ಆ್ಯಪ್ನಗರ

ಮಕ್ಕಳು, ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಲಿ

ಶಿರಹಟ್ಟಿ : ಎಲ್ಲಪೌಷ್ಟಿಕ ಯೋಜನೆಗಳನ್ನು ಒಗ್ಗೂಡಿಸುವುದೇ ಪೋಷಣಾ ಅಭಿಯಾನ ಕಾರ‍್ಯಕ್ರಮ. ಮುಂದಿನ 3 ವರ್ಷಗಳಲ್ಲಿ0-6 ವರ್ಷದ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕ ಸ್ಥಿತಿಯನ್ನು ನಿರ್ಧಿಷ್ಟ ಅವಧಿಗೆ ಅನುಗುಣವಾಗಿ ಸುಧಾರಿಸುವುದು ಈ ಯೋಜನೆಯ ಉದ್ದೇಶ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವಿನಾಶ ಗೋಡಕಿಂಡಿ ಹೇಳಿದರು.

Vijaya Karnataka 21 Sep 2019, 5:00 am
ಶಿರಹಟ್ಟಿ : ಎಲ್ಲಪೌಷ್ಟಿಕ ಯೋಜನೆಗಳನ್ನು ಒಗ್ಗೂಡಿಸುವುದೇ ಪೋಷಣಾ ಅಭಿಯಾನ ಕಾರ‍್ಯಕ್ರಮ. ಮುಂದಿನ 3 ವರ್ಷಗಳಲ್ಲಿ0-6 ವರ್ಷದ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕ ಸ್ಥಿತಿಯನ್ನು ನಿರ್ಧಿಷ್ಟ ಅವಧಿಗೆ ಅನುಗುಣವಾಗಿ ಸುಧಾರಿಸುವುದು ಈ ಯೋಜನೆಯ ಉದ್ದೇಶ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವಿನಾಶ ಗೋಡಕಿಂಡಿ ಹೇಳಿದರು.
Vijaya Karnataka Web 524419SHT2_25
ಬೆಳ್ಳಟ್ಟಿ ಗ್ರಾಮದಲ್ಲಿ ಗರ್ಭಿಣಿ,ಬಾಣಂತಿ, ತಾಯಂದಿರು,ಸ್ತ್ರೀಶಕ್ತಿ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದಂತಹ ಪೋಷಣೆ ಅಭಿಯಾನದಲ್ಲಿಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವಿನಾಶ ಗೋಡಕಿಂಡಿ ಮಾತನಾಡಿದರು.


ಅವರು ತಾಲೂಕಿನ ಬೆಳ್ಳಟ್ಟಿಯಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗರ್ಭಿಣಿ,ಬಾಣಂತಿ, ತಾಯಂದಿರು,ಸ್ತ್ರೀಶಕ್ತಿ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಪೋಷಣೆ ಅಭಿಯಾನದಲ್ಲಿಮಾತನಾಡಿದರು.

ಈ ಯೋಜನೆಗೆ ಪ್ರಧಾನಿ ಮೋದಿ ಅವರು ಮಾರ್ಚ್ 2018ರಲ್ಲಿಯೇ ಚಾಲನೆ ನೀಡಿದ್ದಾರೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಫಲಾನುಭವಿಗಳಾದ 0-6 ವರ್ಷದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರ ಆರೋಗ್ಯ ಹಾಗೂ ಪೌಷ್ಟಿಕತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಈ ಯೋಜನೆ ಕೇವಲ ಫಲಾನುಭವಿಗಳಿಗೆ ಮಾತ್ರ ಸಿಮೀತಗೊಳ್ಳದೆ ಈ ಬಗ್ಗೆ ಮಾಹಿತಿ, ಶಿಕ್ಷಣ, ಸಂವಹನ ಮೂಲಕ ಜನಾಂದೋಲನ ಹಾಗೂ ಸಮುದಾಯ ಆಧಾರಿತ ಚಟುವಟಿಕೆಗಳನ್ನು ವಿವಿಧ ವೇದಿಕೆಗಳಲ್ಲಿವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡು ಸಮುದಾಯದ ಪ್ರತಿಯೊಬ್ಬರಿಗೂ ಆರೋಗ್ಯ ಹಾಗೂ ಪೌಷ್ಟಿಕತೆ ಮಹತ್ವದ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ.

ಈ ಅಪೌಷ್ಟಿಕ ಸಮಸ್ಯೆ ಹೋಗಲಾಡಿಸುವ ಸಲುವಾಗಿ 1000 ದಿನಗಳ ಕಾಳಜಿ ಹಾಗೂ ಆರೈಕೆಯನ್ನು ಕೇಂದ್ರೀಕರಿಸುವ ಮೂಲಕ ಗರ್ಭಾವಸ್ಥೆಯಿಂದ ಹೆರಿಗೆಯಾದ 6 ತಿಂಗಳವರೆಗಿನ ಅವಧಿಯಲ್ಲಿಹೆಚ್ಚು ಗಮನ ಹರಿಸಿ ಸರಿಯಾದ ಸಮಯದಲ್ಲಿಸರಿಯಾದ ಚಿಕಿತ್ಸೆ ಹಾಗೂ ಮಾರ್ಗದರ್ಶನವು ಪ್ರತಿಯೊಬ್ಬ ಫಲಾನುಭವಿಗಳಿಗೂ ದೊರೆಯುವಂತೆ ಇಲಾಖೆಯು ಕಾರ‍್ಯಕ್ರಮಗಳನ್ನು ರೂಪಿಸಲಾಗಿದೆ. ಈ ಬಗ್ಗೆ ಸ್ಥಳೀಯ ಮಟ್ಟದ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗೆ ಸೂಕ್ತ ತರಬೇತಿ ಹಮ್ಮಿಕೊಂಡಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಫಕ್ಕೀರವ್ವ ಬಾವಳ್ಳಿ, ಜಿಪಂ ಸದಸ್ಯೆ ರೇಖಾ ಅಳವಂಡಿ, ಸದಸ್ಯರಾದ ಅಕ್ಕಮಹಾದೇವಿ ಕೆ.ಎಚ್‌., ಶಿವನಗೌಡ ಪಾಟೀಲ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಮಂಜವ್ವ ಬಾಲೇಹೊಸೂರ, ಮಲ್ಲವ್ವ ವಳಗೇರಿ, ಡಾ: ರಶ್ಮಿ ಪಾಟೀಲ, ಶೋಭಾ ತೇಗುರ, ಮಂಜುಳಾ ಕಮತ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ