ಆ್ಯಪ್ನಗರ

ಮಕ್ಕಳಿಗೆ ಚುಚ್ಚುಮದ್ದು ಹಾಕಿಸುವುದು ಅಗತ್ಯ

ನರೇಗಲ್ಲ: ಸ್ಥಳೀಯ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿಬುಧವಾರ ಗಂಟಲುಬೇನೆ ರೋಗ ನಿರೋಧಕ ಮತ್ತು ನಂಜುರೋಗ ನಿರೋಧಕ ಚುಚ್ಚುಮದ್ದು ಕುರಿತಾಗಿ ಯುಕ್ಜೆಜಿ, ಒಂದನೇ ತರಗತಿ ಮಕ್ಕಳ ಪಾಲಕರ ಜಾಗೃತಿ ಪೂರ್ವಸಿದ್ಧತಾ ಸಭೆ ನಡೆಸಲಾಯಿತು.

Vijaya Karnataka 6 Dec 2019, 5:00 am
ನರೇಗಲ್ಲ: ಸ್ಥಳೀಯ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿಬುಧವಾರ ಗಂಟಲುಬೇನೆ ರೋಗ ನಿರೋಧಕ ಮತ್ತು ನಂಜುರೋಗ ನಿರೋಧಕ ಚುಚ್ಚುಮದ್ದು ಕುರಿತಾಗಿ ಯುಕ್ಜೆಜಿ, ಒಂದನೇ ತರಗತಿ ಮಕ್ಕಳ ಪಾಲಕರ ಜಾಗೃತಿ ಪೂರ್ವಸಿದ್ಧತಾ ಸಭೆ ನಡೆಸಲಾಯಿತು.
Vijaya Karnataka Web children need to be vaccinated
ಮಕ್ಕಳಿಗೆ ಚುಚ್ಚುಮದ್ದು ಹಾಕಿಸುವುದು ಅಗತ್ಯ


ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎ. ಡಿ. ಸಾಮುದ್ರಿ ಮಾತನಾಡಿ, ಮಕ್ಕಳ ಆರೋಗ್ಯದಕಡೆ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಹವಾಮಾನ ವೈಪರೀತ್ಯಗಳಲ್ಲಿವಿವಿಧ ರೋಗಾಣುಗಳು ಉಲ್ಬಣಗೊಳ್ಳುವುದರಿಂದ ಮಕ್ಕಳಿಗೆ ಚುಚ್ಚುಮದ್ದು ಹಾಕಿಸುವುದು ಅವಶ್ಯಕವಾಗಿದೆ. ನಂಜಾಣು ರೋಗ ಚುಚ್ಚುಮದ್ದು ಹಾಕಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮುಂದಿನ ರೋಗತಡೆಗಟ್ಟುವ ಸಾಮರ್ಥ್ಯ ಬಲಗೊಳ್ಳುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಚೇರಮನ್‌ ಡಾ. ಜಿ. ಕೆ. ಕಾಳೆ ಮಾತನಾಡಿ, ಕಾಲಕ್ಕನುಗುಣವಾಗಿ ಮಕ್ಕಳಲ್ಲಿರೋಗ ರುಜಿನಗಳು ಕಾಣಿಸಿಕೊಳ್ಳುವದು ಸಹಜ. ಅವುಗಳನ್ನು ತಡೆಗಟ್ಟುವ ಕಾರ್ಯದಲ್ಲಿಪಾಲಕರು ಜಾಗೃತಿವಹಿಸಿ ವೈದ್ಯರ ಸಲಹೆ ಪಡೆದು ರೋಗ ನಿರೋಧಕ ಲಸಿಕೆ ಹಾಕಿಸುವುದು ಎಲ್ಲಪಾಲಕರ ಆದ್ಯ ಕರ್ತವ್ಯವಾಗಿದೆ ಎಂದರು.

ಮುಖ್ಯೋಪಾಧ್ಯಾಯಿನಿ ಭಾರತಿ ಸಿರ್ಶಿ, ಡಾ. ನಿರ್ಮಲಾ ನಾಶಿಪುಡಿ, ಆರೋಗ್ಯ ಸಹಾಯಕ ಎಸ್‌. ಎಫ್‌. ಅಂಗಡಿ, ನಿವೃತ್ತ ಶಿಕ್ಷಕ ವಿ. ಎಸ್‌. ಕುಷ್ಟಗಿ, ಷಣ್ಮುಖಪ್ಪ ಸಿದ್ನೆಕೊಪ್ಪ ಹಾಗೂ ಬೂದಿಹಾಳ ಉಪಸ್ಥಿತರಿದ್ದರು. ಶಿಕ್ಷಕಿ ಮಲ್ಲಮ್ಮ ಸಿಳ್ಳಿನ್‌, ವಿಜಯಲಕ್ಷಿತ್ರ್ಮೕ ಜಾಧವ, ಪೂರ್ಣಿಮಾ ಅಂಗಡಿ, ಸುವರ್ಣಾ ಹಿರೇಮಠ, ಗೀತಾ ಬೆಳಗಾಂವಕರ, ವಿದ್ಯಾವತಿ ಗ್ರಾಮಪುರೋಹಿತ್‌, ಸಾವಿತ್ರಿ ಮಾನ್ವಿ, ಎಮ್‌. ಎಮ್‌. ಕಡೇತೋಟದ ಹಾಗೂ ಪಾಲಕರು ಪಾಲ್ಗೊಂಡಿದ್ದರು. ಕೆ. ಆಯ್‌ ಕೋಳಿವಾಡ ಸ್ವಾಗತಿಸಿದರು. ಆಯ್‌. ಬಿ. ವಂಟೆಲಿ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ