : ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿದ ಕಳಂಕ. ಬಡತನ, ನಿರುದ್ಯೋಗ ಇತರ ಕಾರಣಗಳಿಂದ ಸಮಾಜದಲ್ಲಿ ಈ ಪದ್ಧತಿ ಬೇರೂರಿದೆ.ಆದ್ದರಿಂದ ಸರಕಾರ ಬಡತನ ಹೋಗಲಾಡಿಸಲು ಆಹಾರ ಭದ್ರತೆ, ಉದ್ಯೋಗ ಸೃಷ್ಠಿ ಸೇರಿದಂತೆ ಹಲವು ಯೋಜನೆ ಜಾರಿಗೊಳಿಸಿದೆ ಎಂದು ನ್ಯಾಯಾಧೀಶರಾದ ವಿ.ನಾಗಮಣಿ ಹೇಳಿದರು.

Vijaya Karnataka 13 Jun 2019, 5:00 am
ರೋಣ : ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿದ ಕಳಂಕ. ಬಡತನ, ನಿರುದ್ಯೋಗ ಇತರ ಕಾರಣಗಳಿಂದ ಸಮಾಜದಲ್ಲಿ ಈ ಪದ್ಧತಿ ಬೇರೂರಿದೆ.ಆದ್ದರಿಂದ ಸರಕಾರ ಬಡತನ ಹೋಗಲಾಡಿಸಲು ಆಹಾರ ಭದ್ರತೆ, ಉದ್ಯೋಗ ಸೃಷ್ಠಿ ಸೇರಿದಂತೆ ಹಲವು ಯೋಜನೆ ಜಾರಿಗೊಳಿಸಿದೆ ಎಂದು ನ್ಯಾಯಾಧೀಶರಾದ ವಿ.ನಾಗಮಣಿ ಹೇಳಿದರು.
Vijaya Karnataka Web GDG-12 RON 2
ರೋಣ ಅಂಜುಮನ್‌ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದಲ್ಲಿ ನ್ಯಾ.ನಾಗಮಣಿ ಮಾತನಾಡಿದರು.


ಅವರು ಬುಧವಾರ ಪಟ್ಟಣದ ಅಂಜಮನ್‌ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆ, ತಾಲೂಕು ವಕೀಲರ ಸಂಘ, ಅಂಜುಮನ್‌ ಶಿಕ್ಷ ಣ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಗೆ ಉಚಿತ ಶಿಕ್ಷ ಣ, ಬಾಲ ಕಾರ್ಮಿಕರಿಗಾಗಿ ವಿಶೇಷ ಶಾಲೆ, ಕಡ್ಡಾಯ ಶಿಕ್ಷ ಣ ಸೇರಿ ಕೈಗೊಂಡ ಸೌಲಭ್ಯ ಬಳಕೆ ಮಾಡಿಕೊಳ್ಳುವ ಮೂಲಕ ಬಾಲ ಕಾರ್ಮಿಕ ಪದ್ಧತಿ ಮುಕ್ತ ಸಮಾಜ ನಿರ್ಮಾಣವಾಗಬೇಕು. ಸಾರ್ವಜನಿಕರು ಬಾಲ ಕಾರ್ಮಿಕ ಪದ್ಧತಿಯ ವಿರುದ್ದ ಧ್ವನಿ ಎತ್ತಬೇಕು ಎಂದರು.

ಬಾಲಕರನ್ನು ದುಡಿಮೆಗೆ ಹಚ್ಚಿದರೆ ಅವರ ಮನಸ್ಸು ಹಾಗೂ ದೇಹದ ಮೇಲೆ ದುಷ್ಪರಿಣಾಮ ಬೀರಲಿದೆ. 14 ವರ್ಷದೋಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಗ್ರಾಮೀಣ ಭಾಗದಲ್ಲಿ ಒತ್ತಡ ಪರಿಸ್ಥಿತಿ, ಆರ್ಥಿಕ ಸಮಸ್ಯೆಯಿಂದ ಮಕ್ಕಳನ್ನು ದುಡಿಮೆಗೆ ಹಚ್ಚುವುದರಿಂದ ವಿಧ್ಯಾಭ್ಯಾಸದಿಂದ ವಂಚಿತರಾಗುತ್ತಾರೆ ಎಂದರು.

ಬಿಇಒ ನಂಜುಂಡಯ್ಯ ಮಾತನಾಡಿ, ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುವ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಇಂದಿಗೂ ಸಹ ಮಕ್ಕಳನ್ನು ದುಡಿಮೆಗೆ ಸೇರಿಸುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಶಿಕ್ಷ ಣದಿಂದ ಮಾತ್ರ ಈ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸಾಧ್ಯ. ಬಾಲ ಕಾರ್ಮಿಕ ಪದ್ಧತಿಯಿಂದ ಹಲವು ಮಕ್ಕಳು ಶಿಕ್ಷ ಣದಿಂದ ದೂರ ಉಳಿಯುವಂತಾಗುತ್ತಿದೆ. ಇದರ ಬಗ್ಗೆ ಶಿಕ್ಷ ಣ ಇಲಾಖೆ ಸಾಕಷ್ಟು ಯೋಜನೆ ರೂಪಿಸುವ ಮೂಲಕ ಅಂತಹ ವಿದ್ಯಾರ್ಥಿಗಳ ಶಿಕ್ಷ ಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ಶಿಕ್ಷ ಕ ಆರ್‌.ವೈ.ಬೇನಹಾಳ ಮಾತನಾಡಿದರು.ಎನ್‌.ವಿ.ಹಿರೇಮಠ, ವಿ.ಡಿ.ಪಾವಸ್ಕರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ