ಆ್ಯಪ್ನಗರ

ಮಕ್ಕಳಿಗೆ ಕಾನೂನು ಅರಿವು ಅಗತ್ಯ

ಮುಳಗುಂದ: ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಆಗುವುದರಿಂದ ಅವರಿಗೆ ಕಾನೂನು ಅರಿವು ಮೂಡಿಸುವುದು ಅಗತ್ಯ ಎಂದು ಮುಳಗುಂದ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವರಾಜ ದರಿಗೋಣ ಹೇಳಿದರು.

Vijaya Karnataka 26 Aug 2019, 5:00 am
ಮುಳಗುಂದ: ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಆಗುವುದರಿಂದ ಅವರಿಗೆ ಕಾನೂನು ಅರಿವು ಮೂಡಿಸುವುದು ಅಗತ್ಯ ಎಂದು ಮುಳಗುಂದ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವರಾಜ ದರಿಗೋಣ ಹೇಳಿದರು.
Vijaya Karnataka Web GDG-25MUL 1


ಅವರು ಪಟ್ಟಣದ ಪೊಲೀಸ್‌ ಠಾಣೆಗೆ ಆಗಮಿಸಿದ ಕಣವಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ 8ನೇ ತರಗತಿಯ 42 ವಿದ್ಯಾರ್ಥಿಗಳು ಗದಗ ತಾಲೂಕು ಗ್ರಾಮೀಣ ವಲಯದಿಂದ ಪೊಲೀಸ್‌ ಕೆಡೆಟ್‌ ತರಬೇತಿಗೆ ಆಯ್ಕೆಯಾಗಿದ್ದು ಮಕ್ಕಳಿಗೆ ಪ್ರತಿ ಶನಿವಾರ ನಿಮ್ಮ ಶಾಲೆಗೆ ಎನ್‌ಸಿಸಿ ತರಹ ಸುಮಾರು 6 ತಿಂಗಳ ಕಾನೂನು ಅರಿವು,ಕಳ್ಳತನ, ಆತ್ಮಸಂರಕ್ಷ ಣೆ, ರಸ್ತೆ ಅಪಘಾತ, ಬಾಲ್ಯ ವಿವಾಹ, ಪೊಲೀಸ್‌ ಠಾಣೆ ಪರಿಚಯ,ಪೊಲೀಸ್‌ ನೇಮಕಾತಿ,ಕರ್ತವ್ಯ,ಎಫ್‌ಐಆರ್‌ ಹೀಗೆ ಮಕ್ಕಳಿಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಎಸ್‌ಐ ಎಸ್‌.ಎಚ್‌.ದೊಡ್ಡಮನಿ ಮಾತನಾಡಿ, ರಸ್ತೆಯಲ್ಲಿ ಅಪಘಾತವಾದಾಗ ಅದನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸುವುದನ್ನು ಬಿಟ್ಟು ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುವಂತಹ ಗುಣ ಅಳವಡಿಸಿಕೊಳ್ಳಬೇಕು ಎಂದರು.

ಹನುಮಂತಪ್ಪ ಕಲ್ಲಣ್ಣವರ ಮಾತನಾಡಿ, ತಂದೆ-ತಾಯಿಗಳು ಮತ್ತು ಗುರುಗಳು ನಿಮಗೆ ಪ್ರತ್ಯಕ್ಷ ದೇವರು ಅವರ ಮಾತನ್ನು ಯಾರೂ ಮೀರಬಾರದು ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಬೇಕೆಂದರು.

ಕಣವಿ ಪ್ರೌಢಶಾಲೆ ಶಿಕ್ಷ ಕ ಎಚ್‌.ಎಸ್‌.ಗಾರವಾಡ ಮಾತನಾಡಿ, ಪ್ರತಿ ಸಮಸ್ಯೆಗೂ ಪರಿಹಾರವಿದೆ ಎಂದರು.

ಎಚ್‌.ಬಿ.ಪಾಟೀಲ,ಹನುಮಂತಪ್ಪ ಕಲ್ಲಣ್ಣವರ,ಜಿ.ಬಿ.ಕುರ್ತಕೋಟಿ, ರವಿ ಕಟ್ಟಮನಿ, ಎಸ್‌.ಎಂ.ಕದಂ, ಶಿವಬಸವಣ್ಣವರ, ಎಚ್‌.ಎಸ್‌.ಗಾರವಾಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ