ಆ್ಯಪ್ನಗರ

ಮಕ್ಕಳ ಲೈಂಗಿಕ ಕಿರುಕುಳ ವಾಸ್ತವಿಕತೆ-ವಿಚಾರ ಗೋಷ್ಠಿ

ಗದಗ: ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ, ಗದಗ ಐಎಂಎ ಹಾಗೂ ಐಎಂಎ ಮಹಿಳಾ ಘಟಕದ ಆಶ್ರಯದಲ್ಲಿ ಆ.22 ರಂದು ಸಂಜೆ 6ಕ್ಕೆ ನಗರದ ಐಎಂಎ ಸಭಾಂಗಣದಲ್ಲಿ ಮಕ್ಕಳ ಲೈಂಗಿಕ ಕಿರುಕುಳ ವಾಸ್ತವಿಕತೆ ಕುರಿತು ವಿಚಾರ ಗೋಷ್ಠಿ ನಡೆಯಲಿದೆ.

Vijaya Karnataka 21 Aug 2019, 5:00 am
ಗದಗ: ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ, ಗದಗ ಐಎಂಎ ಹಾಗೂ ಐಎಂಎ ಮಹಿಳಾ ಘಟಕದ ಆಶ್ರಯದಲ್ಲಿ ಆ.22 ರಂದು ಸಂಜೆ 6ಕ್ಕೆ ನಗರದ ಐಎಂಎ ಸಭಾಂಗಣದಲ್ಲಿ ಮಕ್ಕಳ ಲೈಂಗಿಕ ಕಿರುಕುಳ ವಾಸ್ತವಿಕತೆ ಕುರಿತು ವಿಚಾರ ಗೋಷ್ಠಿ ನಡೆಯಲಿದೆ.
Vijaya Karnataka Web child sexual abuse realism symposium
ಮಕ್ಕಳ ಲೈಂಗಿಕ ಕಿರುಕುಳ ವಾಸ್ತವಿಕತೆ-ವಿಚಾರ ಗೋಷ್ಠಿ


ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶೃತಿಭಾವಿ ಪಾಟೀಲ ಅವರು ಮಕ್ಕಳ ಲೈಂಗಿಕ ಕಿರುಕುಳ ಹೇಗೆ ಗುರುತಿಸಬೇಕು ? ವಿಷಯವಾಗಿ ಉಪನ್ಯಾಸ ನೀಡುವರು. ಮಕ್ಕಳ ಲೈಂಗಿಕ ಕಿರುಕುಳದ ವಿಷಯವಾಗಿ ನಡೆಯುವ ಚರ್ಚೆಯಲ್ಲಿ ಡಾ.ತಬಸುಮ್‌ ಸೋಲಾಪೂರ, ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಭಾರತಿ ಶೆಟ್ಟರ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಸೋಮಶೇಖರ ಬಿಜ್ಜಳ, ಮಕ್ಕಳ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಡಾ.ಶ್ರೀನಿವಾಸ ಆರೇರ, ವಿಧಿ ವಿಜ್ಞಾನ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಮ್ಯಾಗೇರಿ ತಮ್ಮ ವಿಚಾರ ಮಂಡಿಸುವರು. ಐಎಂಎ ಅಧ್ಯಕ್ಷ ಡಾ.ಧನೇಶ ದೇಸಾಯಿ, ಡಾ.ಶರಣು ಆಲೂರ ಆಗಮಿಸುವರು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಶೃತಿಭಾವಿ ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ