ಆ್ಯಪ್ನಗರ

ಮಕ್ಕಳು ಹೊಸ ಆವಿಷ್ಕಾರ ಕಲಿಯಲು ಸಾಧ್ಯ

ಬೆಳ್ಳಟ್ಟಿ: ನನ್ನ ಶಾಲೆಯ ದಿನಗಳಲ್ಲಿ ನಾ ಕಂಡ ಪ್ರಯೋಗಾಲಯದ ಕನಸು ಇಂದು ನನಸಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಅಳವಂಡಿ ಹೇಳಿದರು.

Vijaya Karnataka 12 Jul 2019, 5:00 am
ಬೆಳ್ಳಟ್ಟಿ: ನನ್ನ ಶಾಲೆಯ ದಿನಗಳಲ್ಲಿ ನಾ ಕಂಡ ಪ್ರಯೋಗಾಲಯದ ಕನಸು ಇಂದು ನನಸಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಅಳವಂಡಿ ಹೇಳಿದರು.
Vijaya Karnataka Web GDG-11 BLT 1


ಗ್ರಾಮದ ಭೀಮರಡ್ಡಿ ಫ ಅಳವಂಡಿ ಶಾಲೆಯಲ್ಲಿ ನೀತಿ ಆಯೋಗ ಅಟಲ್‌ ಇನ್ನೋವೇಶನ್‌ ಮೀಶನ್‌ ಅಡಿ ಸ್ಥಾಪಿಸಲಾದ ಅಟಲ್‌ ಟಿಂಕರಿಂಗ್‌ ಲ್ಯಾಬೋರೇಟರಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರೌಢ ಶಾಲೆಯ ದಿನಗಳಲ್ಲಿಯೇ ವಿಜ್ಞಾನ ಕುರಿತು ಮಾಹಿತಿ ಹಾಗೂ ಜ್ಞಾನ ನೀಡುವ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿರುವುದು ಹೆಮ್ಮೆಯ ವಿಷಯ. ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಜ್ಞಾನ ಸಂಪಾದಿಸಿ ದೇಶದ ಆಸ್ತಿಯಾದಾಗ ಈ ಯೋಜನೆಗೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.

ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಹಾಗೂ ಮೋಹನ ಗುತ್ತೆಮ್ಮನ್ನವರ ಮಾತನಾಡಿ ಅಟಲ್‌ ಟಿಂಕರಿಂಗ್‌ ಲ್ಯಾಬೋರೇಟರಿ ಪ್ರಾರಂಭವಾಗಿದ್ದರಿಂದ ಇಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳು ನಾವು ವಿಜ್ಞಾನಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ. ಇಲ್ಲಿ ಸೇರಿರುವ ಮಕ್ಕಳು ನಮ್ಮ ಭಾಷಣಕ್ಕಿಂತ ಲ್ಯಾಬ್‌ಒಳಗೆ ಪ್ರವೇಶಿಸಲು ಕಾತುರರಾಗಿ ಕುಳಿತಂತೆ ಕಾಣುತ್ತದೆ. ಪಠ್ಯದ ವಿಷಯ ಹೊರತುಪಡಿಸಿ ಮಕ್ಕಳು ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರ ಕಲಿಯಲು ಮತ್ತು ಅನುಭವಿಸಲು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ ಎಂದರು.

ಪ್ರಯೋಗಾಲಯ ನಿರ್ದೇಶಕರಾದ ಮಹಮ್ಮದ ಅಜರುದ್ದಿನ ಹಾಗೂ ವರ್ಷಾರಾಣಿ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಆಗಲೇ ಅನೇಕ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿ ಬಂದ ಅತಿಥಿಗಳಿಗೆ ಆ ಮಾದರಿಗಳ ಕುರಿತು ವಿವರಣೆ ನೀಡಿದರು. ಅವುಗಳಲ್ಲಿ ವಿಶೇಷವಾಗಿ ಮದ್ಯ ವ್ಯಸನಿಗಳು ವಾಹನ ಚಲಾಯಿಸದಂತೆ ತಡೆಯುವ ಮಾದರಿ. ಅದನ್ನು ವಾಹನದಲ್ಲಿ ಜೋಡಿಸಿದರೆ ಮದ್ಯ ವ್ಯಸನಿಗಳು ಕೀ ಹಾಕಿದಾಗ ವಾಹನದ ಎಂಜಿನ್‌ ಪ್ರಾರಂಭವಾಗುವ ಬದಲು ಬೀಪ್‌ ಶಬ್ದ ಬರುವ ರೀತಿ ಇದೆ. ಇದು ಎಲ್ಲರ ಗಮನ ಸೆಳೆಯಿತು.

ಗ್ರಾಪಂ ಅಧ್ಯಕ್ಷೆ ಫಕೀರವ್ವಾ ಬಾವಳ್ಳಿ, ಬಸವನಗೌಡಾ ಹ್ಯಾಟಿ, ಯಮನುರ ನದಾಫ, ರವಿ ಗುಂಜಿಕರ್‌, ಎಮ್‌.ಕೆ.ಲಮಾಣಿ, ತಿಮ್ಮರಡ್ಡಿ ಅಳವಂಡಿ, ಎಮ್‌.ಎ.ಮಕಾಂದಾರ, ಗಿರಿಷ ಕೊಡಬಾಳ, ಬಸವಾರಜ ಪಾಟೀಲ್‌, ಮುಖ್ಯೊಪಾಧ್ಯಾಯರಾದ ಅಶೋಕ ಇಚ್ಚಂಗಿ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ